ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಇಳಿಸಂಜೆ

ಶಂಕರಾನಂದ ಹೆಬ್ಬಾಳ

ಒಂದು ಶ್ಯಾಮಲ ಸಂಜೆ
ವಿಶಾಲ ನೀರವದ ಇಳಿಮೌನದಿ
ಏಕಾಂತದ ಭಾವದೊಳು
ತೆರಳುತ್ತಿದ್ದೆ,
ಅದೇಕೋ ಮನ ಮೆಲ್ಲ ಅದುರಿತು…!

ತೆರಗಲೆ ಒಮ್ಮೆಲೆ
ಬೀಸುವ ತಂಗಾಳಿಗೆ
ಜಾರಿ ಇಳೆಗೆ ತಾಗುವ
ಸಮಯ ವಾವ್…..ಎನ್ನುವ
ಉದ್ಘಾರದ ಭಾವ….!

ಜಾರುತಿರುವ ನನ್ನ ನೋಡಿ
ಹಲ್ಕಿರಿಯಿತು..
ಸ್ತಬ್ದನಾದೆ
ದುರ್ದೇಸೆಯ,
ಚಿಂತಾಕ್ರಾಂತ ಪರ್ಣ ಅಳುತ್ತಲೆ
ಜಾರುತ್ತಿದೆ.
ಮುಂದೊಮ್ಮೆ ನೀನು ಹೀಗೆಯೆ…!

ಜಗದ ಜಂಜಡಗಳ
ಮರೆತು ಕೊನೆಗೆ
ಇಹವನ್ನೆಲ್ಲ ತೊರೆದು
ಧರಣಿತಳದಲ್ಲಿ ಸೇರಿಹೋಗುವೆ
ಎಷ್ಟು ವಾಸ್ತವ ಸತ್ಯ…!

****************************

About The Author

Leave a Reply

You cannot copy content of this page

Scroll to Top