ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎನ್‌ ಜಯಚಂದ್ರನ್

ವಿಸಂಗತ

ಗಳ ಗಳ ಅತ್ತಂತೆ, ಕ್ಷಣವೇ ನಕ್ಕಂತೆ
ಕಾಲಮಾನ
ವಿಸಂಗತ
ತೊಯ್ದಾಟದ
ಯಾನ.

ಸರಮಾಲೆ ಕನಸಾಗಿ
ಮುತ್ತಬಹುದು!

ಮೈ ಚೆಲ್ಲಿದರೆ ಸಾಕು
ಮುಗಿ ಬೀಳುತ್ತದೆ ದಿಗಿಲು
ಭಯದ ಭುಗಿಲು.

ನಿನ್ನೆ ಸಂಜೆ ಸೇತುವೆಯ ಬಳಿ ಕಂಡ ಸಣಕಲು ದೇಹದ ಅಜ್ಜಿಯ
ಹಸಿವಿನ
ಕತೆ
ಬರ್ಬರ ಬದುಕಿನ
ಕೂಗು
ಕಾಳಿ ತೀರದಲ್ಲಿ.
ತಾಳೆಯಾಗದು
ಉಸಿರಿನ ಲೆಕ್ಕಾಚಾರ.

ಬೆಳಗಿನ ಕನಸಿನಲ್ಲಿ ತೂರಿ ಬರುತ್ತಾಳೆ.
ನಿಟ್ಟುಸಿರಲ್ಲೂ ಕಾಡುತ್ತಾಳೆ ನೆರಿಗೆಯ ಹಣೆಯಲ್ಲಿ
ಹಂದಾಡುವ ಹಣ್ಣು ಕೂದಲ ಸರಿಸಿ.

ಹೌದು, ಮುಟ್ಟಿ ಮಾಸುವ ಬಯಕೆಗಳು,
ಬೆಂದ
ಕನಸುಗಳೆಲ್ಲ
ಈಗ ಕರಕಲು.
ತಾಳೆಯಾಗದು
ಉಸಿರಿನ ಲೆಕ್ಕಾಚಾರ.
———————

ಎನ್.ಜಯಚಂದ್ರನ್.

About The Author

2 thoughts on “ಎನ್‌ ಜಯಚಂದ್ರನ್‌ ಕವಿತೆ-ವಿಸಂಗತ”

  1. ಉಪೇಂದ್ರಸಿಂಹ ಘೋರ್ಪಡೆ. ದಾಂಡೇಲಿ.

    ಕನಸುಗಳು ಕಾಲಚಕ್ರದಡಿ ಕಂಡುಕೊಳ್ಳುವ ವಾಸ್ತವ ಸ್ಥಾನಮಾನದ ಒಂದೊಳ್ಳೆಯ ಅಭಿವ್ಯಕ್ತಿ.

  2. ವಾಸ್ತವವನ್ನು ಕಾವ್ಯ ಮೂಲಕ ಅನುಭವಿಸುವ ಅವಕಾಶ.

Leave a Reply

You cannot copy content of this page

Scroll to Top