ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರಜಿನಿ ಟಿ ಎಂ

ಮಾತಿನ ಮುಖವಾಡ

ತಿಳಿ ಮನುಜ ಮುಖವಾಡದ ಮರ್ಮ
ಮಾತಿನ ಹಿಂದಿನ ನಿಗೂಢ ಮನ
ಸುಳ್ಳ ಮೆಚ್ಚಿ ಬೆಳೆಸುವರು
ಸತ್ಯವ ತುಳಿದು ಸಮಾಧಿ ಕಟ್ಟುವರು

ಪರರ ಸಾಧನೆಯ ಸಹಿಸಲಾರದೆ
ತಮ್ಮ ಸೋಲಿಗೆ ಕೊರಗುವರು
ನೀತಿಯ ಭಾಷಣ ಬೀರುತ
ಅನೀತಿಯ ಬಾಳ ನಡೆಸುವರು

ಕೈಯೊಡ್ಡಿ ಬೇಡುವವರ ಮುಂದೆ
ನೀಡದೆ ದಾನಿ ತಾನೆನ್ನುವರು
ನುಡಿಯೊಳು ನಂಬಿಸುತಾ
ಕುತ್ತಿಗೆಯ ಕೊಯ್ಯುವರು

ಮುಂದೆ ಭರವಸೆಯ ಮಾತ ನೀಡಿ
ಹಿಂದೆ ನಿಂದನೆಯ ದನಿಯಲಿರುವರು
ಮುಖದ ಮೇಲೆ ನಗೆಯ ಚೆಲ್ಲಿ
ಮನದ ತುಂಬ ಹಗೆಯಲಿರುವರು

ನುಡಿಯೊಳು ಹಿರಿತನವ ಬೀಗುತ
ನಡೆಯೊಳು ಸಣ್ತನದವರಾಗುವರು
ಮಾತೆಲ್ಲ ತೋರಿಕೆ, ಮಾತೆಲ್ಲ ಮರ್ಮ
ಮಾತಿಗಾದರೆ ಮರುಳು, ಕುತ್ತಿಗೆ ಉರುಳು.


ರಜಿನಿ ಟಿ ಎಂ

ಕವಿ ಪರಿಚಯ:

ರಜಿನಿ ಟಿ ಎಂ
ತಗ್ಗಹಳ್ಳಿ
ಮಂಡ್ಯ ತಾಲೂಕು ಮತ್ತು ಜಿಲ್ಲೆ
ಶಿಕ್ಷಣ – ಎಂ ಎಸ್ ಡಬ್ಲ್ಯೂ
ವೃತ್ತಿ – ಕಾರ್ಮಿಕ ಕಲ್ಯಾಣಾಧಿಕಾರಿ
ಪ್ರಕಟ ಮಾಡಿರುವಂತ ಪುಸ್ತಕದ ಹೆಸರು – ಹೊಂಗನಸು (ಬದುಕು ಭಾವನೆಗಳ ಸಂಗಮ)

About The Author

Leave a Reply

You cannot copy content of this page

Scroll to Top