ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಂಡಲಗಿರಿ ಪ್ರಸನ್ನ

ಗಜಲ್

ಸುಡುಬೆಂಕಿಯಲಿ ಬದುಕಿದವಳಿಗೆ ಸ್ತ್ರಿ ಎನಲು ಸಾಕೆ
ನೂರು ನೋವಲಿ ಅರಳಿದವಳಿಗೆ ಸ್ತ್ರಿ ಎನಲು ಸಾಕೆ

ಭೂಭಾರ ಹೊತ್ತ ಭೂದೇವಿಯ ಅಚ್ಚರಿಯು ನೀನು
ಸಹನೆಯಲಿ ಬಿಕ್ಕುತ ನಕ್ಕವಳಿಗೆ ಸ್ತ್ರಿ ಎನಲು ಸಾಕೆ

ಸೆರಗಿನಲಿ ಬೆಂಕಿ ಕಟ್ಟಿ ಬೆಳಕು ಅರಸಿ ಹೊರಟವಳು
ಕಣ್ಣೊಳಗೆ ಕಾಮನೆ ಕಂಡವಳಿಗೆ ಸ್ತ್ರಿ ಎನಲು ಸಾಕೆ

ಶರಧಿಗೆ ಲಗ್ಗೆ ಹಾಕಿ ಬೊಗಸೆಯಲಿ ನೀರು ತಂದಾಕೆ
ಬಿಸಿಲ್ಗುದುರೆಗೆ ಪರಿತಪಿಸಿದವಳಿಗೆ ಸ್ತ್ರಿ ಎನಲು ಸಾಕೆ

ಭೂಮ್ಯಾಕಾಶ ಚಂದ್ರ ನಕ್ಷತ್ರಗಳ ಒಡತಿಯಂತೆ
ತುತ್ತು ತುತ್ತಿಗೆ ಕಂಗಾಲಾದವಳಿಗೆ ಸ್ತ್ರಿ ಎನಲು ಸಾಕೆ


ಈ ಗಜಲ್ ಕವಿ ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯ ಸಾಲೊಂದರಿಂದ ಹುಟ್ಟಿದ್ದು. ಕವಿ ಜಿಎಸ್ಎಸ್ ಅವರಿಗೆ ಋಣಿ….

prasanna

About The Author

Leave a Reply

You cannot copy content of this page

Scroll to Top