ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಹೆರಳಿಗೆ ಕಾಮನ ಬಿಲ್ಲನ್ನು ಮುಡಿಸುವೆ
ನೀನೊಪ್ಪಿದರೆ
ಪಾದಕೆ ಮದರಂಗಿ ಮೆರಗು ಕೊಡಿಸುವೆ
ನೀನೊಪ್ಪಿದರೆ

ಬದುಕಿನ ಸಂತಸದ ಕ್ಷಣಗಳನ್ನು ತೊರೆದು
ಬಾಳಲೇನು
ತನುವಿಗೆ ರೇಷ್ಮೆ ಸೀರೆಯ ಉಡಿಸುವೆ
ನೀನೊಪ್ಪಿದರೆ

ಜಗವ ಸುತ್ತಿದರೂ ಸಿಗದಿರುವ ಅಮೂಲ್ಯ
ರತ್ನವಿದು
ನಲಿವ ಕರಗಳಿಗೆ ಹೊನ್ನಬಳೆ ತೊಡಿಸುವೆ
ನೀನೊಪ್ಪಿದರೆ

ವದನದಿ ಹಾಸಬೀರಿ ಸುಮ್ಮನೆ ಕೂಡಬೇಡ
ಗೆಳತಿ
ನಡೆವ ಹಾದಿಗೆಲ್ಲ ಚಿತ್ತಾರ ಬಿಡಿಸುವೆ
ನೀನೊಪ್ಪಿದರೆ

ಸ್ವರ್ಗದಲಿ ನಿಶ್ಚಯಿಸಿ ಒಂದಾದ ಒಲವಿನ
ಜೋಡಿಯಿದು
ಅಭಿನವನಿಂದ ಪ್ರೇಮಗೀತೆ ಹಾಡಿಸುವೆ
ನೀನೊಪ್ಪಿದರೆ


About The Author

Leave a Reply

You cannot copy content of this page

Scroll to Top