ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಎರಡನೆಯ ಅವತಾರ ಮೂಲ:ವಿಲಿಯಂ ಬಟ್ಲರ್ ಯೇಟ್ಸ್(ಇಗ್ಲೀಷ್) ಕನ್ನಡಕ್ಕೆ: ಕಮಲಾಕರ ಕಡವೆ ಎರಡನೆಯ ಅವತಾರ ತಿರುತಿರು ತಿರುಗುತ್ತ ವೃದ್ಧಿಸುವ ವರ್ತುಲಗಳಲ್ಲಿ ಭ್ರಮಿಸುತ್ತಡೇಗೆಗಾರನ ಕರೆಯ ಕೇಳಲಾರದು ಡೇಗೆಎಲ್ಲವೂ ಕುಸಿಯುತಿರಲು, ಕೇಂದ್ರಕಿಲ್ಲವೊ ಅಂಕೆಬರಿಯೆ ಅರಾಜಕತೆ ಆವರಿಸಿದೆ ಜಗದಗಲಮಸುಕುರಕ್ತದ ಉಬ್ಬರದಬ್ಬರ ಹಬ್ಬಲು, ಎಲ್ಲೆಡೆಮುಗ್ಧ ವೃತಾಚರಣೆ ಮುಳುಗಿ ಮರೆಯಾಗಿದೆ;ದಕ್ಷರೊಳಗಿಲ್ಲ ಒಂದಿನಿತೂ ನಂಬಿಕೆ, ಅದಕ್ಷರಲೋಉತ್ಕಟ ಉದ್ರೇಕವೇ ತುಂಬಿಕೊಂಡಿದೆ ದಿವ್ಯದರ್ಶನವೊಂದೇನೋ ಖಂಡಿತ ಬಳಿಸಾರಿದೆಎರಡನೆಯ ಅವತಾರ ಖಂಡಿತ ಬಳಿಸಾರಿದೆಎರಡನೆಯ ಅವತಾರವೆಂದೊಡನೆಯೇವಿಶ್ವಚೇತನವೊಂದರ ವಿಶಾಲ ಆಕಾರಕಾಡುವುದು ನನ್ನ ದೃಷ್ಟಿಯನ್ನು: ಬೀಳು ಬೆಂಗಾಡು;ಸುಡುಸೂರ್ಯನ ನಿಷ್ಕರುಣ ಮತ್ತು ಬೋಳು ನೋಟಹೊತ್ತ ನರಸಿಂಹ ರೂಪವೊಂದುಹಗುರ ಹೆಜ್ಜೆ ಹಾಕಿದೆ, ಅದರ ಸುತ್ತಲೂ ನೆರೆದಿವೆಮರುಭೂಮಿಯ ಕುಪಿತ ಪಕ್ಷಿಗಳ ನೆರಳುಗಳು. ಕತ್ತಲು ಕವಿಯುತ್ತಿದೆ ಮತ್ತೆ, ಆದರೂ ನಾ ಬಲ್ಲೆಇಪ್ಪತ್ತು ಶತಮಾನಗಳ ಕಲ್ಲಿನಂತ ನಿದ್ದೆಕದಲಿದೆ ದುಃಸ್ವಪ್ನವಾಗಿ ತೊಟ್ಟಿಲು ತೂಗಿದಂತೆ,ಯಾವ ಒರಟು ಪಶು ತನ್ನ ಕಾಲ ಸನ್ನಿಹಿತವಾದಂತೆಬೆಥ್ಲೆಹೆಮ್ಮಿನೆಡೆ ಮರುಹುಟ್ಟಿಗಾಗಿ ಹೆಜ್ಜೆ ಹಾಕಿದೆ? ********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಹೀಗೊಂದುಕವಿತೆ ವಿಜಯಶ್ರೀ ಹಾಲಾಡಿ ನರಳುತ್ತಿರುವ ಬೀದಿನಾಯಿಯಮುಗ್ಧ ಆತ್ಮಕ್ಕೂಅದ ಕಂಡೂ ಕಾಣದಂತಿರುವನನ್ನ ದರಿದ್ರ ಆತ್ಮಕ್ಕೂಅಗಾಧ ವ್ಯತ್ಯಾಸವಿದೆ ! ಮಗುವಿಗೆ ಉಣಿಸು ಕೊಡುವನನ್ನ ಕೈಗಳೇಬೀದಿ ನಾಯಿಮರಿನಿಮ್ಮ ಮಗುವಲ್ಲವೇ? ? ತಿನಿಸು ಉಡುಪು ದುಡ್ಡುಖುಷಿ ನಗು ಗಿಗುಎಲ್ಲ ನಿನಗೇ ಎಂದುಭಾವಿಸುವ ಮೂರ್ಖ ವಿಜೀಅನ್ನವಿಲ್ಲದ ನೆಲೆಯಿಲ್ಲದಆ ಮೂಕಪ್ರಾಣಿಗಳಿಗೇನುಉತ್ತರಿಸುವೆ? ಯಾರೋ ಹೊಡೆದರುಮರಿನಾಯಿ ಅತ್ತಿತುತಾಯಿ ಜೀವಅದೆಷ್ಟನೆ ಸಲವೋಸತ್ತಿತು! !*****************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಶಶಿಕಾಂತೆ ನೀನು ಮುಗ್ದೆ,ಅಮಾಯಕಿ,ಮೋಸ ಮಾಡಲಾರೆ ನಿನಗೆ ಎಂದನವಳಿಗವನು ಸಾಕಿ.. ಮೋಸ ಮಾಡಿದರೆ ದೇವರೊಳಿತು ಮಾಡೋಲ್ಲ ಎಂದು ನಂಬಿಸಿದನು ಸಾಕಿ.. ನನ್ನ ಸ್ವಂತ ನೀನು,ನಿನ್ನ ಸ್ವಂತ ನಾನು ಎಂದು ಪ್ರೀತಿಮಳೆಗರೆದಾಗ ಸೋತಳು. ಪ್ರೀತಿಯನ್ನೇ ಕಾಣದ ಹೆಣ್ಣೊಂದು ನಂಬದಿರಲು ಸಾಧ್ಯವೇ ಅಂತಹವನನು ಸಾಕಿ.. ದೇವತೆ ಅವಳು ಕೇಳಿದ ವರ ಕೊಡುವಳು ತನ್ನನ್ನು ಪ್ರೀತಿಸುವವರಿಗೆ. ಉಪಯೋಗ ಪಡೆದು ಮರೆಯಾದ ಕಣ್ಣಿಂದ ಬಹಳದೂರ ಮನೆಹಾಳನವನು ಸಾಕಿ. ಫಕೀರ,ಸಂತನೆಂದರೆ ತಾನೇ ಎಂಬ ಮಾತಿಗೆ ಜನ ಮರುಳಾದರು ತಿಳುವಳಿಕೆಯಿಲ್ಲದವರು ಅವಳಂತೆ.. ಅವನ ಆಟ ನೋಡುತಾ,ಅವನಿಗೇ ಕಿರೀಟ ತೊಡಿಸುತಾ ಇದ್ದಾರೆ ಜನ, ದೇವರಿದ್ದಾನೇನು ಸಾಕಿ.. ಆ ಶಶಿಯೊಬ್ಬನೇ ಅವಳ ಗೆಳೆಯ ಅವಳ ನಗಿಸಲು ಸದಾ ನಗುಮೊಗ ತೋರುತಿರುವ. ಅಲ್ಲಾನೋ,ಏಸುವೋ,ರಾಮನೋ ದೇವರಿಗೆ ಅವಳ ಕೊರಗು,ಕಣ್ಣೀರು ಕಾಣದಾಯ್ತೇನು ಸಾಕಿ.. ******

ಕಾವ್ಯಯಾನ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ನಾನೇಕೆ ಲಂಕೇಶರನ್ನು ಓದುತ್ತೇನೆ ಧನಂಜಯ್ ಎನ್ ಲಂಕೇಶರೇ ನಾನೇಕೆ ನಿಮ್ಮನ್ನು ಓದುತ್ತೇನೆ..? ಈ ರೀತಿಯ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡರೂ ಅಂತಹ ಆಶ್ಚರ್ಯವೇನೂ ಇಲ್ಲ. ತೇಜಸ್ವಿಯಿಂದ ಶುರುವಾದ ನನ್ನ ಮೊದಲ ಓದು ಕುವೆಂಪು , ಕಾರಂತರನ್ನು ಬಳಸಿ, ಭೈರಪ್ಪನವರ ತನಕವೂ ಬಂದು ನಿಂತಿತ್ತು. ಇವರೆಲ್ಲರ ಮಧ್ಯೆ ನಿಮ್ಮ ಹೆಸರು ಹಾಗೊಮ್ಮೆ ಹೀಗೊಮ್ಮೆ ಬಂದು ಹೋಗಿತ್ತಾದರೂ, ಹಲವು ಟೀಕೆ ಟಿಪ್ಪಣಿಗಳ ನಡುವೆ ‘ ನೋಡಿಕೊಂಡರಾಯಿತು ಎಂದು ಸುಮ್ಮನಿದ್ದುಬಿಡುತ್ತಿದ್ದೆ. ಭೈರಪ್ಪನವರ ” ಕವಲು ” ಕಾದಂಬರಿ ಓದಿದ ತರುವಾಯ, ಕನಿಷ್ಠ 20 ರಿಂದ 30 ದಿನಗಳ ವರೆಗಾದರೂ ಯಾವ ಹೆಂಗಸರನ್ನು ಕಂಡರೂ ಹೆದರುತ್ತಿದ್ದೆ, ಹೆಂಗಸರಿಗಿರುವ ಅವಕಾಶಗಳೆಲ್ಲಾ ಗಂಡಸರನ್ನು ತುಳಿಯಲೆಂದೇ ಇರುವ ಅಸ್ತ್ರಗಳು ಎಂದು ನಂಬಿಕೊಂಡು ಬೇರೆ ದಾರಿ ಇಲ್ಲದೆ, ಗಂಡೆಂಬ ದರ್ಪವನ್ನು ಹೇಗಾದರೂ ಪ್ರದರ್ಶನ ಮಾಡಬೇಕು ಎಂದು ಹಠ ತೊಟ್ಟಿದ್ದೆ. ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಅನ್ನಭಾಗ್ಯ ಯೋಜನೆ ತಂದಾಗ , ” ಬಡವರಿಗೆ ಅನ್ನ ಕೊಟ್ಟು ಸೋಂಬೇರಿಗಳನ್ನಾಗಿ ಮಾಡುತ್ತಿದ್ದೀರಿ ” ಎಂದು ಹೇಳಿಕೆ ಕೊಟ್ಟ ಭೈರಪ್ಪನವರ ಮಾತನ್ನ ಕೇಳಿ, ಇದೇ ಸತ್ಯ ಎಂದು ನಂಬಿ ಮಾನವೀಯತೆಯನ್ನು ಮರೆತು  ವಾದಕ್ಕೆ ಇಳಿಯುವ ಅರೆಬುದ್ಧಿವಂತರನ್ನು ಎದುರುಗೊಳ್ಳುವವರೆಗೂ…. ನನಗೆ ಈ ಸಾಹಿತಿಗಳ ಮಹತ್ವ ಏನು , ಅವರ ಆಲೋಚನೆಗಳು ಸಮಾಜದ ಮೇಲೆ  ಎಂತಹಾ ಪರಿಣಾಮವನ್ನು ಬೀರುತ್ತಿದೆ ಎನ್ನುವ ಸಂಪೂರ್ಣ ಚಿತ್ರಣ ತಲೆಗೆ ಬಂದಿರಲಿಲ್ಲ. ಇಂಥಹಾ ಅಸಹ್ಯ ಸಾಹಿತಿಗಳು ಮತ್ತು ಅವರು ಮಾಡುವ ರಾಜಕೀಯಗಳ ಮತ್ತದರ ಸಾಧ್ಯತೆಗಳ ಮುಂದೆ ನಿಮ್ಮ ಗಟ್ಟಿ ಸಾಹಿತ್ಯ ವಿಭಿನ್ನವಾಗಿ ನಿಂತಿದೆ. ಕವಿತೆಗಳಲ್ಲಿ  ಬರಿಯ ಕಾಮ, ಮೋಹ, ಮಂಚದ ಸುತ್ತ ಸುತ್ತುತ್ತಾ ಹೆಣ್ಣನ್ನು/ಗಂಡನ್ನು, ರಂಜಿಸುವುದೇ ಕವಿತೆಯ ಉದ್ದೇಶ ಎಂದು ತಿಳಿದ ಸೋ ಕಾಲ್ಡ್ ಕವಿಗಳ ಕವಿತಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ, ನಿಮ್ಮ ನೀಲು ಕಾವ್ಯದ ನಾಲ್ಕೆ ನಾಲ್ಕು ಸಾಲುಗಳನ್ನ ಯಾರದೋ ಮೊಬೈಲಿನಲ್ಲಿ ಕಂಡಾಗ, ಇದೇನು ಹೀಗೆ ಎಂದು ಉಬ್ಬೇರಿಸಿ ಅಮಾಯಕನಂತೆ ಕಣ್ಣು ಬಿಟ್ಟ ನೆನಪು ನನಗೀಗಲೂ ಇದೆ. ಅಲ್ಲಿಂದಲೇ ನನ್ನ ನೋಟ ನಿಮ್ಮ ವಿಭಿನ್ನ ಬರಹಗಳೆಡೆಗೆ ತಿರುಗಿದ್ದು ಎಂದು ಹೇಳಬಹುದು. ಸ್ಟೆಲ್ಲಾ ಎಂಬ ಹುಡುಗಿಯ ರಂಗರೂಪವನ್ನ ಬೆಂಗಳೂರಿನ ಕಲಾಗ್ರಾಮದಲ್ಲಿ ನೋಡುತ್ತಿದ್ದಾಗ , ಪಕ್ಕದಲ್ಲಿ ಕೂತಿದ್ದ ಮತ್ತೊಬ್ಬ ಪ್ರೇಕ್ಷಕ, ಇದೇನು ನಾಟಕವೋ ಅಥವಾ ದೊಂಬರಾಟವೋ,,, ಅದೇನು ಪಾತ್ರಗಳು ತಂದಿದಾರಪ್ಪ ಇವ್ರು ?? ಅರೆ ಥತ್ ಎಂದು ಉಗುಳು ನುಂಗಿಕೊಂಡು ಬೈಗುಳ ಪೂರ್ಣವಾಗುವ ಮುನ್ನವೇ ,,, ಯಾರು ಬರೆದದ್ದು ಈ ನಾಟಕ ? ಎಂದು ಕೇಳಿದ್ದ. ಲಂಕೇಶ್, ಪಿ ಲಂಕೇಶ್ ಬರೆದದ್ದು ಎಂದು ನನ್ನ ಉತ್ತರ ಕೇಳಿದ ತಕ್ಷಣ , ಓಹ್ ಆ ಮಹಾನುಭಾವನೋ,,, ಅವನಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ !!! ಎಂದು ಗೊಣಗುತ್ತಲೇ ಅರ್ಧ ನಾಟಕ ಬಿಟ್ಟು ಹೋದ. ಆ ವ್ಯಕ್ತಿಯನ್ನು ನೋಡಿ, ನಿಮ್ಮ ಬರಹದ ಪರಿಣಾಮ ಎಂಥಾದ್ದು ಎನ್ನುವ ಅಂದಾಜು ಸಿಕ್ಕಿದ್ದು. ಅಲ್ಲಿ ನಾಟಕದಲ್ಲಿ, ಅಸಹಾಯಕ ಹೆಣ್ಣು ಮಗಳನ್ನ ನಾವೇ ಕಟ್ಟಿಕೊಂಡ  ಸಮಾಜ ಹೇಗೆಲ್ಲಾ ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತಾ, ವಿವರಣೆಗಾಗಿ ಅಲ್ಲಿಯತನಕ ಕಾಮದಿಂದಲೂ ಮೋಹದಿಂದಲೂ ಕಾಣುತ್ತಿದ್ದ ಪ್ರೇಯಸಿಯನ್ನ ಸಮಾಜದ ಮುಂದೆ ತನ್ನ ಸಂಗಾತಿ ಎಂದು ಹೇಳಿಕೊಳ್ಳಲು ಹಿಂಜರಿಯುವ ಯುವಕ ಆ ಕ್ಷಣದ ಪಾಲಾಯನಕ್ಕೆ ಈಕೆ ನನ್ನ ಸೋದರಿ ಇದ್ದಂತೆ ಎಂದು ಹೇಳಿಬಿಡುವ ಗಂಡಸಿನ ಲಜ್ಜೆಗೆಟ್ಟ ಬುದ್ಧಿಯನ್ನು ನೀವು ತೋರಿಸಿದ್ದಕ್ಕೊ ಏನೋ, ಬಹುಶಃ ಆ ಸಹ ಪ್ರೇಕ್ಷಕಕನ ಗಂಡು ಬುದ್ದಿ  ಕುಪಿತಗೊಂಡಿರಬೇಕು. ಇದಕ್ಕೂ ಮುಂಚೆ ಮಲೆಗಳಲ್ಲಿ ಮದುಮಗಳು ನಾಟಕ ನೋಡುವಾಗ ಈ ಥರದ ಪ್ರತಿಕ್ರಿಯೆಗಳನ್ನ ಕಂಡಿದ್ದೆ, ಕೇಳಿದ್ದೆ. ಪ್ರತಿಕ್ರಿಯೆಗಳು ಧನಾತ್ಮಕವೋ ಋಣಾತ್ಮಕವೋ, ಒಟ್ಟಿನಲ್ಲಿ ಕೃತಿ ಎದುರುಗೊಂಡಾಗ ಒಂದು ಧ್ವನಿ ಹುಟ್ಟುತ್ತದೆ ಎಂದರೆ, ಆ ಕೃತಿಯ ನಿರೂಪಕ ಗೆದ್ದಿದ್ದಾನೆ ಎಂದು ಅರ್ಥವಲ್ಲವೇ. ಈಗಿನ ಅಸಹ್ಯ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೆ ಭಯವಾಗುತ್ತಿದೆ. ಮೊನ್ನೆ ಮೊನ್ನೆ, ಪ್ರಭುತ್ವವನ್ನು ಪ್ರಶ್ನಿಸಿ ರೂಪಕವಾಗಿ ಕಟ್ಟಿದ್ದ ಪದ್ಯವನ್ನು ಬರೆದು ವಾಚಿಸಿದ್ದಕ್ಕೆ ಸಿರಾಜ್ ಬಿಸರಳ್ಳಿ ಎಂಬ ಕವಿಯನ್ನು ಅರೆಸ್ಟ್ ಮಾಡಿದ್ದರಂತೆ. ಈ ಅಭಿವ್ಯಕ್ತಿ ಸ್ವತಂತ್ರ ಕಿತ್ತುಕೊಂಡ ಪ್ರಕ್ರಿಯೆಯನ್ನ ನಮ್ಮ ಮೀಡಿಯಾ ಬಾಂಧವರಿಂದ ಹಿಡಿದು, ಟ್ರೋಲ್ ಮಾಡುವ ಸಣ್ಣ ಪುಟ್ಟ ಚಿಲ್ಲರೆಗಳೂ ಸಹ ಸಂಭ್ರಮಿಸಿದ್ದರು. ಇಂಥಹ ಸಿರಾಜ್ ಬಿಸರಳ್ಳಿ ಯವರು ನಿಮ್ಮ್ ಲಂಕೇಶ್ ಪತ್ರಿಕೆಯಲ್ಲಿ ಪ್ರತಿ ದಿನ ಹುಟ್ಟುತ್ತಿದ್ದರು ಎಂದು ಕೇಳಿದಾಗ, ರೋಮಾಂಚನವಾಗುವುದಿಲ್ಲವೇ…!!! ಕನ್ನಡ ಹೋರಾಟಗಳು ಅಂಧಕಾರದ ರೂಪ ಪಡೆದ ಸಮಯದಲ್ಲಿ, ನಿಮ್ಮ ಲಂಕೇಶ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿದ ಕನ್ನಡ ಪರ ಹೋರಾಟಗಾರರು ನಿಮ್ಮನ್ನು ಹಿಡಿದು ಥಳಿಸಿದ್ದರಂತೆ. ಆದರೆ ಅದಾವಕ್ಕೂ ಎದೆಗುಂದದೆ ಮುಂದಿನ ದಿನವೂ ನಿಮ್ಮ ಬರಹದ ಹೋರಾಟ ಕಮ್ಮಿಯಾಗದೇ ಉಳಿದದ್ದನ್ನು ಕಂಡು ಅವರೇ ಸುಮ್ಮನಾದರಂತೆ. ಪ್ರಶಸ್ತಿಗಳಿಗೆ ಹಾತೊರೆದು ಸಮಯಸಾಧನೆಯಲ್ಲಿ ಮುಳುಗಿರುವ ನಮ್ಮ ಈ ಕಾಲದ ಹೊಸ ಸಾಹಿತಿಗಳನ್ನ ಕಂಡಾಗ , ನಿಮ್ಮ ನೇರ ನಿಷ್ಟುರವಾದ ಆ ಮಾತುಗಳೆಲ್ಲಾ ನೆನಪಿನಲ್ಲಿ ಉಳಿಯುತ್ತಿವೆ. ಮನೆ ಬಾಗಿಲಿಗೆ ಬಂದ ಪ್ರಶಸ್ತಿಯನ್ನು ಹಿಂದೆ ಕಳುಸಿದ ತೇಜಸ್ವಿಯಂಥವರು ನಿಮ್ಮೊಡನೆ ಉತ್ತಮ ಸ್ನೇಹವನ್ನು ಹೊಂದಿದ್ದರು, ಎಂದಾಗಲಂತೂ…. ನಿಮ್ಮಗಳ ಆ ಒಗ್ಗಟ್ಟಿನ ಕಾಲದ ಮುಂದೆ ನಮ್ಮ ಕಾಲ ತೀರಾ ಸಪ್ಪೆ ಎನಿಸುತ್ತಿದೆ. ಅಧಿಕಾರವಿಲ್ಲದೆ ಏನೂ ಮಾಡಲಾಗುವುದಿಲ್ಲ, ಎಂದು ನಿಮ್ಮ ಕಾಲದ ಸಾಹಿತಿಗಳು ಆಗಲೇ ತಿಳಿದಿದ್ದರು ಅಲ್ಲವೇ.. ??? ವಿರುದ್ಧ ಅಭಿಪ್ರಾಯ ಹೊಂದಿದ ಸಂಘ ಪರಿವಾರದ ಪರವಾಗಿ ನಿಂತು ಸೋತು ಸುಣ್ಣವಾಗಿದ್ದ ಅಡಿಗರನ್ನ ಸಂತೈಸುತ್ತಲೇ , ಲೋಹಿಯಾ ತತ್ವಗಳನ್ನು ಒಪ್ಪಿಕೊಂಡು ಒಂದು ಸ್ವಂತ ಕರ್ನಾಟಕದ ಬಲಕ್ಕಾಗಿ ಸಾಹಿತ್ಯ ಲೋಕದಿಂದ ರಾಜಕೀಯ ಕ್ಷೇತ್ರದ ಕಡೆ ಅಲೋಚಿಸಿದ್ದ ನಿಮ್ಮ ಕರ್ನಾಟಕ ಪರ್ಯಟನೆ, ರಾಜಕೀಯವಾಗಿ ಸಾಹಿತಿಗಳು ಎಷ್ಟು ಮುಖ್ಯ ಎಂಬುದಾಗಿ ನಮಗೆಲ್ಲಾ ಮಾದರಿಯಾಗಿದೆ. ದೃಶ್ಯ ಮಾಧ್ಯಮ ಬೀರುವ ಪ್ರಭಾವವನ್ನು ಸೂಕ್ಷ್ಮವಾಗಿ ಅರಿತಿದ್ದ ನೀವು, ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅಲ್ಲದೇ, ಯಶಸ್ಸನ್ನು ಪಡೆದ ಬಗೆಗೆ ಏನು ತಾನೇ ಹೇಳಲಿ… ??? ಟೀಕಿಸಿದರೆ ಸಾಲದು ಮಾಡಿ ತೋರಿಸಿ ಎಂದು ಫಟಾಪತ್ ಕಾಲೆಳೆಯುವ ಜನರ ಬಾಯನ್ನ ನಿಮ್ಮ ಪ್ರಯತ್ನಗಳು ಉತ್ತರ ನೀಡಿ ಮುಚ್ಚಿಸಿದ ಗೆಲುವಿಗೆ ನಾನೆಂದಿಗೂ ಅಭಿಮಾನಿಯಾಗಿಯೇ ಉಳಿಯುತ್ತೇನೆ. ಲಂಕೇಶರೇ …. ನಿಮ್ಮನ್ನು ನಾನೇಕೆ ಓದುತ್ತೇನೆ ಎಂಬುದು, ಇಂಥಹ ಮತ್ತಷ್ಟು ಕಾರಣಗಳಿಗೆ ಮುಂದುವರಿಯುತ್ತಲೇ ಇದೆ. **************************

