ವೀಣಾ ನಿರಂಜನ ಕವಿತೆ ಖಜಾನೆ
ವೀಣಾ ನಿರಂಜನ ಕವಿತೆಗಳು
ವೀಣಾ ನಿರಂಜನ ಕವಿತೆ ಖಜಾನೆ Read Post »
ಕಾವ್ಯ ಸಂಗಾತಿ ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೮೬)ಕವಿತೆ ಸುರಿಸುವ ಹನಿಗಳುಮನಸ್ಸಿನ ಮಧುರ ಸ್ವರಗಳುಕವನದೊಂದಿಗೆ ಉಷೋದಯಹಕೀಮಾಕವಿತ್ವದಿಂದ ದಕ್ಕುವುದು ಅಭಯ. ೮೭)ಜುಬ್ಬವೋ ಅಂಗಿಯೋ ಜೇಬು ತುಂಬಬೇಕಷ್ಟೇಜೈಕಾರ ಕೂಗುವರು ಬಾವುಟಗಳು ಹೊರುವರುಮತ್ತೆ ಪ್ರಾಮಣಿಕತೆ ಪಾಠ ಮಾಡುವರುಹಕೀಮಾಅಲ್ಲಾಹ್ ನೋಡುವುದಿಲ್ಲವೆಂದೆ ಇವರ ನಂಬಿಕೆ? ೮೮)ಜಮಾತುಗಳ ಹೆಸರಿನಲ್ಲಿ ಸಮಾಜದಲ್ಲಿ ಗೌರವಅಧಿಕಾರಕ್ಕಾಗಿ ಗುಂಪುಗಾರಿಕೆಯ ಅಹಂಕಾರಇವರು ಯಾರ ಕಾರುಣ್ಯವನ್ನು ಕೋರುತ್ತಿದ್ದಾರೆ?ಹಕೀಮಾಜನರ ಪ್ರೀತಿಗಾಗಿಯೋ ಇಲ್ಲ ಸ್ವ ಕೀರ್ತಿಗಾಗಿಯೋ? ೮೯)ವಾಸ್ತವದಲ್ಲಿ ನಡೆಯುತ್ತಿರುವುದು ಹಲಾಲಾಹಲಾಲಿನ ಮುಸುಕಿನಲ್ಲಿ ಹರಾಮಾ?ನಮಗೆ ಅಡ್ಡ ಬರದವರೆಗೇ ಏನಾದರೂಹಕೀಮಾಅಡ್ಡ ಬಂದರೆ ದೀನ್ ಆದರೂ ನೈ ಜಾಂತಾ. ೯೦)ಲೋಕ ಕಾಗೆಯಂತೆ ತಿವಿಯುತ್ತಿದೆನಿನಗೆ ಉಗ್ರವಾದಿಯ ಮುದ್ರೆಯೊತ್ತುತ್ತಿದೆನೀನು ಮಾತ್ರ ಮಣಿಗಳನ್ನು ಏಣಿಸುತ್ತಿರುಹಕೀಮಾನಿನ್ನಲ್ಲಿ ವಿಶ್ವಾಸ ಧೈರ್ಯ ಇದೆಯಾ? ಪದದಗಳ ಅರ್ಥ :-ಜಮಾತ್ = ಧಾರ್ಮಿಕ ಸಮೂಹ/ಸಭೆಹಲಾಲ್ = ಧರ್ಮ, ಹರಾಮ್ = ಅಧರ್ಮದೀನ್ = ಧರ್ಮ ೯೧)ಉಷಃಕಾಲ ಕಂಬಳಿ ಹೊದ್ದುಕೊಂಡಿದೆಊಹೆಗಳ ಉತ್ಸವ ಆರಂಭವಾಗಿದೆನಿಮ್ಮ ತಾತನವರು ಅಂದೆಂದೋ ನವಾಬರಾಗಿದ್ದರಂತೆಹಕೀಮಾನೀವು ಮಾತ್ರ ಗುಲಾಮರಂತೆ ಬದಲಾಗುತ್ತಿದ್ದೀರಿ. ೯೨)ಸಾಕು ಸಾಕಾಗದ ಉದ್ಯೋಗಗಳುಸಾಯಂಕಾಲಕ್ಕೆ ಚಿಕನ್ ತುಣುಕುಗಳುಗಳಿಕೆಯೆಲ್ಲಾ ಅನಗತ್ಯ ಖರ್ಚುಗಳುಹಕೀಮಾಪ್ರವಾದಿಯವರ ವಿಧಾನವನ್ನು ಯಾವಾಗ ಪಾಲಿಸುವುದು? ೯೩)ಕೂಲಿಯಾಗಿ, ಕಾರ್ಮಿಕನಾಗಿ, ರಿಕ್ಷಾವಾಲನಾಗಿಆಯಿಲ್, ದುಮ್ಮು-ಧೂಳು, ಬೆವರಿನಲ್ಲಿಹೊಟ್ಟೆಪಾಡಿಗಾಗಿ ದುಡಿದು ದಣಿಯುವೆಯಲ್ಲಾಹಕೀಮಾನಿನಗಿಲ್ಲವೆ ಪಲ್ಲಕ್ಕಿಯನ್ನೇರುವ ಅಧಿಕಾರ? ೯೪)ಇಂದಿಗೂ ಸಾಕು ಸಾಲದ ಕೆಲಸಗಳಲ್ಲಿ ಕೊಳೆಯುತ್ತಅರ್ಧ ಹೊಟ್ಟೆಯ ಉಪವಾಸದಲ್ಲಿ ಬೇಯುತ್ತಕೊತಕೊತ ಕುದಿಯುತ್ತ ಆವಿಯಾಗುತ್ತಿಹೆವುಹಕೀಮಾನಮಗಾಗಿ ಇನ್ನೊಂದು ಮಹಾಮಾರಿ ಕಾಯುತ್ತಿಹುದೆ? ೯೫)ಯಾಕೆ ಆತ್ಮಹತ್ಯೆಗಳನ್ನು ಮಾಡಿಕೊಳ್ಳುವುದು?ಇದೇನಾ ನಮಗೆ ಕಲಿಸಿದ ಜೀವನ ವಿಧಾನ!ದೇವರಿಗಿಂತ ಮನುಷ್ಯರಿಗೇ ಭಯಪಡುತ್ತಿದ್ದೀರಾ?!ಹಕೀಮಾಇದು ಬಲಹೀನ ವಿಶ್ವಾಸದ ಸಮಾಜವೆ? ೯೬)ದೈವವನ್ನು ನಂಬುವುದೆಂದರೆ ವೇಷಧಾರಣೆಯೆ?ಇಲ್ಲವೆ ಸಂಘಗಳ ಏರ್ಪಾಟುಗಳ ಆರ್ಭಟವೆ?ನಮ್ಮಲ್ಲೇ ಇಲ್ಲ ಒಗ್ಗಟ್ಟುಹಕೀಮಾನಿಜವಾಗಿಯೂ ನಾವು ದೈವದ ಮಕ್ಕಳೇನಾ? ೯೭)ಯಾರೋ ಒಬ್ಬರು ಬಲಿಯಾದರಷ್ಟೇಸ್ವಲ್ಪ ಹೊತ್ತು ಬೀದಿಗಿಳಿದು ಪ್ರದರ್ಶನ ಮಾಡುವೆವುಟೀವಿಗಳಲ್ಲಿ, ಪತ್ರಿಕೆಗಳಲ್ಲಿ ಪ್ರಕಟಣೆಗಳು ಸಮಾವೇಶಗಳುಹಕೀಮಾಮತ್ತೆ ಬೆಳಗಾದರೆ ದುರಸ್ತಿಗಳೇ ಜೀವನ. ೯೮)ನೈತಿಕ ಮೌಲ್ಯಗಳೆನ್ನುತ್ತಾರೆವ್ಯಾಪಾರದಲ್ಲಿ ಮೋಸ ಮಾಡುತ್ತಾರೆಅಲ್ಲಾಹ್ ಕಸಮ್ ಎಂದು ನಂಬಿಸುತ್ತಾರೆಹಕೀಮಾಅಲ್ಲಾಹ್ ಅಂದ್ರೆ ಅಷ್ಟು ಸಾಮಾನ್ಯ ಪದವೆ? ೯೯)ರೋಗಿಗೆ ಬೇಕಿರುವುದು ಚಿಕಿತ್ಸೆಮಂತ್ರಿಸುವ ಕಾಯಿಗಳುದಾರದ ತಾಯತ್ತುಗಳು ಅಲ್ಲವಲ್ಲಾಹಕೀಮಾಬಾಬಾಗಳಿಂದ ಬಾಧೆಗಳು ದೂರವಾಗುವವೆ? ೧೦೦)ಕಪಟವು ಮನುಷ್ಯನಲ್ಲಿ ನೆಲೆಯೂರಿದೆಯಾರನ್ನು ಮೋಸ ಮಾಡುತ್ತಿದ್ದಾನೆಸಮಾಜವನ್ನಾ? ಇಲ್ಲ ದೈವವನ್ನಾ?ಹಕೀಮಾವಾಸ್ತವವಾಗಿ ತನಗೆ ತಾನೇ ಮೋಸಹೋಗುತ್ತಿದ್ದಾನೆ. ೧೦೧)ಬಡವನೆಂದರೆ ಎಲ್ಲರಿಗೂ ತಾತ್ಸರವೇಗುಲಾಮಗಿರಿಗೆ ವಾರಸತ್ವವೆ?ಮತ್ತೆ ಯಾಕೆ ನೀಚವಾಗಿ ಕಾಣುವಿರಿಹಕೀಮಾಮಹಮ್ಮದ್ (ಸ) ಬಡವರೇ ಅಲ್ಲವೆ! ೧೦೨)ಧರ್ಮವೆಂದರೆ ದೈವಾಜ್ಞೆಗಳ ಸಾರಇವರೇನು ತಲಾ ಒಂದೊಂದು ದಿಕ್ಕು!ಎಲ್ಲರಿಗೂ ತಮ್ಮದೇ ವ್ಯಾಪಾರದ ಗುಂಗುಹಕೀಮಾಅಸಲು ಧರ್ಮವೆಂದರೇನು ಅಂತ ಬಲ್ಲರೆ? ೧೦೩)ದೈವ ಸಂದೇಶವೇನಾದರೂ ಉದ್ಯೋಗವೆ?ರಜಾ ದಿನಗಳಲ್ಲಿ ಸಾರಲುಸಂಘಗಳಲ್ಲಿ ಎಲ್ಲರೂ ಅವರೇನಾ?ಹಕೀಮಾದೈವವೆಂದರೆ ಭಯವಿದ್ದರೆ ಅಲ್ಲವೆ! ೧೦೪)ಅಕ್ಕಪಕ್ಕದವರೊಡನೆ ಜಗಳಗಳುಸಮಾಜದಲ್ಲಿ ಸುಧಾರಕರಂತೆ ನಾಟಕಗಳುನಿಮ್ಮ ವೇಷಭೂಷಣಗಳೆಲ್ಲಾ ಬರೀ ತೋರಿಕೆಯೆ?ಹಕೀಮಾದೈವಕಾರ್ಯದಲ್ಲೂ ಕಣ್ಣಾಮುಚ್ಚಾಲೆಯಾಟವೆ! ೧೦೫)ಮಾತುಗಳಷ್ಟೇ ಆಚರಣೆ ಎಲ್ಲಿನಿನ್ನ ಮನದ ಕನ್ನಡಿಯಲ್ಲಿ ನೋಡುವಾಸ್ತವದ ಬೆಳಕಿನಲ್ಲಿ ಬದುಕುಹಕೀಮಾಇಹಲೋಕದಲ್ಲಿ ನೀನು ದಾರಿಹೋಕನೇ! ೧೦೬)ಹಣದ ಮೇಲೆಷ್ಟು ವ್ಯಾಮೋಹ!ಹೆಜ್ಜೆ ಹೆಜ್ಜೆಗೂ ವಂಚನೆಗಳುದುಡ್ಡೇ ಸರ್ವಸ್ವವೆ?