ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಡಿ ಮೀರಿದ್ದು.ಸ್ಮಿತಾಭಟ್ ಕವಿತೆ

ಕಾವ್ಯ ಸಂಗಾತಿ ಗಡಿ ಮೀರಿದ್ದು. ಸ್ಮಿತಾಭಟ್ ಒಲವಿಗೆ ಕಸಿ ಮಾಡುವ ಯೋಜನೆ ಕೈಗೊಳ್ಳಬಾರದುನೆಲದ ಕಾವಿನಲಿ ಒಡೆದ ಮೊಳಕೆ ಚಿವುಟಬಾರದುಬೆಳಕಿನ ಗೆರೆ ಹಿಡಿದು ಸಾಗಿಮತ್ತೆ ನೆಲಕ್ಕೆ ಅಪ್ಪಳಿಸುವ ಬಿಂದುಅಲ್ಲಿ ಕೈ ಗೊಂಡಿದ್ದು ಏನುಒಂದು ಭರವಸೆ ಮತ್ತು ಪ್ರೀತಿನಂಬಿ ಕಾಯುವ ಬುವಿ,ಬಾನುಎಲ್ಲವೂ ಗಡಿ ಮೀರಿದ್ದು ಗಡಿ ಗೆರೆಗಳನೇ ಬದುಕಾಗಿಸಿಕೊಂಡಮನುಷ್ಯ ಸ್ವಾರ್ಥಕ್ಕಷ್ಟೆ ಸೀಮಿತಯುಗಗಳೇ ಕಳೆದಿವೆಪ್ರೇಮದ ಸರಹದ್ದು ದಾಟಿ.ಬರೀ ಭ್ರಮೆಗಳಲೇ ಬದುಕುಹಾಸಿಕೊಳ್ಳಲಾಗದು.ಆಗೀಗ ಆತು ಕೊಳ್ಳಲಾದಾರೂನಂಬಿಕೆಗಳು ಬೇಕು.ಭಾವಗಳ ಬದಿಗೊತ್ತಿ,ಕಳಚಿ ಕೊಳ್ಳುವ ಪೊರೆಹಾವು, ಚಿಟ್ಟೆ ಏನು ಬೇಕಾದರೂಆಗಬಹುದು. ಪ್ರತೀ ಗಡಿಗೂ ಫಲಕಗಳ ಕೆತ್ತುತ್ತಾರೆಹೆಜ್ಜೆ ಇಟ್ಟಲೆಲ್ಲ ಗಡಿ ದಾಟಿದ ಭಾವಆಗಸವನ್ನಷ್ಟೇ ನೋಡ ಬಯಸುವ ನಾನುಒಸರುತ್ತದೆ ಹೆಬ್ಬೆರಳು ಕಗ್ಗಲ್ಲು ತಾಕಿಒಲವಿಗೆ ಗಡಿ ಗೆರೆಗಳಿಲ್ಲಮುಕ್ತಾಯ ಆರಂಭಗಳಿಲ್ಲಸ್ವಾಗತ ಬೀಳ್ಕೊಡುಗೆಗಳೂ ಇಲ್ಲನೆಲದ ಹಂಗು ತೊರೆದ ಹಕ್ಕಿ ಸದಾ ಸುಖಿ. ಸ್ಮಿತಾಭಟ್

ಗಡಿ ಮೀರಿದ್ದು.ಸ್ಮಿತಾಭಟ್ ಕವಿತೆ Read Post »

You cannot copy content of this page

Scroll to Top