ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನನ್ಯ ಎಚ್ ಸುಬ್ರಹ್ಮಣ್ಯ

ಅರಿತು ಬಿಡು ಜಗವ

ಪ್ರಶಾಂತವಾದ ಗಿಡ ಲತೆಯ ನಡುವಿನಲ್ಲಿ
ಮನಸಿನ ಭಾವನೆ ಹಸಿರಿನ ಚಿಲುಮೆಯಲ್ಲಿ
ಹಂಗಿರದೆ ಬೀರಿದ ನಗೆಮಿಂಚಿನಲ್ಲಿ
ಮೌನವಾದೆ ನಕಾರಾತ್ಮಕ ಚಿಂತನೆಯಲ್ಲಿ

ಹೊಸಕಾಲದ ಹೊಲಸು ತುಳಿದು
ಭರವಸೆಗಳ ಅನಾಹುತ ನೆನೆದು
ತವಕದ ಕಂಬನಿಯ ಅಳೆದು
ಕ್ರೂರ ನರ್ತನವಾಗಿದೆ ಇಂದು

ತಾಳ್ಮೆ ಇಲ್ಲದೆ ಹೆಣೆದಿದೆ ಮನಸ್ಸು
ಅಳಿವಿನಂಚಿನಲ್ಲಿ ಮರೆಯಾಗಿದೆ ಕನಸು
ಜಗದೊಳಗೆ ಸಿಗುತ್ತಿಲ್ಲ ಹುಮ್ಮಸ್ಸು
ಬದಲಾವಣೆಯಲ್ಲಿ ನಾನಾದೆ ಕೂಸು

ಕ್ಷಣ ಕ್ಷಣದಲ್ಲಿ ತಪ್ಪುತ್ತಿದೆ ನಿಯಂತ್ರಣ
ದವಾಖಾನೆಯತ್ತ ಸಾಗುತ್ತಿದೆ ಪಯಣ
ನೀರಿನಂತೆ ಹರಿದು ಹೋಗುತ್ತಿದೆ ಹಣ
ಕೊನೆಯಾಗುತ್ತಿರುವ ಜೀವಕ್ಕೆ ಬೇಕಿದೆ ಕಡಿವಾಣ .


ಅನನ್ಯ ಎಚ್ ಸುಬ್ರಹ್ಮಣ್ಯ

About The Author

Leave a Reply

You cannot copy content of this page

Scroll to Top