ಹಕೀಮಾಇದೊಂದು ದೊಡ್ಡ ಪರೀಕ್ಷೆ ಹುಷಾರು. ೧೦೭)ಆತ್ಮೀಯತೆ ಅನುರಾಗಗಳುಇಂದು ಹೇಳಿಕೊಳ್ಳಲ್ಲಷ್ಟೇನಾಮನುಷ್ಯ ಮನುಷ್ಯನನ್ನೇ ನಂಬುವುದಿಲ್ಲಹಕೀಮಾದೈವದ ಮೇಲಾದರೂ ನಂಬಿಕೆ ಇದೆಯಾ? ೧೦೮)ಕಷ್ಟಗಳಲ್ಲಿದ್ದರೆ ಸಲಹೆಗಳನ್ನು ಕೊಡುತ್ತಾರೆಹಸಿವಿನಲ್ಲಿರುವವರಿಗೆ ಅನ್ನ ನೀಡಬೇಕುಮಾತುಗಳಿಂದ ಹಸಿವು ನೀಗುವುದೆ?ಹಕೀಮಾಸಲಹೆಗಳಿಂದ ಕಷ್ಟಗಳು ತೀರುವವೆ? ೧೦೯)ಬಲವೆಂದರೆ ತೋಳ್ಬಲವೆ?ಇಲ್ಲ ಧನ ಬಲವೆ?ಅಧಿಕಾರ ಬಲವೆ?ಹಕೀಮಾಅಸಲು ಬಲವೆಂದರೆ ವಿಶ್ವಾಸವೇ ಅಲ್ಲವೆ! ೧೧೦)ನಿಶ್ಶಬ್ದವು ಶಾಂತಿ ಚಿಹ್ನೆಯೆ?ಹೇಡಿತನದ ಪ್ರತಿರೂಪವೆ?ನಮ್ಮನಾವಾಹಿಸಿದ ಒಳ್ಳೆಯತನವೆ?ಹಕೀಮಾತಪ್ಪನ್ನು ಮನಸ್ಸಿನಲ್ಲೂ ತಡೆಯಲಾರದವರು! ೧೧೧)ಗತವನ್ನು ಅನುಭವದಿಂದ ನೋಡುಪ್ರಸ್ತುವವನ್ನು ಆಚರಣೆಯಿಂದ ಮಾಡುಭವಿಷ್ಯತ್ತಿಗೆ ದಾರಿಗಳನ್ನು ನಿರ್ಮಿಸುಹಕೀಮಾಪರಲೋಕವೇ ಅಲ್ಲವೆ ಅಸಲಿ ಭವಿಷ್ಯತ್ತು. ೧೧೨)ಜೀವನವೆಂದರೆ ವಿಲಾಸಗಳ ವಾಹನವೆ?ಎಲ್ಲೆಗಳಿರದ ವ್ಯಸನಗಳಮಯವೋ?ಮನೋವ್ಯಾಧಿಗಳ ತವರು ಮನೆಯೆ?ಹಕೀಮಾಪ್ರವಾದಿಯವರ ಮಾತೇ ಬದುಕಿಗೇ ಹೂದೋಟ. ೧೧೩)ಊಹೆಗಳಲ್ಲಿ ಎಷ್ಟು ಹೊತ್ತು ಕಳೆಯುವೆ?ಇಸ್ಪೀಟೆಲೆಗಳ ಮಹಡಿಗಳು ಕುಸಿದು ಬೀಳುವವುಸ್ಥಿರವಾದ ನಿರ್ಣಯಗಳನ್ನು ತೆಗೆದುಕೋಹಕೀಮಾದೈವದೊಂದಿಗೆ ನಂಟನ್ನು ಹೆಚ್ಚಿಸಿಕೋ. ೧೧೪)ಕುಸಿಯುತ್ತಿವೆ ಕನಸುಗಳು!ಕರಗುತ್ತಿವೆ ಕಾಲಗಳು!ಎಂದು ಬರುವುದು ಆತ್ಮಸ್ಥೈರ್ಯ?ಹಕೀಮಾಆಚರಣೆಯೇ ನಿನ್ನ ಜೀವನದ ಗೆಲುವು. ೧೧೫)ನಿನ್ನಲ್ಲಿ ಉಕ್ಕುವ ಭಾವಗಳೇಉದ್ವೇಗ ಭರಿತ ಜ್ವಾಲೆಗಳುನೀತಿಗಾಗಿ ಹೋರಾಡುವ ವೀರನಾಗಿಹಕೀಮಾಬದುಕು ವಿಶ್ವಾಸಿಯಾಗಿ ಚಿರಕಾಲ.
