ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ನಿನ್ನೊಲವ ಬಯಸಿದ ಹೃದಯ ಇಂದೇಕೋ ಮೌನವಾಯಿತು
ಎದೆಯ ಪಟದಲ್ಲಿ ಕಲ್ಲೆಸೆದು ಹೊರಟಂತೆ ಭಾಸವಾಯಿತು

ಪ್ರೀತಿಯ ಪಾರಿವಾಳ ಒಸಗೆಯನು ಎಸೆದು ಹೋಯಿತೇಕೆ
ಒಡಲು ಪ್ರಕ್ಷುಬ್ದವಾಗಿ ಭಾವನೆಗಳ ಬುಗ್ಗೆ ಬರಿದಾಯಿತು

ಕಣ್ಣೆದುರು ಕಾಮನಬಿಲ್ಲಿನಂತೆ ಮೂಡಿ ಚಿತ್ತಾರ ಬರೆಸಿದ್ದೆ
ಕಾಡುವ ನೆನಪುಗಳಲ್ಲಿ ಬರಿಯ ಶೋಕವೆತುಂಬಿಹೋಯಿತು

ಬಿಟ್ಟರೂ ಬಿಡದಲ್ಲ ಈ ಮಾಯೆ ಚಮತ್ಕಾರ ತೋರುತಿದೆಯೇಕೆ
ಬಿಡದ ಬೆಸದ ಆವಿರ್ಭಾವ ಸಂಬಂಧಕೆಘಾಸಿಯಾಯಿತು

ಸಿಗದ ಪ್ರೇಮಕುದುರೆಯ ಬೆನ್ನೇರಿ ಬಂದಿಹನು ಅಭಿನವ ಕವಿ
ವೈಭವದ ದಿನಗಳು ಮರಿಚಿಕೆಯಾಗಿ ಸುಖವು ಕಾಣದಾಯಿತು


About The Author

Leave a Reply

You cannot copy content of this page

Scroll to Top