ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜಯಶ್ರೀ ಭ ಭಂಡಾರಿ

ಗಜಲ್

.

ಮೇಲಿಂದ ರಭಸದಿ ಧುಮ್ಮಿಕ್ಕುತ ಕರೆಯುತಿದೆ ಗೆಳೆಯಾ
ಅಲ್ಲಿಂದ ಉಬ್ಬಸದಿ ಹೊಮ್ಮಿ ಇಳಿಯುತ ಕರೆಯುತಿದೆ ಗೆಳೆಯಾ.

ಸಂದಕದಿ ಸಂತಸದ ಜಲರಾಶಿಯ ಚಿಮ್ಮುವುದ ನೋಡಬಾರದೇ ಒಮ್ಮೆ
ಕಂದಕದಿ  ಬಿಳಿಯ ಸೌಂದರ್ಯ ಅಲೆದು ಮೊರೆಯುತಿದೆ ಗೆಳೆಯಾ.

ಕಾಡಿನ ಪರಿಸರ ಚಂದದಿ ಜೊನ್ನಮಳೆ ಸೂರೆಗೊಂಡಿಹುದು.
ನಾಡಿನ ಸೊಬಗು ಆನಂದದಿ ಮರಳಿ ಎರೆಯುತಿದೆ ಗೆಳೆಯಾ.

ಮನದನ್ನೆಯ ಹೃದಯ ಕಮಲ ಅರಳಿ ಹೂಬಾನವಾಗಿದೆ.
ಕನಸಕನ್ನೆಯ ಆಶೆಗಳು ಅವಸರಿಸುತ ಮೆರೆಯುತಿದೆ ಗೆಳೆಯಾ.

ಲವಲವಿಕೆ ಚೆಲ್ಲಾಡಿ ಧರಣಿಯ ತಣಿಸಿ  ಸಾಗುತಿದೆ ಮಲೆಸಾಲು
ಸುಲಲಿತ ತಂಪು ಎರಚಿ ಜಯಳ ಕುಣಿಸಿ ಬೆರೆಯುತಿದೆ ಗೆಳೆಯಾ


About The Author

Leave a Reply

You cannot copy content of this page

Scroll to Top