ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನ್ನವೇ ದೈವ

ಜಯಲಕ್ಷ್ಮಿ ಎಂ ಬಿ

ಹಸಿದವಗೆ ಅನ್ನವನು ಇಕ್ಕಿದೆಡೆ ತೃಪ್ತನವ
ಹಸಿದು ಬೇಡಿದೆಡೆ ಬಡಿಸದಿರಬೇಡ
ಹಸಿದವನು ತುಂಬಿದೆಡೆ ಹರಸುವನು ಎಂದೆಂದು
ಹುಸಿಯನೆಂದು ನುಡಿಯನು ತಿಳಿದು ಬದುಕು

ದಾನದಾನಗಳಲ್ಲಿ ಅನ್ನದಾನವೆ ಮೇಲು
ದಾನವನು ನೀಡಿದೆಡೆ ಪಾಪವಿರದು
ಪಾನವನು ನೀಡುತಲಿ ಊಟವನು ಬಡಿಸಿದೆಡೆ
ದಾನಿಯನು ಮರೆಯನವ
ಅರಿತುನೋಡು

ಮಾನವನ ಆಸೆಯನು ಪೂರೈಸಿ ಫಲವಿಲ್ಲ
ದಾನವದು ದೊರೆತಷ್ಟು ಬೇಡುತಿಹನು
ದಾನದಲಿ ಅನ್ನವದು ಮತ್ತಷ್ಟು ದೊರೆತಾಗ
ಮಾನವನು ಹೊಂದುವನು ತೃಪ್ತಿಯನ್ನು

ಅನ್ನವನು ನೋಡುತಿರೆ ಭಗವಂತ ಕಾಣುವನು
ತಿನ್ನುತಲಿ ನೆನೆಯುತಿರು ದಾತನನ್ನು
ಅನ್ನದಾ ಅಗುಳಿನಲಿ ಶ್ರಮವಿಹುದು ರೈತನದು
ಅನ್ನವೇ ಸರ್ವಸ್ವ ಬಸವೇಶ್ವರ


ಜಯಲಕ್ಷ್ಮಿ ಎಂ ಬಿ

About The Author

Leave a Reply

You cannot copy content of this page

Scroll to Top