ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನುಸೂಯ ಯತೀಶ್

ಅನುಸೂಯ ಯತೀಶ್

ಹೆಣ್ಣಾಗಿ ಹುಟ್ಟುತ ಕಣ್ಣಾಗಿ ಬೆಳೆದಳು
ಮಣ್ಣಿನ ಮಗಳ ಮಹಿಮೆಯ ।ನೋಡಿರಿ।
ಹುಣ್ಣಿನ ನಂಜು ತಡೆಯಿರಿ॥

ಮಮತೆಯ ಕಡಲಂತೆ ಸಾಮದ ಮಡಿಲಂತೆ
ಸುಮದಂತೆ ನವಿರು ನಾಜೂಕು।ಅವಳೆಂದು।
ಸಮವಿಲ್ಲ ಜಗದಿ ಲಲನೆಗೆ॥

ಬೆಂಕಿಲಿ ನೊಂದರು ಮಂಕಾಗಿ ಬಾಡದೆ
ಕೊಂಕನು ಸಹಿಸಿ ನೋವನು ।ನುಂಗುತ್ತ।
ಬಿಂಕವ ಬಿಡದೆ ಬದುಕ್ತಾಳೆ॥

ಲೋಕವ ತಿದ್ದುವ ಏಕೈಕ ಮುತ್ತಂತೆ
ನಾಕವ ಧರೆಗೆ ತರುವಳು ।ಒಲವಲ್ಲಿ।
ನೂಕುತ್ತ ಬದುಕ ಜಂಜಡ॥

ಸೆರಗಲ್ಲಿ ದುಃಖವ ಮರೆಮಾಚಿ ನಿತ್ಯವು
ಬೆರಗನ್ನು ತುಂಬಿ ಬಡತನ ।ಬಚ್ಚಿಟ್ಟು।
ಕೊರಗದೆ ಬಾಳು ಸವಿದಾಳು॥

ಕಷ್ಟವಾ ಸಹಿಸುತ್ತ ಇಷ್ಟವಾ ಮುಚ್ಚಿಟ್ಟು
ನಷ್ಟದ ದಿನದಿ ನಡುಗಾದೆ ।ನಡೆದಾಳು।
ಮುಷ್ಟಿಯ ಕಟ್ಟಿ ಆಸೆಯ ಬಿಟ್ಟಾಳು॥

ಬೆಂದರು ಬಾಳಲ್ಲಿ ಚಂದದ ನಗೆಬೀರಿ
ಅಂದದ ಮೊಗವ ತೋರುತ್ತ ।ಜನರಿಗೆ।
ಮಂದಿಯ ವರವ ಪಡಿತಾಳೆ॥

ಧರಣಿಯ ಪುತ್ರಿಯು ಕರುಣೆಯ ಬೆಳಕಾಗಿ
ಶಿರಬಾಗಿ ನಮಿಸಿ ಹರನನ್ನು ।ಭಜಿಸುತ್ತ।
ಪೊರೆಯುತ್ತ ಮನೆಯ ನಲಿವಳು॥


ಅನುಸೂಯ ಯತೀಶ್

About The Author

Leave a Reply

You cannot copy content of this page

Scroll to Top