ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಝಲ್

ಶಂಕರಾನಂದ ಹೆಬ್ಬಾಳ

ನೀ ಕೈಬಿಟ್ಟರೆ ಕೊನೆಯಲ್ಲಿ ನನಗೆ ಮಸಣದ
ಹಾದಿಯೆ ಗತಿ
ಇಹದಲ್ಲೂ ಪರದಲ್ಲೂ ನೆನಪಿಟ್ಟುಕೋ ಸಖಿ
ನಾನೆ ನಿನ್ನ ಪತಿ

ಹಚ್ಚಿಕೊಂಡ ಪ್ರೀತಿಯ ನಲ್ಲನೊಂದಿಗೆ
ಚೆಲ್ಲಾಟವಾಡಿದೇಕೆ
ಬಾಳಿಗೆ ಮಾರ್ಗ ತೋರಿಸಿ ತೊರೆದು ಹೊರಟ
ಪ್ರೇಮ ಸತಿ

ಹುಚ್ಚನಂತೆ ತಿರುಗಿದಕ್ಕೆ ದುಃಖ ಕೊಡಲು
ಮನಸು ಬಂತೇ
ಹೃದಯ ಸುಟ್ಟುಬಂದ ಮರುದಿನವೆ ಮಾಡು
ನನ್ನಯ ತಿಥಿ

ಬಿಡುಗಡೆ ಬಯಸದೆ ಆಸ್ಥೆಯಿಲ್ಲದ
ಜೊತೆಗಾತಿಯ ನಂಬಿದೆ
ಪ್ರಣಯ ಸುಖಕೆ ತಲ್ಪದಲಿ ಕಾದಿರುವ
ಕಲ್ಪನೆಯ ರತಿ

ಸಂಕೋಲೆ ತೊಡಿಸಿ ಬಂಧಿಸಿದೆಯಲ್ಲ
ಮೌನ ಗೌರಿಯಂತೆ
ಜೀವಕ್ಕೆ ಮರುಜೀವ ಕೊಟ್ಟು ಕಾಣಿಸುವ
ರಾಗರತಿಯ ಶೃತಿ

ಕಣ್ಣಿನಲ್ಲಿ ಕೊಲ್ಲುತ ಕಣ್ಣಂಚಲಿ ಕರೆಯುತಿಹ
ನೀಲವೇಣಿ
ಭವದ ಕಡಲಿನ ನೌಕೆಯಲ್ಲಿ ತೇಲಿಸುವ
ಮೋಹದ ಮತಿ

ಗೋರಿ ಮೇಲೆ ಹೂವನಿಟ್ಟು ಅಳಲು
ತೋಡಿಕೊ ಅಭಿನವ
ಮುಗಿಯದ ಅಧ್ಯಾಯವೇ ಎದೆಯಲ್ಲಿ
ನೀನೊಂದು ಕೃತಿ


About The Author

Leave a Reply

You cannot copy content of this page

Scroll to Top