ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

 ಅರಿವೇ ಗುರು

ವಸುಂಧರಾ ಕದಲೂರು

silhouette of trees during sunset

ದೀಪ ಆರಿಸಿಬಿಟ್ಟೆ; ಸೂರ್ಯನೂ
ಮುಳುಗಿದ. ಕತ್ತಲೆಂದರೆ- ಕತ್ತಲೀಗ
ಒಳಹೊರಗೂ..

ಮೌನಕ್ಕೆ ಶರಣಾದೆ, ಕಿವುಡುತನದಲಿ.
ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ..

ಇತಿಮಿತಿಗಳ ಅರಿವಾಯ್ತು,
ನನ್ನದೂ ಮತ್ತವರಿವರದು.
ಜಾಗರೆಂದರೆ ಜಾಗರೂಕಳೀಗ.
ಒಳಹೊರಗೂ..

ಮಮತೆಯ ಕಣ್ತೆರೆದು, ಒಲವಿನಲಿ
ನೋಡಿ ನುಡಿದೆ. ಹರುಷವೆಂದರೆ
ಹರುಷವೀಗ. ಒಳಹೊರಗೂ..

ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದು
ಬಂದ. ಬೆಳಕೆಂದರೆ ಬೆಳಕೀಗ
ಒಳಹೊರಗೂ..

************

About The Author

1 thought on “ಅರಿವೇ ಗುರು”

Leave a Reply

You cannot copy content of this page

Scroll to Top