ಲಂಕೇಶರನ್ನು ಏಕೆ ಓದಬೇಕು? Read Post »

ನಮ್ಮ ಕವಿ

ನಮ್ಮ ಕವಿ

ವಿಜಯಕಾಂತ ಪಾಟೀಲ ವಿಜಯಕಾಂತ ಪಾಟೀಲರ ಸಾಹಿತ್ಯ ಕೃಷಿಯೂ..! ಅವರು ಪಡೆದ ಹಲವಾರು ಗೌರವಗಳೂ.!! ವಿಜಯಕಾಂತ ಪಾಟೀಲರು ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದವರು… ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕ್ಯಾಸನೂರು, ಶಕುನವಳ್ಳಿ (ಸೊರಬ)ದಲ್ಲಿ ಓದಿದರು… ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿಯನ್ನು ಧಾರವಾಡದಲ್ಲಿ ಮುಗಿಸಿದರು. ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ ಮಾಡಿದರು… ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿಯಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದವರು. ವಿಜಯಕಾಂತ ಪಾಟೀಲರ ಪ್ರಕಟಿತ ಕೃತಿಗಳೆಂದರೆ ೧) ಮಾಸದ ಕಲೆಗಳು (1994), ೨) ಸಲಸಲದ ಪಾಡು (2003), ೩) ನೂರು ಬಣ್ಣದ ಕಣ್ಣು (2012), ೪) ಹೌದು ನಾನು ಕೌದಿ (2013), ೫) ಇಂತಿ ನದಿ (20050) ಕವನ ಸಂಕಲನ… ಅವರ ಪ್ರಬಂಧಗಳು ವಜನುಕಟ್ಟು (2005). ಮಕ್ಕಳ ಸಾಹಿತ್ಯವು ಅಮ್ಮ ಅಂದ್ರೆ ಅಷ್ಟಿಷ್ಟಲ್ಲ-ಕವಿತೆಗಳು (2014). ಹಕ್ಕಿಗಳ ಸ್ವಾತಂತ್ರ್ಯೋತ್ಸವ (2016). ಅವರ ಇತರೆ ಕೃತಿಗಳೆಂದರೆ ಕನಸಿನ ಹೊಸ ಅಧ್ಯಾಯ (ಸಂಪಾದಿತ ಕತೆಗಳು-2005 ), ಒಂದು ಹಿಡಿ ಮುತ್ತು (ಸಂದರ್ಶನ ಲೇಖನಗಳು- 2008), ಸದಾ ಹರಿವು ಕನ್ನಡ (ಭಾವಗೀತೆಗಳ ಧ್ವನಿಮುದ್ರಿಕೆ-2015). ಅವರಿಗೆ ಹಲವಾರು ಪ್ರಶಸ್ತಿ ಬಹುಮಾನ ಹಾಗೂ ಗೌರವ ಪಡೆದರು ವಿಜಯಕಾಂತ ಪಾಟೀಲರು. ಅವುಗಳು ಹೀಗಿವೆ– ಬೇಂದ್ರೆ-ಅಡಿಗೆ ಕಾವ್ಯ ಪ್ರಶಸ್ತಿ, ಕಯ್ಯಾರ ಕಿಞ್ಞಣ್ಣ ರೈ ಕಾವ್ಯ ಪ್ರಶಸ್ತಿ, ಸಂಕ್ರಮಣ, ಸಂಚಯ, ಪ್ರಜಾವಾಣಿ, ಜಿಲ್ಲಾ ಕಸಾಪ ಮೊದಲಾದವುಗಳು ಏರ್ಪಡಿಸಿದ ಕಾವ್ಯ ಸ್ಪರ್ಧೆಯ ಬಹುಮಾನಗಳೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ… ಹಾನಗಲ್ ತಾಲ್ಲೂಕು ಮೊದಲ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷತೆ(2011)ಯನ್ನೂ ವಹಿಸಿದ್ದರು… ಈಗವರ ಕೃತಿಗಳ ಬಗೆಗೆ ನೋಡೋಣ– ಈ ವರೆಗಿನ ವಿಜಯಕಾಂತ ಪಾಟೀಲರ ಕೃತಿಗಳ ಕಿರು ಪರಿಚಯ… ೧.