ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೇ-ದಿನದ ವಿಶೇಷ

ಗುಣಾಜೆ ರಾಮಚಂದ್ರ ಭಟ್

ಕಾಯಕ ಯೋಗಿ

ಉರಿಯುವ ಬಿಸಿಲಲಿ ಸುರಿಯುವ ಮಳೆಯಲಿ /
ವರನಿವ ದುಡಿವ ಕಾರ್ಮಿಕನು ..

ಶ್ರಮಿಕನ ದಿನವಿದು ನಮಿಸುವೆ ಯೋಗಿಗೆ
ದಮನವ ನೀನು ತಡೆಯುತಿರು..

ಕಾಯಕದಿಂದಲೆ ಕಾಯದ ಪೋಷಣೆ
ಸಾಯುವ ತನಕ ದುಡಿಯುತಿಹೆ..

ಬೆವರನು ಹರಿಸುತ ಗೈವನು ಹಗಲಲಿ
ಕವನವ ಬರೆದು ಸಲಿಸುವೆನು..

ಕ್ರಾಂತಿಗೆ ಕಾರಣ ಶಾಂತಿಯ ದೂತನು
ಕಾಂತಿಯು ಮೊಗದಿ ಬೆಳಗುತಿದೆ..

ಕೃಷಿಯನು ಮಾಡುತ ಹಸಿವನು ತಣಿಸುತ
ಶಿಶಿರದ ತಂಪ ಕೊಡುತಿರುವೆ..

‘ಬೆವರಿಗು ಬೆಲೆಯಿದೆ’ ಭವದಲಿ ಮಾತಿಗೆ
ದಿವಸವು ನೀನು ಮಾದರಿಯು ..

ಶಿಶಿರ =ತಂಪಾದ ಕಿರಣಗಳುಳ್ಳ ಚಂದ್ರ, ಹಿಮ,ಆರು ಋತುಗಳಲ್ಲಿ ಒಂದು.


ಗುಣಾಜೆ ರಾಮಚಂದ್ರ ಭಟ್

About The Author

Leave a Reply

You cannot copy content of this page

Scroll to Top