ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಂತೋಷ ಅಂಗಡಿ

ಮಾತು ಬಿಟ್ಟ ದಿನ

ಉರಿ ಬಿಸಿಲು
ಉರಿದುರಿದು ಬೀಳುತಿತ್ತು
ಹೊಳೆ ಮಾತ್ರ ತಣ್ಣಗೆ ಹರಿಯುತ್ತಿತ್ತು
ತೀರದಲಿ ತಂಗಾಳಿ
ಕಾದ ಉಸುಕಿನ ಕಣವ ಸವರಿ
ಎದೆಗಪ್ಪುತ್ತಿತ್ತು
ನೀನು ಮಾತು ಬಿಟ್ಟ ದಿನ
ಎಲ್ಲವೂ ಇದ್ದಹಾಗೆ ಇದ್ದವು

ನಶೆದುಂಬಿದ ಕಂಗಳ ಕೆಂಪು
ಮರೆತುಹೋದ ಮನೆಯ ರಸ್ತೆ
ಅಪರಿಚಿತ ಜಗತ್ತು
ಹೃದಯ ಊನಾದ ಮನುಷ್ಯರು
ಇನ್ನಾವುದೋ ವಿಚಿತ್ರ ಲೋಕವೊಂದರ ಜೊತೆ ನಾನಿರುವಂತೆ
ಜಗಜಿತ್ ಸಿಂಗ್ ನ ಗಜಲುಗಳು
ನಾನೇ ಬರೆದವು ಅನಿಸತೊಡಗಿದವು
ಊರೆಲ್ಲವೂ ನಿಶ್ಚಲವಾಗಿ
ಪೋಟೋದೊಳಗೆ ಅಡಗಿ ಕುಳಿತಿತ್ತು

ನೀನು ಮಾತು ಬಿಟ್ಟ ದಿನ
ನೀ ಕೊಟ್ಟ ಮಾತು ನೆನಪಾಯಿತು.


About The Author

7 thoughts on “ಸಂತೋಷ ಅಂಗಡಿ ಕವಿತೆ–ಮಾತು ಬಿಟ್ಟ ದಿನ”

  1. ರವಿ ದೇವರಡ್ಡಿ

    ಕವಿತೆಯೊಳಗಿನ ಭಾವ ನವಿರಾಗಿ ಕೈ ಸವರಿ, ಮೆಲ್ಲಗೆ ಮೈಗೆ ಆವರಿಸಿಕೊಳ್ಳುವ ಆಪ್ತತೆಯನ್ನು ಹೊಂದಿದೆ

Leave a Reply

You cannot copy content of this page

Scroll to Top