ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಂಗಾಧರ ಬಿ ಎಲ್ ನಿಟ್ಟೂರ್

ವಿಪರ್ಯಾಸ

ಕಣ್ಣೀರು ಹಾಕುವ ಮೊಸಳೆಗಳು
ಹೆಗಲು ಏರಿ ಹಾರಿವೆ ಬಾನೆತ್ತರ

ಬಾಯಲ್ಲಿ ಪಾಸಿಟಿವ್ ಬೆಣ್ಣೆ
ಬಗಲಲ್ಲಿ ನೆಗೆಟಿವ್ ದೊಣ್ಣೆ
ಹಿಡಿದ ಗೋಸುಂಬೆಗಳು
ಮಿಂಚಿವೆ ಮಿರಮಿರ

ಗುಂಪಿಗೆ ಸೇರದ ವಿಜಾತಿ
ಜಾಣ ನರಿಗಳ ಕೊಳೆತ ವಾಸನೆ
ಸಭ್ಯತೆಯ ಗೋರಿಯೊಳಗೆ

ಪಾಪ ಮೂಳೆ ಸವೆಸಿಕೊಂಡ
ನಿಯತ್ತಿನ ನಾಯಿಗಳು
ಬೀದಿಗೆ ಬಿದ್ದು ಬಡಕಲಾಗಿವೆ
ಬಾಡೂಟದ ಮಾತು ಬದಿಗಾಯ್ತು
ಹೊತ್ತು ಕೂಳಿಗೂ ದಿಕ್ಕಿಲ್ಲ
ಬೀದಿ ಬದಿ ಜಾಗವಿಲ್ಲ
ಕಣ್ಣೆತ್ತಿ ನೋಡುವವರ ಸುಳಿವಿಲ್ಲ

ಸತ್ಯ ಬೊಗಳುವ ನಾಯಿಗೆ
ಸಂತಾನ ಹರಣ ಚಿಕಿತ್ಸೆ
ಇಲ್ಲವೇ ಗಡಿಪಾರು
ಮರು ಬೊಗಳುವ
ಧೈರ್ಯ ತೋರಿದರೆ ವಿಷಮದ್ದು

——————–

    About The Author

    1 thought on “ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ವಿಪರ್ಯಾಸ”

    Leave a Reply

    You cannot copy content of this page

    Scroll to Top