ಮಾಸದ ಕಲೆಗಳ ಈ ಮೊದಲ ಸಂಕಲನದ ಮೂಲಕ ಭವಿತವ್ಯದಲ್ಲಿ ಕಾವ್ಯ ಹೊರಳಿಕೊಳ್ಳಬಹುದಾದ ಮಾನವೀಯ,ಸಾಮಾಜಿಕ ನಡೆಯನ್ನು ಕವಿ ಸ್ಪಷ್ಟಪಡಿಸಿಕೊಂಡಿದ್ದಾರೆ. ಬಂಡಾಯ ಮನೋಧರ್ಮಕ್ಕನುಗುಣವಾಗಿ ಅರಳಿಕೊಂಡ ಇಲ್ಲಿನ ಹಿರಿಗವನಗಳು ಮತ್ತು ಕಿರುಗವಿತೆಗಳು ಬದುಕು ಬವಣೆಗಳ ಒಡನೆಯೇ ಪ್ರೀತಿಯೆಡೆಗೂ ತನ್ನ ಚಿತ್ತವನ್ನು ಹರಿಸಿವೆ. ಇಲ್ಲಿ ಕಾವ್ಯಬಂಧದ ಕಡೆಗೂ ಕವಿ ಗಮನ ಹರಿಸಿರುವುದು ಸ್ತುತ್ಯಾರ್ಹ ಸಂಗತಿ ೨. ಸಲಸಲದ ಪಾಡು ಈ ಕೃತಿಯು ಪ್ರಕೃತಿಯ ಪಲ್ಲವಿಸುವಿಕೆ, ಬರದ ಬಸವಳಿಕೆ, ಹಿರಿಯ ತಲೆಮಾರಿನ ಹಳಹಳಿಕೆ, ಹೊಸ ಹರೆಯದ ಹುರುಪು ಹೊಳೆದ ಕೆರಳಿಕೆಗಳ ಸಾಹಿತ್ಯರೂಪ; ಸಾಲು ಸಾಲುಗಳ ನಡುವೆ ಮಿಂಚಿದ ಭಾವ ಗೊಂಚಲು; ಪ್ರಕೃತಿಯಂತೆ ಕವಿಯ ಚಿತ್ತ ಹರಿದಿರುವುದು ಈ ಕಾವ್ಯಗುಚ್ಛದ ಹೆಗ್ಗಳಿಕೆ. ನೆನಪು ಮತ್ತು ಗಾಯದ ಚೆಂದವೂ ಇಲ್ಲಿ ಅನುರಣನಗೊಂಡಿದೆ ೩. ನೂರು ಬಣ್ಣದ ಕಣ್ಣು:ಈ ಸಂಕಲನವು ಮಳೆ ಬಿದ್ದ ನೆಲದಿಂದ ಎದ್ದ ಹುಡಿಯ ಘಮಲು; ಸ್ವಲ್ಪ ಸ್ವಲ್ಪವೇ ಮೂಗಿಗಡರುವ ಅಲ್ಲೆಲ್ಲೋ ಅರಳಿದ ಹೂವಿನ ಪರಿಮಳ; ಅಷ್ಟೂ ನೋವಸಂಕಟವನ್ನು ಒಟ್ಟು ಮಾಡಿ ಹೊರಹಾಕಿ ನಿಡುಸುಯ್ಯುವ ಉಸಿರ್ಗರೆತ; ಎಲ್ಲ ಹೇಳಿಯೂ ಹೇಳದಂತಿರುವ ಒಂದು ಮೌನದ ಜೊತೆಗಿನ ಸಂವಾದವಾಗಿ ಕಾಣುತ್ತದೆ. ನಿಜದ ಬದುಕಿನಿಂದ ವಿಮುಖವಾಗದ ಕವಿತೆಗಳ ಅಪರೂಪದ ಸಂಗ್ರಹ ಈ ನೂರು ಬಣ್ಣದ ಕಣ್ಣು…. ೪. ಹೌದು ನಾನು ಕೌದಿ: ಇಲ್ಲಿ ಕವಿಯು ‘ಸ್ವಕಾವ್ಯ ಹಾದಿ’ಯ ತಿರುವಿನಲ್ಲಿದ್ದಾರೆ. ಪದಗುಣಿತಾರ್ಥ,ಹೊಸ ಅರ್ಥಗಳ ನೆಗೆತ ಹಾಗೂ ಸಂಯೋಜನೆಯ ಒಳದನಿಗಳು ಇಲ್ಲಿ ಓದಿನ ಪುಳಕಕ್ಕೆ ಒಳಮಾಡುತ್ತವೆ. ತಮ್ಮ ಸಹಜಭಾಷಾಸಾಮರ್ಥ್ಯದ ಮೂಲಕ,ಸಮಕಾಲೀನ ಕಾವ್ಯದಬೀಸನ್ನು ಆವಿಷ್ಕರಿಸಿಕೊಂಡು ಬರೆಯುತ್ತಿರುವ ಕವಿಯ ಕಾವ್ಯ ಓದಿನ ಖುಷಿಯ ಜೊತೆಗೆ ಕಾವ್ಯ ನಿಜಾನುಭವದ ಸಂವೇದನೆಗಳನ್ನು ಚಾರ್ಜ್ ಮಾಡುವ ಶಕ್ತಿಯವು. ಸಾಮಾಜಿಕ ಮತ್ತು ಸೌಂದರ್ಯ ಪ್ರಜ್ಞೆಗಳೆರಡನ್ನೂ ಏಕೀಭವಿಸಿ ನೋಡುವ ಪದ್ಯಗಳು ಇಲ್ಲಿವೆ… ೫. ಇಂತಿ ನದಿ ಇಲ್ಲಿ ಕವಿಯದು ಲೋಕವನ್ನು ಒಳಬಿಟ್ಟುಕೊಳ್ಳುವಲ್ಲಿ, ಅದಕ್ಕೆ ಸ್ಪಂದಿಸುವ ಕ್ರಮದಲ್ಲಿ ಮುಕ್ತ ಹಾಗೂ ಘರ್ಷಣಾತ್ಮಕ ಹಾದಿ. ಹಾಗೆಯೇ ಮಾನವೀಯ ಅಂತಃಕರಣದಿಂದ ಸುತ್ತಣ ಸಂಗತಿಗಳನ್ನು ಪರಿಭಾವಿಸುವ ಮತ್ತು ಪಡಿಮಿಡಿವ ಪ್ರಗತಿಪರ ಮನಸ್ಸು ಈ ಕವಿಯದು.ನವ ಬಂಡಾಯದ ಅಸ್ಪಷ್ಟ ಚಹರೆಗಳು ಇಲ್ಲಿನ ಕವಿತೆಗಳಲ್ಲಿ ಗೋಚರಿಸುತ್ತವೆ… ೬. ಬೆವರ ಬಣ್ಣ: ಜೀವಪರ ಧೋರಣೆಯ ಪ್ರತೀಕವಾಗಿ ಬೆವರಿನ ಬಣ್ಣದ ಹುಡುಕಾಟ ಇಲ್ಲಿ ನಡೆದಿದೆ. ಚುರುಕು ಭಾಷೆ, ನಡೆಯ ಜೊತೆ ಹದವರಿತ ಅಭಿವ್ಯಕ್ತಿಯ ಮೂಲಕ ಕಾವ್ಯದೊಟ್ಟಿಗೆ ಕವಿ ಈ ಸಂಕಲನದಲ್ಲೂ ಸಾಗಿದ್ದಾರೆ.ನೆಲಮೂಲ ಸಂಬಂಧವನ್ನು ಗಾಢವಾಗಿ ಉಳಿಸಿಕೊಂಡ ಕವಿಯ ಕಾವ್ಯದ ಧೋರಣೆ ಜೀವಪರ,ನಿಸರ್ಗಪರವಾಗಿ ಇದ್ದಷ್ಟೇ ಆಳದಲ್ಲಿ ಅದು ಜನಪರ ನಿಲುವಿನಲ್ಲಿ ಅರಳಿದೆ… ಹೀಗೆ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ವಿಜಯಕಾಂತ ಪಾಟೀಲರು… ** –ಕೆ.ಶಿವು.ಲಕ್ಕಣ್ಣವರ

ನಮ್ಮ ಕವಿ Read Post »

