ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮೋಹನ್ ಬಸಪ್ಪನಾಯಕ

ಧರ್ಮ…!

ಮಸೀದಿ ಚರ್ಚು ಗುಡಿಗಳ
ಗಡಿಯ ದಾಟಿ ದಣಿದವರ
ದಾಹ ನೀಗುತ ಲೋಕವನು
ಬೆಳಗುವ ಧರ್ಮವನು
ಪೊರೆಯಬೇಕಿದೆ ಈ ಭೂತಾಯಿ…..,

ಗಂಜಿ ನೀರಿಗೆ ಕೈಚಾಚಿರುವ
ಬಡ ಕಂದನ ಕಣ್ಣೀರ ಅಳಿಸಿ
ದುಡ್ಡಿನ ದರ್ಪದಲಿ ಮೆರೆಯುವ
ಧಣಿಗಳ ದಮನ ಮಾಡಿ
ಮನುಜತ್ವವ ಗರ್ಭಿಕರಿಸಿಕೊಂಡಿರುವ ಧರ್ಮವು ಬೇಕಾಗಿದೆ ನಿತ್ರಾಣಗೊಂಡಿರುವ ಭೂತಾಯಿಯ ಉಳಿವಿಗೆ….,

ಬಿರುಕು ಗೋಡೆಯ
ಕೆಡವಿ ಮಾನವರೆಲ್ಲರೂ ಭೂತಾಯಿಯ
ಮಡಿಲ ಮಕ್ಕಳೆನ್ನುವ ಮನಸ್ಸನು
ಹೊತ್ತು ಬರಲಿ
ಕತ್ತಲ ದೂಡುವ ಧರ್ಮ…..,

ಮೌಢ್ಯವ ತುಳಿದು
ಅಜ್ಞಾನದ ಉಸಿರ ಚಿವುಟಿ
ಮನಮನಗಳ ಬೆಸೆದು ಭೂಮಂಡಲದ ಅಶಾಂತಿ ತೊಡೆಯುವ ಧರ್ಮಕೆ ಬೇಕಿದೆ ಇಂದು ಬಿಡುಗಡೆ…….!


About The Author

Leave a Reply

You cannot copy content of this page

Scroll to Top