ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರೇಖಾ ಸುದೇಶ್ ರಾವ್

ಹೃದಯ ವೈಶಾಲ್ಯ

ಹೃದಯದೊಳು ತುಂಬಿರಲಿ ಸ್ನೇಹ ಭಾವ
ಸಕಾರಾತ್ಮಕ ಚಿಂತನೆ ಮನುಜ ಸ್ವಭಾವ
ನಕಾರಾತ್ಮಕ ವಿಚಾರ ದೂರ ಸರಿಸು ಮಾನವ
ಸದ್ಭಾವನೆ ತುಂಬಿರಲಿ ದೇವನೊಬ್ಬ ಕಾಯುವ

ಮಾನವೀಯತೆ ಸೃಷ್ಟಿಕರ್ತನಿಗೆ ಬಲು ಇಷ್ಟ
ಜಗದೊಳು ಯಾರನ್ನೂ ಕಾಣದಿರು ಕನಿಷ್ಟ
ಭಾವೈಕ್ಯತೆಯೆ ನಮ್ಮೆಲ್ಲರ ಬದುಕಿಗೆ ಶ್ರೇಷ್ಠ
ಸಂತೃಪ್ತ ಭಾವ ಹೊಂದು ಮನಕೆ ಬಾರದು ಕಷ್ಟ

ಸಮಾಜ ಸುಧಾರಣೆಯಲ್ಲಿ ನಿಸ್ವಾರ್ಥ ಸೇವೆಯಿರಲಿ
ಭೇಧ ಭಾವ ತೊರೆದು ಜೀವನ ಸಾಗಲಿ
ನಿಷ್ಕಲ್ಮಶ ಆಶಾ ವಾದಿ ಸಹೃದಯರಾಗಲಿ
ಜನ ಹಿತ ಕಾರ್ಯಗಳಿಗೆ ಮನ ಮುಂದಾಳುತ್ವ ವಹಿಸಲಿ


About The Author

Leave a Reply

You cannot copy content of this page

Scroll to Top