ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಈಶ್ವರ ಜಿ ಸಂಪಗಾವಿ

ಗಜಲ್

ನನ್ನೆದೆಯ ರಾಜ್ಯವಾಳು ಬಾ ಬೇಗ ಜೀವದ ತಳಮಳವ ತಾಳಲಾರೆ ಗುರುವೆ
ಮನ್ನಣೆಯ ಕೊಡದ ಆವೇಗ ಅವಸರದ ಬದುಕಿನಲಿ ಬಾಳಲಾರೆ ಗುರುವೆ

ದಹಿಸುವ ಹೃದಯಕೆ ತಂಪನೆರೆವ ಮಳೆಗರೆದು ಸಂಕಟವ ದೂರಿಡು ದೇವ
ಸಹಿಸದ ಚಡಪಡಿಕೆಗೆ ಹಾಕಿರುವ ಬೀಗನ್ನು ಮುರಿದು ಏಳಲಾರೆ ಗುರುವೆ

ಸುಡುನೋಟದ ಬಾಣಕೆ ಚಿತ್ತ ಪಲ್ಲಟವಾಗಿ ದಿಕ್ಕು ಕಾಣದಾಗಿದೆ ಸತತ
ಮಾತು ಮೌನವಾಗಿ ಹುಚ್ಚು ಗುರಿಯಿರದ ದಾರಿಯನ್ನು ಸೀಳಲಾರೆ ಗುರುವೆ

ಕನಸುಗಳ ಹೊಂಬಣ್ಣ ಮನದಲ್ಲಿ ಮೂಡುತ್ತ ಗಾಳಿಗೋಪುರ ಕಟ್ಟುತಿವೆ
ಬಾಳಿನಲಿ ಗುರಿ ತಪ್ಪಿದ ಪ್ರಯೋಗ ಮಣ್ಣಾಗುವುದ ಕೇಳಲಾರೆ ಗುರುವೆ

ಕಟ್ಟು ಪ್ರೇಮ ಸಾಮ್ರಾಜ್ಯ ಕನವರಿಸಿ ನನಸಾಗಲಿ ಮನದ ಮಹತ್ವಾಕಾಂಕ್ಷೆಗಳು
ಈಶನ ವರ ಪಡೆದ ಸಂಜೋಗ ಅರಸುತ್ತ ಬಯಕೆಯ ಹೂಳಲಾರೆ ಗುರುವೆ


About The Author

Leave a Reply

You cannot copy content of this page

Scroll to Top