ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಟಂಕಾಗಳು

ಕೆ. ಸುನಂದಾ

ಹಸಿದ ಹೊಟ್ಟೆ
ಅರಸು ವೇಷ ; ಖಾಲಿ
ಊಟದ ತಟ್ಟೆ
ಜೀವನ ಸಾಗಿಸಲು
ಬೀದಿ ನಾಟಕದಾಟ
**

ನಡೆ ನುಡಿಯು
ಒಂದಾಗಲು ; ಜೀವನ
ಸಾರ್ಥಕವಾಯ್ತು
ಕಪಟ ಮೋಸಗಳು
ಅಧಃಪತನ ವಾಯ್ತು
**

ನಾನೇ ಎಂಬುದು
ಅಹಂಕಾರ ; ನನ್ನದೇ
ಎಂದರೆ ನಾಶ
ಜೀವನ ನಡೆಸಲು
ಅರಿತು ಸಾಗಬೇಕು
**

ಜೀವನದಲ್ಲಿ
ಸತ್ಯಕ್ಕೆ ; ಸಾವೇ ಇಲ್ಲ
ಅಸತ್ಯ ಬೇಡ
ಸಂಸ್ಕಾರ ವಂತರಿಗೆ
ಜಯ ಕಟ್ಟಿಟ್ಟ ಬುತ್ತಿ
**

ಸಾವಿರ ಜನ
ಸೇರಿ ಆಡುವ ಮಾತು
ಲೆಕ್ಕಕ್ಕೆ ಅಲ್ಲ
ಆತ್ಮನ ನಿರ್ಧಾರವು
ಒಳಿತಿಗೆ ದಾರಿಯು
**

ಜೀವನ ಸಾರ
ಕೆಲಸ ಮಾಡಿ ತಿನ್ನು
ಅನ್ಯರನೆಂದೂ
ತಿರಸ್ಕರಿಸದಿರು
ಒಳಿತಿನ ಗುಟ್ಟಿದು
**

ಆಡದೇ ಮಾಡು
ಕೆಲಸ ಕೈ ಬಿಡದು
ಹಂಬಲವೇಕೆ
ಫಲ ಅವನ ಇಚ್ಛೆ
ನಿಷ್ಕಾಮ ಕರ್ಮ ಸಾಕು
*

ಸತ್ಯದ ನುಡಿ
ಕೊನೆವರೆಗೆ ನಡಿ
ಅಸತ್ಯ ಬೇಡ
ದೇವನೇ ಬರುವನು
ಭಕ್ತನಿದ್ದೆಡೆ ಓಡಿ

**************************************

About The Author

Leave a Reply

You cannot copy content of this page

Scroll to Top