ಕಾವ್ಯಯಾನ

ಕಾವ್ಯಯಾನ

ಶವದಮಾತು ಪ್ಯಾರಿಸುತ ಶವದ ಮನೆಮುಂದೆ ನಿರರ್ಥಕಭಾವದ ಬೆಂಕಿಮಡಿಕೆಯೊಂದು ಹೊಗೆಯ ಉಗುಳುತಾ ಕುಳಿತಿದೆ…! ಕಾಯುತ್ತಿದ್ದದ್ದು ಯಾರಿಗೆಂದು ಬಲ್ಲಿರಾ…? ಚಟ್ಟವೊಂದು ಕಾಯುತ್ತಿದ್ದದ್ದು ನನಗೆ ಮಾತ್ರ ಅಲ್ಲವೇ..? ಅಂತ್ಯಯಾತ್ರೆಗೆ ಬಿಳ್ಕೊಡಲು ನಮ್ಮವರು ಬರುವುದು ಯಾರಾದರೂ ಕಂಡಿರಾ..? ಬರುವವರೆಲ್ಲರೂ ಮನೆವರೆಗೆ ಮಾತ್ರ ಬಂದವರೆಲ್ಲ ಮಸಣದ ಮಧ್ಯನಿಂತು ಮರಳಿ ಹೋಗುವವರು ಎತ್ತೋವರೆಗೂ ಅವರು ಬರ್ತಾರೆ ಇವರು ಬರ್ತಾರೆ, ಎತ್ತಿದ ಮೇಲೆ ಅವರು ಬಂದಿದ್ದಾರೆಯೇ…?ಇವರು ಬಂದಿದ್ದಾರೆಯೇ…? ಸ್ಮಶಾನದ ಹಾದಿ ಮಧ್ಯ ಅವರು ಬರುವವರಿದ್ದರು ಇವರು ಬರುವವರಿದ್ದರು ಚಿತೆಮೇಲೆ ಇಟ್ಟಾಗ ಅವರು ಬರಬೇಕಿತ್ತು ಇವರು ಬರಬೇಕಿತ್ತು ಸುಡಲು ಆರಂಭಿಸುತ್ತಿದಂತೆ ಅವರು ಬರಲೇ ಇಲ್ಲ ಇವರು ಬರಲೇ ಇಲ್ಲ… ಅವರೆಲ್ಲ ಯಾರು ಕಷ್ಟದಲ್ಲಿ ನೆಂಟರಾದವರಾ..? ಬಂಧುಬಳಗ ಎನಿಸಿದವರಾ..? ಅಣ್ಣತಮ್ಮಂದಿರಂತೆ ಇದ್ದವರಾ…? ಜೀವ ಕೊಟ್ಟು ಜೀವ ಉಳಿಸಲು ಹೆಣಗಿದವರಾ…? ಅಲ್ಲವೇ ಅಲ್ಲ ..! ನಮ್ಮವರು ಯಾರು ಕಾಣಲೇ ಇಲ್ಲ ಕಂಡವರೆಲ್ಲರು ನಮ್ಮಂತೆ ಇದ್ದವರು… *******

ಕಾವ್ಯಯಾನ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ನಾನೇಕೆ ಓದುತ್ತೇನೆ ಈ ಚರ್ಚೆಯ ಹಿನ್ನೆಲೆ ಮತ್ತು ವಿವರಗಳು “ಲಂಕೇಶರನ್ನು ನಾನೇಕೆ ಓದುತ್ತೇನೆ?” ಸ್ಪರ್ಧೆಯ ಫಲಿತಾಂಶ : ಸಹೃದಯರೇ, ‘ಮೈಸೂರು ಗೆಳೆಯರು’ ‘ಲಂಕೇಶ್ ನೆನಪು’ ಕಾರ್ಯಕ್ರಮದ ಭಾಗವಾಗಿ‘ನಾನೇಕೆ ಲಂಕೇಶರನ್ನು ಓದುತ್ತೇನೆ?’ ಬರಹ ಸ್ಪರ್ಧೆಯನ್ನು ಏರ್ಪಡಿಸಿದ್ದೆವು. ಈ ಸ್ಪರ್ಧೆಗೆ ಒಟ್ಟು ಆರು ಜನ ತಮ್ಮ ಬರಹಗಳನ್ನು ಕಳುಹಿಸಿದ್ದರು. ಈ ಬರಹಗಳನ್ನು ಓದಿ,ಅವುಗಳಲ್ಲಿ ಒಂದನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಎಂದು (ಬರಹಗಾರರ ಹೆಸರನ್ನು ತೀರ್ಪುಗಾರರಿಗೆ ನೀಡದೆ, ನಾವು ಸ್ಪರ್ಧಿ-1, ಸ್ಪರ್ಧಿ -2 ಎಂದಷ್ಟೆ, ಬರಹದಲ್ಲಿ ಹಾಕಿ ಕಳುಹಿಸಿದ್ದೆವು) ನಾಡಿನ ಹಿರಿಯ ಕವಿಗಳಲ್ಲಿ ಒಬ್ಬರಾದ ಶ್ರೀಮತಿ ಎಂ. ಆರ್.ಕಮಲ ಮೇಡಂ ಅವರನ್ನು ನಾವು ಕೇಳಿಕೊಂಡಾಗ, ಅವರು ಖುಷಿಯಿಂದ ಈ ಕೆಲಸ ಮಾಡಿ ಕೊಡುವುದಾಗಿ, ಒಪ್ಪಿಕೊಂಡು ನಾವು ಕೇಳಿಕೊಂಡಿದ್ದ ಅವಧಿಯ ಒಳಗೆ, ಬರಹಗಳನ್ನು ಓದಿ, ಆ ಆರು ಬರಹಗಳಲ್ಲಿ ಎರಡನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ತೀರ್ಪುಗಾರರಿಗೆ ನಾವು ಬಹುಮಾನಕ್ಕೆ ಒಂದು ಬರಹವನ್ನು ಆಯ್ಕೆ ಮಾತ್ರ ಮಾಡಿ ಎಂದಿದ್ದೆವು. ಆದರೆ ಮೇಡಂ ಅವರು ಈ ಬರಹಗಳನ್ನು ಓದಿ ಮತ್ತೊಂದು ಬರಹದ ಮೌಲ್ಯದ ಬಗೆಗೂ ಒಳ್ಳೆಯ ಮಾತುಗಳನ್ನು ಹೇಳಿ, ಸಾಧ್ಯವಾದರೆ ಅದಕ್ಕೂ ಬಹುಮಾನ ನೀಡಿ ಎಂದಿದ್ದಾರೆ. ತೀರ್ಪುಗಾರರ ಮಾತಿಗೆ ಆಯೋಜಕರಾದ‘ ಮೈಸೂರು ಗೆಳೆಯರು’ ಸಹಮತ ಸೂಚಿಸಿ, ತೀರ್ಪುಗಾರರ ಅಪೇಕ್ಷೆಯಂತೆ ಮತ್ತೊಂದು ಬಹುಮಾನವನ್ನು ನೀಡೋಣ ಎಂದು ತೀರ್ಮಾನಿಸಿ.