ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ನೆರಳು

ಬದುಕು ಸಿಹಿಕಹಿ ತುಂಬಿದ ಬೆರಳು
ತಾಯಿಯ ಮಮತೆಯ ಮಡಿಲಿನ ನೆರಳು
ಕಷ್ಟದ ಸಮಯಕೆ ಸಂಯಮವೇ ಕೊರಳು
ಶಾಂತಿಯ ಮನಕೆ ಸಮೃದ್ಧಿಯ ಹೊರಳು

ಅಕ್ಷರ ಕಲಿಸಿದ ಗುರುವಿನ ಹಾರೈಕೆ
ತಪ್ಪಗಳನು ತಿದ್ದುತ ಗೆಲುವಿನ ಹರಕೆ
ಸ್ವಾರ್ಥವ ತೊರೆದು ನೆರಳಾದ ಮರವು
ಪರರ ಉಪಕಾರಕೆ ದುಡಿವ ಹೃದಯವು

ಸೋಲಿನ ಸುಳಿಯಲೂ ಜಯದ ನೆರಳು
ಗೆದ್ದರೂ ತೀರದು ದುರಾಸೆಯ ಕರುಳು
ಮನವೆಂಬ ಮರ್ಕಟಕೆ ನವ್ಯದ ಸರಳು
ನಂಬಿಕೆಯ ಎದೆಗೆ ಕಾಯಕವೇ ಹರಳು

ಕಾಲನ ಪ್ರತಿಬಿಂಬದ ನೋಟದ ಗಳಿಗೆ
ಎದೆಯ ಬಿಂಬಗಳ ಭಾವದ ಮಳಿಗೆ
ಬದುಕು ಬಲವಾಗಿ ಸುಖದ ಹೋಳಿಗೆ
ಸಮೃದ್ಧಿಯ ಕಡೆಗೆ ಜೀವನದ ಜೋಳಿಗೆ


About The Author

1 thought on “ಕಾಡಜ್ಜಿ ಮಂಜುನಾಥ ಕವಿತೆ-ನೆರಳು”

  1. ಚಕ್ರವರ್ತಿ ಅನಂತಶಯನ ವಿಶ್ವನಾಥ

    ಸುಂದರವಾದ ಕವಿತೆ ಸಾರ್ ನಮಸ್ಕಾರ ಜೈಶ್ರೀರಾಮ್

Leave a Reply

You cannot copy content of this page

Scroll to Top