ಕಾವ್ಯ ಸಂಗಾತಿ ಅಪಸ್ವರ ಅತಿಯಾದರೆ ಅಮೃತವೂ ವಿಷವಾಗುತ್ತದೆಸಕ್ಕರೆಯು ಕಹಿಯಾಗುತ್ತದೆಕೋಗಿಲೆಯು ಕರ್ಕಶ ವಾಗುತ್ತದೆಮಲ್ಲಿಗೆಯು ಗಡಸಾಗುತ್ತದೆಸಂಪಿಗೆ ದುರ್ಗಂಧ ಬೀರುತ್ತದೆಮಮತೆ ಮಂದವಾಗುತ್ತದೆಮಾಧುರ್ಯ ಹೇಸಿಗೆಯಾಗುತ್ತದೆಪ್ರೀತಿ ಅಸಹ್ಯವಾಗುತ್ತದೆಅಲ್ಪನಿಗೆ ಐಶ್ವರ್ಯ ಬಂದರೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆಬಡವನಿಗೆ ಹಳಸನ್ನ ಮೃಷ್ಟಾನ್ನ ವಾಗುತ್ತದೆಮಿತವಾದರೆ ಎಲ್ಲವೂ ಹಿತಅತಿಯಾದರೆ ಅಪಸ್ವರ ಶಾಲಿನಿ ಕೆಮ್ಮಣ್ಣು
ಕಾವ್ಯ ಸಂಗಾತಿ ಆಹತಗೊಂಡವಳು ಪುಣ್ಯಕೋಟಿಯ ನಾಡು ನಮ್ಮದುವಚನ ಕೀರ್ತನಗಳ ನುಡಿ ನಮ್ಮದುಮಾತುಕೊಟ್ಟರದುವೆ ಶಾಸನಬೇಕಿಲ್ಲ ಸರಪಣಿ ಕಾಯ್ದೆ ಕಾನೂನುಚಂದ್ರಾರ್ಕರಿರುವರೆಗೂ ನಮ್ಮ ಗೆಳೆತನ ಅಕ್ಕಪಕ್ಕದವರು ಸುತ್ತಲಿರುವವರುತದ್ವಿರುದ್ಧ ಪೋಷಾಕುಗಳುಮೌಲಿಕ ರುಜುವಾತುಗಳುರದ್ದಾಗುತ್ತವೆ, ಅಮಾನ್ಯ ವಾಗತ್ತವೆದೇಶದ್ರೋಹಿಗಳ ಹೀನಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದಾದರೂಸ್ನೇಹದೆಳೆಗಳೆಲ್ಲ ಸಿಕ್ಕು ಸಿಕ್ಕುಅಮೃತಮಹೋತ್ಸವದಲ್ಲೂಗಡಿಕಾಯ್ವ ಯೋಧನ ಸಂತಾಪಶಾಪಗ್ರಸ್ತ ಕುಟುಂಬದ ಕಣ್ಣೀರುಸುದ್ದಿ ಸಮಾಚಾರದಲ್ಲೆಲ್ಲಾಖಾತೆಗಳ ವಿಲೇವಾರಿಶ್ರಾವಣದ ತಯಾರಿಪುಟಗಟ್ಟಲೇ ಸವಾರಿ ಸಣ್ಣ ಮೂಲೆಯಲ್ಲಿಜೀವತೆತ್ತ ವೀರನಿಗೆಶಹಭಾಸಗಿರಿನೆತ್ತಿ ನೇವರಿಸದಅನಾಮಿಕ ನೆರಳುತನಿವಣ್ಣ ಬಯಸಿಬೊಗಸೆಯೊಡ್ಡುತ್ತಿದೆಮಾನವೀಯತೆಈ ಮಹೋತ್ಸವ ದಲ್ಲಿ ***** ಏಕಾಂತರಥ ನೀನಿಲ್ಲದ ಸಾಗರ ತೀರನನಗದು ಮರುಭೂಮಿ ಯಂತೆಜೀವಸೆಲೆ ತೆರೆ ತೆರೆಗಳಾಗಿ ತಾಕುತ್ತಿದ್ದರೂನನಗದು