ಮತ್ತೊಂದು ತೀರ್ಪುಗಾರರ ಮೆಚ್ಚುಗೆಯ ಬಹುಮಾನವನ್ನು ನೀಡುತ್ತಿದ್ದೇವೆ. ಈ ಸ್ವರ್ಧೆಗೆ ತಮ್ಮ ಬರಹಗಳನ್ನು ಕಳುಹಿದ್ದವರು ಒಟ್ಟು ಆರು ಜನ. ಸ್ಪರ್ಧಿ -5 ಸುಪ್ರಿಯಾ, ಬೆಂಗಳೂರು ಸ್ಪರ್ಧಿ -4 ನವೀನ್ ಮಂಡಗದ್ದೆ. ಸ್ಪರ್ಧಿ -3 ಶ್ರೀಮತಿ ರಾಜೇಶ್ವರಿ ಭೋಗಯ್ಯ ಸ್ಪರ್ಧಿ -6 ನಾಗಸ್ವಾಮಿ ಮುತ್ತಿಗೆ, ಮೈಸೂರು. ಸ್ಪರ್ಧಿ -2 ಬಸವರಾಜು ಕಹಳೆ ಸ್ಪರ್ಧಿ -1 ಧನಂಜಯ್ ಎನ್ ಈ ಲೇಖನಗಳನ್ನು ಓದಿ, ಶ್ರೀ ಮತಿ ಎಂ.ಆರ್ ಕಮಲ ಮೇಡಂತಮ್ಮ ತೀರ್ಪನ್ನು ಹೀಗೆ ನೀಡಿ, ಎರಡು ಮಾತುಗಳನ್ನು ಬರೆದು ಕಳುಹಿಸಿದ್ದಾರೆ.ಇದು ಅವರ ತೀರ್ಪು ಮತ್ತು ಮಾತುಗಳು. Spardhi-1 (first prize)Spardhi-3 (2nd prize) ಒಂದೇ ಬಹುಮಾನ ಎಂದು ತಿಳಿದಿದೆ…ಆದರೂ ಕಳಿಸಿದ್ದೇನೆ… ಆಯ್ಕೆ ನಿಮಗೆ ಬಿಟ್ಟಿದ್ದು… ಒಬ್ಬ ಓದುಗ ಅನೇಕ ಲೇಖಕರನ್ನು ಓದುತ್ತ, ವಿಕಾಸಗೊಳ್ಳುತ್ತ ಪಕ್ವತೆಯನ್ನು ಪಡೆಯುವುದು ಓದಿನ ಬಹಳ ಮುಖ್ಯ ಕ್ರಮವಾದ್ದರಿಂದ ಮೊದಲು ಎಂದು ಆರಿಸಿದ್ದೇನೆ. ಎರಡನೇ ಬಹುಮಾನಕ್ಕೆ ಆಯ್ಕೆಯಾದವರು ಲಂಕೇಶ್ ಅವರನ್ನು ಗಂಭೀರವಾಗಿ ಓದಿದ್ದಾರೆ ಅನ್ನಿಸಿತು..———- ಈ ಸ್ವರ್ಧೆಯಲ್ಲಿ ಬಹುಮಾನ ಪಡೆದಧನಂಜಯ್ ಎನ್ ಮತ್ತು ಶ್ರೀ ಮತಿ ರಾಜೇಶ್ವರಿ ಭೋಗಯ್ಯ ಮೇಡಂ ಅವರಿಗೆ ಮೈಸೂರು ಗೆಳೆಯರ ಅಭಿನಂದನೆಗಳು ಮತ್ತು ನಾಳೆ ಮೈಸೂರಿನ ಕಲಾಮಂದಿರ ಆವರಣದಲ್ಲಿ ನಡೆಯಲಿರುವ ” ಲಂಕೇಶ್ ನೆನಪು” ಕಾರ್ಯಕ್ರಮದಲ್ಲಿ ವಿಜೇತರಿಗೆ ಪುಸ್ತಕ ಬಹುಮಾನವನ್ನು ನೀಡಲಾಗುವುದು.ವಿಜೇತರನ್ನು ಕಾರ್ಯಕ್ರಮಕ್ಕೆ ಮೈಸೂರು ಗೆಳೆಯರು ಪ್ರೀತಿಯಿಂದ ಮತ್ತೊಮ್ಮೆ ಈ ಮೂಲಕ ಆಹ್ವಾನ ನೀಡುತ್ತಿದ್ದೇವೆ. * ಮೊದಲ ಬಹುಮಾನ : 1500 ರೂ ಮೌಲ್ಯದ ಪುಸ್ತಕಗಳು.* ತೀರ್ಪುಗಾರರ ಎರಡನೇ ಬಹುಮಾನ : 500 ರೂ ಮೌಲ್ಯದ ಪುಸ್ತಕಗಳು. * ಈ ಸ್ವರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ “ಮೈಸೂರು ಗೆಳೆಯರು” ಕಡೆಯಿಂದ ಅನಂತ ಧನ್ಯವಾದಗಳು. * ಬರಹಗಳನ್ನು ಓದಿ, ಒಂದನ್ನು( ಎರಡನ್ನು) ಆಯ್ಕೆ ಮಾಡಿ ಕೊಟ್ಟ ಎಂ ಆರ್. ಕಮಲ ಮೇಡಂ ಅವರಿಗೆ ” ಮೈಸೂರು ಗೆಳೆಯರು” ಕಡೆಯಿಂದ ಪ್ರೀತಿಯ ಅನಂತ ಧನ್ಯವಾದಗಳು. ——ಮೈಸೂರು ಗೆಳೆಯರು ಈ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾದವರ ಬರಹಗಳನ್ನು ಸಂಗಾತಿ ನಾಳೆಯಿಂದ ಸರಣಿ ರೂಪದಲ್ಲಿ ಪ್ರಕಟಿಸಲಿದೆ.ನಮ್ಮ ಓದುಗರು ಈ ಬರಹಗಳನ್ನುಓದುವುದು ಮಾತ್ರವಲ್ಲದೆ ಇತರೆಯವರಿಗು ಹಂಚಿ, ಲಂಕೇಶರ ವಿಚಾರದಾರೆಗಳನ್ನುಪಸರಿಸಬೇಕೆಂದು ಕೋರುತ್ತೇನೆ-ಸಂಪಾದಕ

