ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಬೆಂಶ್ರೀ ರವೀಂದ್ರ

ಕವಿ ಸುಂದರ ಮಲ್ಲಿಗೆಯ ನಿನಗೆ ಹೋಲಿಸಿ ಎಡವಿದ್ದಾನೆ
ಹೂವು ಬಾಡಿ ಕಮರುವುದರಿತೂ ಯಾಮಾರಿಸಿ ಎಡವಿದ್ದಾನೆ

ವಾಸನೆ ಹೀರಿ ವಿಟ ಮುಂಗೈಗೆ ಸುತ್ತಿದ ಹೂಗೊಂಡೆಯ ಬಿಸುಡುತ್ತಾನೆ
ಅಮಲು ಮತ್ತು ಏರಿ ತೂರಿಹೋದ
ವಾಸ್ತವ ಮರಸಿ ಎಡವಿದ್ದಾನೆ

ದುಂಬಿಗಳು ಕಾಲೂರಿ ಮುಳ್ಳುದಾಡೆಗಳ ಚುಚ್ಚಿ ಮಧು ಹೀರುತ್ತವೆ
ಜೇನಸಿಹಿಯ ತಾಬಾಣದಲಿ ತುಂಬದೆ ಜಾರಿಸಿ ಎಡವಿದ್ದಾನೆ

ಅಪ್ಪಿ ಅರಳಿಸಿದ ಮುಗುಳ ಪಕಳೆಗಳ ಭಾನುವೆ ಸುಟ್ಟಿದ್ದಾನೆ
ರಕ್ಷಿಸದ ಕವಿ ಪ್ರಣಯ ಕಥೆಯ ತೆರೆ ಹೊದಿಸಿ ಎಡವಿದ್ದಾನೆ

ಗಡಿಮೀರಿ ಏರಿದ ಬೆಲೆಗೆ ಗೆಳತಿಯರು ಸೆಟೆದಿದ್ದಾರೆ
ಭಾವಾರ್ಥಕೆ ಬೆಲೆನೀಡದೆ ಕವಿ ಚಲಾರ್ಥಕೆ ಕೈಏರಿಸಿ ಎಡವಿದ್ದಾನೆ

ಮಾತುಗಳಿಗೆ ಬಣ್ಣ ಬೆರಸಿ ಮಲ್ಲಿಗೆಯಲ್ಲಿ ನಿನ್ನ ತೂಗಿದ್ದಾನೆ
ಒಲಿಸಲು ತನಗೆ ತಾ ತಲೆದೊಗಿ ಗಗ್ಗರಿಸಿ ಎಡವಿದ್ದಾನೆ

ಹೋಲಿಕೆ ಇಲ್ಲದ ನೀನೇ ಎಲ್ಲಕಿಂತ ಮಿಗಿಲೆಂದವ ಮರೆತಿದ್ದಾನೆ
ತಡವಿಬಿಡು ರವಿತೇಜ ಹೇಳುವ ತಿಳಿಸಿ ಎಡವಿದ್ದಾನೆ.


About The Author

Leave a Reply

You cannot copy content of this page

Scroll to Top