ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಗಝಲ್

ಹೊತ್ತಲ್ಲದ ಹೊತ್ತಲ್ಲಿ ಬಂದು ಕಾಡುವೆಯೇಕೆ ನೀನು
ಮುತ್ತಲ್ಲಿ ಮತ್ತಿನ ಅಮಲನು ನೀಡುವೆಯೇಕೆ ನೀನು

ಕಣ್ಣಲ್ಲಿ ಕಣ್ಣನಿಟ್ಟು ಅಂತರಂಗದ ಭಾವವನು ಅರಿಯುವಾಸೆಯೇ. ಹೇಳು
ಬಣ್ಣಬಣ್ಣದ ಮಾತಲಿ ಕಚಗುಳಿ ಇಡುವೆಯೇಕೆ ನೀನು

ನನ್ನ ನಿನ್ನ ನಡುವೆ ಇರುವ ಅನುಬಂಧಕೆ ಬೆಲೆ ಕಟ್ಟಲಾಗದು
ಚಿನ್ನರನ್ನ ಎನುತ ಹಿಂದೆಯೇ ಓಡುವೆಯೇಕೆ ನೀನು

ಸಿಹಿ ಕಹಿಯು ಸೇರಿದಾಗಲೇ ಜೀವನದ ಸಾರ ತಿಳಿಯುವುದು ಮನಕೆ
ಮೋಹ ದಾಹದಿ ಮಿಂದು ನೋಡುವೆಯೇಕೆ ನೀನು

ಹೂವು ಹಣ್ಣಿನ ತೆರದಿ ರಾಧೆಯ ಹೃದಯದಿ ಮಧುರವಾದ ಯಾತನೆ
ನೋವು ನಲಿವಿನಲಿ ವ್ಯಥೆಯ ಬೇಡುವೆಯೇಕೆ ನೀನು


About The Author

Leave a Reply

You cannot copy content of this page

Scroll to Top