ಲಂಕೇಶರನ್ನು ಏಕೆ ಓದಬೇಕು? Read Post »

ಕಾವ್ಯಯಾನ

ಕಾವ್ಯಯಾನ

ಧಿಕ್ಕಾರವಿರಲಿ                            ಗೌರಿ.ಚಂದ್ರಕೇಸರಿ ನೇಣಿನ ಕುಣಿಕೆಯ ನೆನೆದು ಝಲ್ಲನೆ ಬೆವರುವ ನೀವು ಎರಡು ಕ್ಷಣದ ನೋವಿಗೆ ಕೊರಳೊಡ್ಡಲಾರದ ರಣ ಹೇಡಿಗಳು ಅರಳಿ ನಿಂತು ನಸು ನಗುವ ಹೂವನ್ನು ಹೊಸಕಿ ಹಾಕುವಾಗಿನ ಭಂಡತನ ಯಾರದೋ ಮನೆಯ ನಂದಾ ದೀಪವ ನಂದಿಸಿ ಗಹ ಗಹಿಸಿ ನಕ್ಕು ನಲಿದ ನಿಮ್ಮ ಗುಂಡಿಗೆಯ ಕುದಿ ರಕ್ತ ಗಲ್ಲು ನೆನೆದು ಗಡ್ಡೆ ಕಟ್ಟಿತೆ? ಹೆಣ್ಣಿನಲ್ಲಿ ತಾಯ ತಂಗಿಯರ ಕಾಣದ ನೀವು ಹುಣ್ಣೊಳಗಿನ ಹುಳುಗಳು ಯಾರದೋ ತೋಟದ ಸುಮಗಳನು ಹೊಸಕಿ ಹಾಕಿ ಅಟ್ಟಹಾಸದ ಮೀಸೆಯ ಹುರಿಗೊಳಿಸುವ ನೀವೆಂದರೆ ಕೊರಳಿಗೆ ಬೀಳುವ ಹಗ್ಗಕ್ಕೂ ಹೇಸಿಗೆ ನಿಮ್ಮ ಸಾವಿನ ದಿನವನ್ನು ನೆನೆ ನೆನೆದು ಸುರಿಸುವ ನಿಮ್ಮವರ ಕಣ್ಣೀರಿಗೆ, ನೇಣು ಬೇಡವೆಂಬ ಅವರ ಕೂಗಿಗೆ ಹೆಣ್ಣು ಹೆತ್ತವರದೊಂದು ಧಿಕ್ಕಾರವಿರಲಿ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಚಂದ ಕಣೆ ನೀನು ಅವ್ಯಕ್ತ ಕಣ್ಣಿನಲ್ಲೇ ಅರ್ಥವಾಗಿಯೂ ಆಗದಂತೆ  ಆಡುವ ಮಾತುಗಳ ಸವಿ ಚೆಂದ.. ತುಟಿಯಂಚಿನಲಿ ಹಿಡಿದಿಟ್ಟಿರುವ ಒಲವಿನ  ರಸಗವಳದ ಕೆನ್ನೀರ ಪರಿ ಚೆಂದ.. ಕೇಳಿಯೂ ಕೇಳದಂತೆ ಆಡುವ  ಹೆಜ್ಜೆ ಗೆಜ್ಜೆಗಳ ನಲಿವು ಚೆಂದ,. ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ಸೊಂಟದ ಬಳುಕಿನಲ್ಲಿ ಲೋಕವನ್ನೇ ಆಡಿಸುತ ತಾನೇ ಆಡುವ ಪರಿ ಚೆಂದ.. ಏರಿಳಿತಗಳ ಲೆಕ್ಕವಿಡದೆ ,ರಸಿಕತೆಯ ಸವಿಯುಣಿಸಿ ನಾನಲ್ಲ ನನ್ನದಲ್ಲ ಎಂಬ ಸುಳ್ಳೇ ಚೆಂದ.. ಪ್ರೀತಿಯ ತುಂತುರು ಮಳೆಯಲಿ ನೀರಾಗಿ  ಸಮುದ್ರದಾಳದ ಮುತ್ತಾಗ ಬಯಕೆಯೇ ಚೆಂದ… ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ಮೋಹದ ಮಿಶ್ರಪಾಕದಲಿ ಶೀತಲದುರಿಯ ಮೋಸ ಬೀಸಿರುವ ಸಾತ್ವಿಕತೆಯೇ ಚೆಂದ.. ಪ್ರೇಮಾಂಕುರಕೆ ಅಂಕುಶ ಹಾಕಿದಂತೆ ಮಾಡಿ ಶಿಲೆಯ ಮಿಡಿತವ ಕದರುವುದೇ ಚೆಂದ.. ಕಾಮಾಂಕುಷಗಳ ಹೂವು ಎಳೆಯಂತೆ ಹಿಡಿದು ಸರಿಸಿ  ಗಾಳಿ ಸೋಕದಂತೆ ತೇಲಿಯ ಹೋಗುವ ಗರಿಯೇ ಚೆಂದ ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ನಿಂದಿಸಲಿ, ಛೇಡಿಸಲಿ, ನಗಲಿ ಯಾರೇನೇ ಹೇಳಲಿ ಇರಲಿ ಬಿಡು, ಅಷ್ಟೇ.. XX ವರ್ಣತಂತು ಇರುವ ಸಾಮಾನ್ಯ ಜೀವಿಯೆಂದರೆ ಇರಲಿ ಬಿಡು, ಅಷ್ಟೇ.. ಕಾಲ್ಗೆಜ್ಜೆ ಕೈಬಳೆ ಬೊಟ್ಟು ಸೀರೆ ಹಳೆಕಾಲ ಎಂದರೆ ಇರಲಿ ಬಿಡು, ಅಷ್ಟೇ.. ಬಿಗಿದ ಬಟ್ಟೆ ಎತ್ತರದ ಸ್ಯಾಂಡಲ್ ದಾರಿತಪ್ಪಿದಳೆಂದರೆ ಇರಲಿ ಬಿಡು, ಅಷ್ಟೇ.. ಮೋಹಗಾರ್ತಿ ಮೋಜುಗಾರ್ತಿ ಜಂಬಗಾರ್ತಿ ಎಂದರೆ ಇರಲಿ ಬಿಡು, ಅಷ್ಟೇ.. ಅಮ್ಮ ಅಕ್ಕ ತಂಗಿ ಮಗಳು ಅಜ್ಜಿ ಗೆಳತಿ ಒಡತಿ ಪ್ರೇಯಸಿ ಮನದರಸಿ ಎಲ್ಲಾ ನೀನೆ….  ನಿನ್ನೊಳಗಿನ ಭಾವ ಅದರ ಮರ್ಮ ಆರಿತವಳು ನೀನೊಬ್ಬಳೇ ಸಖಿ… ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ***********************************

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಹೆಣ್ಣಿನ ದುಡಿಮೆ ಮೂಲ:ಮಾಯಾ ಏಂಜೆಲೋ ಕನ್ನಡಕ್ಕೆ ಡಾ.ಗೋವಿಂದ ಹೆಗಡೆ ನನಗೆ ಮಕ್ಕಳ ಕಾಳಜಿ ಮಾಡಲಿದೆ ಅರಿವೆಗಳನ್ನು ಒಗೆಯಲಿದೆ ನೆಲ ಸಾರಿಸುವುದು ಆಹಾರ ಖರೀದಿಸುವುದು ಕೋಳಿಯನ್ನು ಹುರಿಯುವುದು ಮಗುವನ್ನು ಚೊಕ್ಕ ಮಾಡುವುದು ಬಂದವರಿಗೆ ಊಟ ನೀಡಬೇಕಿದೆ ತೋಟದ ಕಳೆ ತೆಗೆಯಬೇಕಿದೆ ಅಂಗಿಗಳಿಗೆ ಇಸ್ತ್ರಿ ಮಾಡಲಿದೆ ಪುಟಾಣಿಗಳಿಗೆ ಬಟ್ಟೆ ತೊಡಿಸಲಿದೆ ಕಬ್ಬು ಕತ್ತರಿಸಲಿಕ್ಕಿದೆ ಈ ಗುಡಿಸಲನ್ನು ಶುಚಿಗೊಳಿಸಲಿದೆ ರೋಗಿಗಳ ಉಪಚರಿಸಲಿದೆ ಹತ್ತಿಯನ್ನು ಬಿಡಿಸುವುದಿದೆ ಬೆಳಗು ನನ್ನಮೇಲೆ, ಬಿಸಿಲೇ ಸುರಿ ನನ್ನ ಮೇಲೆ, ಮಳೆಯೇ ಮೃದುವಾಗಿ ಇಳಿ, ಇಬ್ಬನಿಯೇ ನನ್ನ ಹಣೆಯನ್ನು ತಂಪಾಗಿಸು- ಮತ್ತೆ ಬಿರುಗಾಳಿ, ನನ್ನ ಇಲ್ಲಿಂದ ಹಾರಿಸು ನಿನ್ನ ಜೋರಾದ ಅಲೆಯಲ್ಲಿ ನಾನು ಬಾನುದ್ದ ತೇಲುವಂತಾಗಲಿ ಮತ್ತೆ ವಿರಮಿಸುವವರೆಗೆ ಹಿಮದ ತುಣುಕುಗಳೇ, ಮೆತ್ತಗೆ ಬೀಳಿರಿ ನನ್ನನ್ನು ಮುಚ್ಚಿ- ಬಿಳಿಯ ತಣ್ಣಗಿನ ಮಂಜಿನ ಚುಂಬನಗಳಿಂದ, ಈ ರಾತ್ರಿ ನಾನು ಮಲಗುವಂತಾಗಲಿ ನೇಸರ, ಮಳೆ, ಬಾಗಿದ ಆಗಸ ಬೆಟ್ಟ ಕಡಲು ಎಲೆ ಶಿಲೆ ತಾರೆಗಳ ಮಿನುಗು ಚಂದಿರನ ಹೊಳಪು ನಿಮ್ಮನ್ನು ಮಾತ್ರ ನಾನು ‘ನನ್ನವ’ರೆನ್ನಬಹುದು *********

ಅನುವಾದ ಸಂಗಾತಿ Read Post »

You cannot copy content of this page

Scroll to Top