ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮೌನದ ಪಯಣ

ನಾಗರತ್ನ ಎಚ್ ಗಂಗಾವತಿ

ಮೊಗವ ತೋರದೆ
ಮುನಿಸು ಏತಕೆ.

ನೀ ಮಾತನಾಡಲು
ಮೌನ ಮುರಿಯುವುದು.

ಕಹಿಯನ್ನು ಮರೆತು
ಸಿಹಿಯನ್ನು ಸವಿದು.

ನೀನು ಜೊತೆಗಿರೆ
ಬಾಳು ಬೆಳಗುವುದು.

ಸುಮ್ಮನೆ ಏತಕೆ
ಮನದ ಮಾತನು.

ನುಡಿಯಬಾರದು
ಒಮ್ಮೆ ನನ್ನೆದುರು.

ಸುಳಿ ಗಾಳಿ ಬೀಸಲು
ಮೋಡಸರಿದು.

ಸಿಡಿಲ ಬಡಿತಕ್ಕೆ
ಮಿಂಚು ಹೊಡೆದು.

ಬೆಳಕಿನಲ್ಲಿ ನೀ
ಮೂಡಿ ಬಂದಂತೆ.

ಚಿರಕಾಲ ನೀನು
ಎನ್ನ ಮನದಿ ಹಸಿರಾಗುವಂತೆ.

ಇಬ್ಬರು ಜೊತೆಯಾಗಿ
ಒಟ್ಟಾಗಿ ಸಾಗೋಣ.

ಬಾರದಿರಲಿ ನಮ್ಮಿಬ್ಬರ
ನಡುವೆ ಮುನಿಸು.

ಸದಾ ನಗು ನಗುತಾ
ಎನ್ನ ಹೃದಯ ಮಂದಿರದಲ್ಲಿ.

ನೀ ನೆಲಸಲೂ ಮ
ಮೂಡಿತು ಪ್ರೀತಿಯ ಅನುರಾಗ…

-[———————

About The Author

Leave a Reply

You cannot copy content of this page

Scroll to Top