ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ದೇವರಾಜ್ ಹುಣಸಿಕಟ್ಟಿ

ಕವಿತೆಯಾಗುವುದು…!!

ನೀವು ನದಿಯ ಬಗೆಗೆ
ಮಾತನಾಡುತ್ತೀರಿ..!
ಕೆಲವರು ಬೊಗಸೆಯಲ್ಲಿಯೇ
ದಾಹ ನೀಗಿಬಿಡುತ್ತಾರೆ…!!

ನೀವು ಆಧ್ಯಾತ್ಮದ ಬಗೆಗೆ ಮಾತನಾಡುತ್ತೀರಿ…!
ಕೆಲವರು ಆತ್ಮವಾಗಿಬಿಡುತ್ತಾರೆ…!!

ನೀವು ವಿಶಾಲ ಜ್ಞಾನದ ಬಗೆಗೆ
ಮಾತನಾಡುತ್ತೀರಿ…!
ಕೆಲವರು ಬೆಳಕಾಗಿಬಿಡುತ್ತಾರೆ…!!

ನೀವು ಆಗಸದ ವಿಶಾಲತೆಯ
ಬಗೆಗೆ ಮಾತನಾಡುತ್ತೀರಿ..!!
ಕೆಲವರು ಸದ್ದಿಲ್ಲದೇ ಮನದಲಿ
ಕೂತು ಬಿಡುತ್ತಾರೆ…!!

ನೀವು ನಶೆಯ ಬಗೆಗೆ
ಮಾತನಾಡುತ್ತೀರಿ…!
ಕೆಲವರು ಪ್ರೀತಿಯಲಿ ಮುಳುಗಿ ಬಿಡುತ್ತಾರೆ….!!
ನೀವು ಸಮುದ್ರದ ಬಗೆಗೆ
ಮಾತಾಡುತ್ತೀರಿ…!
ಕೆಲವರು ಕಣ್ಣoಚಲ್ಲಿ ಮುಳುಗಿ ಬಿಡುತ್ತಾರೆ….!!

ನೀವು ಗೀತೆಯ ಬಗೆಗೆ ಮಾತನಾಡುತ್ತೀರಿ…!
ಕೆಲವರು ಕವಿತೆಯಾಗಿ ಬಿಡುತ್ತಾರೆ..!!


About The Author

Leave a Reply

You cannot copy content of this page

Scroll to Top