ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಈಶ್ವರ ಜಿ ಸಂಪಗಾವಿ

ಸುಟ್ಟು ಸುಣ್ಣವಾಗಿ ಮಣ್ಣಲ್ಲಿ ಮಣ್ಣಾಗಿರುವ ಜೀವಗಳ ಕಡೆಗಣಿಸಿದರಲ್ಲ
ಕಾಡು ಮೇಡಗಳ ಅಲೆದು ಬದುಕ ಕಟ್ಟಿರುವ ಚಣಗಳ ಮಣ್ಣಾಗಿಸಿದರಲ್ಲ

ಬೆವರ ಹನಿಗಳ ಕುಡಿದು ಬಿಸಿಲು ಹಣ್ಣ ತಿಂದು ಬಡಕಲಾದುದ ಮರೆತರಲ್ಲ
ಕರುಳ ಕುಡಿಗಳು ಕೊರಗದಿರಲೆಂದು ತಮ್ಮಯ ಸುಖದ ಬಲಿಕೊಡಿಸಿದರಲ್ಲ

ಬಾಳಸಂಜೆಯ ಆಸರಿಕೆ ಬೇಸರಿಕೆಗೆ ಆಸರೆ ಬಯಸಿದ್ದು ನಿಜ ಅಪರಾಧವೇ
ಅರುಣೋದಯದ ಬಾಳಚಿಗುರ ಸಂಭ್ರಮಿಸಿದ ಕನಸುಗಳ ಕಮರಿಸಿದರಲ್ಲ

ಕನಸುಗಳ ಬಲಿಕೊಟ್ಟು ತಮ್ಮ ವಂಶದ ಕುಡಿಗಳಿಗೆ ನೀರುಗೊಬ್ಬರ ಹಾಕಿದ್ದರು
ಬೇಡಿದ ಹಣ ಹೊಂದಿಸಿ ಹೊಳೆ ಹರಸಿದವರಿಗೆ ಕೈಚಾಚುವ ಗತಿ ತರಿಸಿದರಲ್ಲ

ದಾರಕೆ ಗಂಟು ಹಾಕದೆ ಈಶನ ನೆನೆಯದೆ ಬಾಳೆಂಬ ಕೌದಿ ಹೊಲೆಯುತಿಹರಲ್ಲ
ಸತಿಪತಿ ಮಕ್ಕಳ ಕಾಳಜಿಗೆ ಮಹಾಪೂರವಾಗಿ ಬೆಲೆಕೊಡದೆ ಕೊಚ್ಚಿಹೋದರಲ್ಲ


About The Author

Leave a Reply

You cannot copy content of this page

Scroll to Top