ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈತ ಗಜಲ್

How Social Networks Are Helping Indian Farmers Hit By the Coronavirus  Lockdowns | Development | RESET.org

ಬೆಳೆದ ಬೆಳೆಗೆ ಈಗಲಾದರೂ ಬೆಲೆ ಬರುವುದೆಂದು ಕಾದಿದ್ದೇನೆ
ಕಷ್ಟ ಕೋಟಲೆ ಆಗಲಾದರೂ ಕಳೆವುದೆಂದು ನಿರೀಕ್ಷಿಸಿದ್ದೇನೆ

ಸಾಲ ಶೂಲವಾಗಿ ಪ್ರತಿಕ್ಷಣ ಇರಿದಿರಿದು ನರಳಿಸುತ್ತಲೇ ಇದೆ
ಕಂಡ ಕನಸುಗಳು ನನಸಾಗುವ ಕಲ್ಪನೆಯಲಿ ಮುಳುಗಿದ್ದೇನೆ

ಹದಿಹರೆಯದ ಮಗಳ ಕಂಗಳಲಿ ನೂರಾರು ಆಸೆ ಮಿಂಚುಗಳು
ಬಿಳಿಕುದುರೆಯ ರಾಜಕುಮಾರ ಆಗಮಿಸಲೆಂದು ಬಯಸಿದ್ದೇನೆ

ಗಾಜಿನ ಬಳೆ ತೊಟ್ಟ ಸಂಗಾತಿಯ ಬಡ ಕೈಗಳು ಅಣಕಿಸುತ್ತಿವೆ
ತಪ್ತ ಮನಕೆ ತೃಪ್ತ ಭಾವ ತುಂಬುವ ಘಳಿಗೆಗೆ ಹಾತೊರೆದಿದ್ದೇನೆ

ಬಾಳಹಾದಿಯ ಕಲ್ಲು ಮುಳ್ಳು ಬದಿಗೆ ಸರಿವ ಕಾಲ ಬರಲಿ ಹೇಮ
ನೋವು, ಸಂಕಟಗಳ ಭೂತ ನೇಪಥ್ಯ ಸೇರಲೆಂದು ಹಂಬಲಿಸಿದ್ದೇನೆ

***********************************************

ಎ . ಹೇಮಗಂಗಾ

About The Author

Leave a Reply

You cannot copy content of this page

Scroll to Top