ನಿರ್ಜೀವ ದ್ರವರಾಶಿಯಂತೆ ನೀನೊಂದು ಕಡಲತಡಿಯತೀರದ ಧ್ಯಾನನಾನೊಬ್ಬ ಮರಳುಗಾಡಿನಅಲೆಮಾರಿ ಸಂತ ನೀ ಆಡಿದಾಗ ನಲಿದಾಡಿದಾಗಕಡಲ ಒಡಲು ಹಿಗ್ಗಿಆಸೆ ಮೀನುಗಳುಸರಸವಾಡಿ ಜಯಿಸುತ್ತವೆ ನಾ ನಡೆದಾಗ ಓಡಿದಾಗಏಕಾಂತರಥ ಮೆರವಣಿಗೆ ಹೊರಟಂತೆಅದೇ ಕಾಪು ತೀರದಲ್ಲಿಅದೇ ಸೋತ ವಿರಹ ಗೀತೆಯಲ್ಲಿ ವಿಭಾ ಪುರೋಹಿತ
ವಿಭಾ ಪುರೋಹಿತ ಕವಿತೆ ಖಜಾನೆ Read Post »
ಕಾವ್ಯ ಸಂಗಾತಿ ಬೆಳದಿಂಗಳ ಬಳುಕು ಅಭಿಜ್ಞಾ ಪಿ ಎಮ್ ಗೌಡ ಬಾಂದಳದ ತುಂಬೆಲ್ಲ ಹಬ್ಬಿದೆಶಶಿಯ ಪ್ರದೀಪದ ಕೀರ್ತಿರಂಜಿಸುತ ನಗಿಸುತಿರುವರಜನಿಗೆ ಬೆಳದಿಂಗಳೆ ಸ್ಫೂರ್ತಿ! ಜೊನ್ನನಂಗಳ ನೋಡುಬಳುಕುತಿದೆ ವೈಯ್ಯಾರದ ನೀರೆಯಂತೆದೀವಟಿಕೆಯ ರಾಶಿಯಲಿಜೀಕುತಿಹ ಜೇನ್ಮಳೆಯು ಸೂಸಿದಂತೆ… ಆವಾರ ತುಂಬೆಲ್ಲ ಕೌಮುದಿಯಸವಿ ತೋಮ್ ತನನನಾನನೋಡಿಲ್ಲಿ! ಒಸರುತಿದೆ ಕೊಸರುತಿದೆಅಂತರಂಗದ ನೋವಯಾನ… ಅವನಿಯ ಮುತ್ತಿಗೆಯಲಿಮತ್ತೇರಿದೆ ಕತ್ತಲ ಮೇನೆಅವನಿಲ್ಲದ ಕಸಿವಿಸಿಯ ಸಂತೆಯಲಿಸುತ್ತರಿದು ನಿಂತಿದೆ ಭಾವಬೇನೆ.. ಮನವೆಂಬ ಕೇತನದಿಆವರಿಸಿದ ಅಜ್ಞಾನದ ಕೊಳೆಯನುತೊಳೆಯಲು ಬೆಳಗಿಸಬೇಕಿದೆ ಸುಜ್ಞಾನಜ್ಯೋತಿಯೆಂಬ ಸ್ವರ್ದೀಪವನು…. ಹೃದಯದ ಗಲ್ಲಿಗಲ್ಲಿಯಲುಮಂದಬೆಳಕಿನ ಹೊಳಪು ಕುಂದುತಿದೆಇಗೋ.!ಅವನಿರದೆ ಈ ಬಾಳುಜಡತುಂಬಿದ ಕೃದರವಾಗುತಿದೆ… ಮೇಣದ ಬತ್ತಿಯಂತಾಗಿ ಈ ಬದುಕುತನ್ನೆಲ್ಲ ನೋವ ಬಚ್ಚಿಟ್ಟುಮೆರೆಯುತಿದೆ ಮೆರೆಸುತಿದೆಬಂಜರಾದ ಒಡಲೆಲ್ಲಾ ಸುಟ್ಟು…
ಪಿ ಆರ್.ವೆಂಕಟೇಶ್ ಕವಿತೆಗಳು
ಪಿ.ಆರ್.ವೆಂಕಟೇಶ್ ಕವಿತೆ ಖಜಾನೆ Read Post »
You cannot copy content of this page