ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯುಗಾದಿ ವಿಶೇಷದ ಬರಹಗಳು

ಗಝಲ್

ಶಂಕರಾನಂದ ಹೆಬ್ಬಾಳ

ಹಿಲಾಲು ಆರಿದ ಮೇಲೆ ಬೆಳಕು ಅರಸುವೆ ಏಕೆ
ಮನಸು ಮುರಿದ ಮೇಲೆ ಒಲವ ಹರಿಸುವೆ ಏಕೆ

ಸುರಿವ ಸೋನೆ ಹನಿಗಳು ಕೆಂಡವಾಗಿವೆಯಿಂದು
ಬಯಕೆ ತೀರಿದ ಮೇಲೆ ಆಸೆ ಬರಿಸುವೆ ಏಕೆ

ಕಣ್ಣಲ್ಲಿ ಕೊಲ್ಲುವ ನೋಟಕ್ಕೆ ಬಲಿಯಾದೆ ನಾನು
ಮಸಣ ಏರಿದ ಮೇಲೆ ಕಂಬನಿ ಸುರಿಸುವೆ ಏಕೆ

ಹೃದಯ ಉದ್ವಿಗ್ನಗೊಂಡು ಸಿಡಿಯುತ್ತಿದೆ ನೋಡು
ದುಃಖವ ಕಾರಿದ ಮೇಲೆ ತನುವ ಬೆರೆಸುವೆ ಏಕೆ

ಒಡಲ ಗಾಯಕ್ಕೆ ಮುಲಾಮು ಹಚ್ಚುತಿರುವೆಯಲ್ಲ
ಪಯಣ ಮುಗಿದ ಮೇಲೆ ಅಭಿನವನ ಕರೆಸುವೆ ಏಕೆ

ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top