ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿದ್ಯಾ ಶಂಕರಿ ಸುಳ್ಯ

ಬದುಕು

ಬದುಕಿನ ಬವಣೆ ಹೊತ್ತಿ ಉರಿಯುತ್ತಲಿದೆ
ತನ್ನ ಕೆನ್ನಾಲಿಗೆಯ ಚಾಚಿ …..

ಎಲ್ಲಿ ಹಾರೀತು ಮರಿದುಂಬಿ ಸಂತಸದಿ
ಇನ್ನು ತನ್ನ ರೆಕ್ಕೆಯ ಬಿಚ್ಚಿ …..

ಕಾಲರಾಯನೇ ….ನೀನಿರುವೆಯೆಂದೇ
ಕಾದೆ …ಕಾದೇ ….ನೋವ ಮರೆಮಾಚಿ ….

ಎದೆ ಸೀಳುವ ನೋವು ಕುದಿಯುತ್ತಲಿದೆ ….
ಆ ಕೃತಕ ನಗೆಯ ಬೀರಿ ….ಮರೆಮಾಚಿದೆ….

ಹೇ ಜಗನ್ನಿಯಾಮಕನೇ ….ಯಾಕೀ ಪರೀಕ್ಷೆ ?
ನಿನ್ನ ಕೂಸಿಗೆ ನೀ ನೀಡುವೆಯಲ್ಲವೇ ರಕ್ಷೆ ….?

ಯುಗದ ಆದಿಯ ದಿನ ಹೊಸ ಕನಸು ಮೂಡುವುದೇ …?
ತಾಳ್ಮೆಯಿಂದ ಕಾಯುವೆ …ಹೊಸ ಕನಸ ಚಿಗುರಿಗಾಗಿ …
————

About The Author

Leave a Reply

You cannot copy content of this page

Scroll to Top