ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನೇಗಿಲಿನ ಒಂದು ಸಾಲು

ವಿಠ್ಠಲ ದಳವಾಯಿ

ಶತಮಾನಗಳ ಇತಿಹಾಸ ಹೊಸೆದಿದೆ ನೇಗಿಲಿನ ಒಂದು ಸಾಲು
ಆತುಮಗಳ ಆಲಿಂಗನ ಬೆಸೆದಿದೆ ನೇಗಿಲಿನ ಒಂದು ಸಾಲು

ಜೀವಜಾತ್ರೆಯ ಜಾಡಿನಲಿ ಅಡಿಗಡಿಗೂ ಸವಾಲಿನ ಹೊನಲು
ಹೂವಕಂಪನೆ ಹರಡುತ ಸಾಗಿದೆ ನೇಗಿಲಿನ ಒಂದು ಸಾಲು.

ಹರಕುವಸ್ತ್ರ, ಮುರುಕು ಗುಡಿಸಲು, ಹಸಿದ ತೊಟ್ಟಿಲು
ಜಗದ ಕಣ್ಣೀರಿಗೆ ಮರುಗಿದೆ ನೇಗಿಲಿನ ಒಂದು ಸಾಲು.

ಬೆವರು, ನೆತ್ತರು ಬಿತ್ತಿ ಅನ್ನವನು ಉಣಿಸಿದೆ ಲೋಕದ ಹಸಿವಿಗೆ.
ತಣ್ಣೀರುಪಟ್ಟಿ ಕಟ್ಟಿ ಮಲಗಿದೆ ನೇಗಿಲಿನ ಒಂದು ಸಾಲು.

ಹೆದ್ದಾರಿಯ ಹಿರಿಯಾಸೆ, ಸುಂದರ ನಗರಿಯ ಕನಸಿಗೆ
ಒದ್ದೆಮನದಲೆ ಕನಿಕರಿಸಿದೆ ನೇಗಿಲಿನ ಒಂದು ಸಾಲು.

ಅನ್ನದ ಬಟ್ಟಲಿನಲಿ ಮಣ್ಣು ಸುರಿಯಬೇಡ ‘ದೊರೆ’
ಮಣ್ಣು, ಅನ್ನ ಕೊಟ್ಟೇ ಸಾಗುತ್ತದೆ ನೇಗಿಲಿನ ಒಂದು ಸಾಲು.

*****************************************

About The Author

3 thoughts on “ನೇಗಿಲಿನ ಒಂದು ಸಾಲು”

  1. ನೇಗಿಲಿನ ಸಾಲು ಯೋಗಿಯ ಮೌನದಂತೆ ಹೊಳೆಯುವಂತೆ ಮಾಡಿದೆ. ಅನ್ನದಾತನ ಕಾಯಕ, ಜೀವಗಳ ಬೆಸೆಯುವಿಕೆ ಹಾಗೂ ಸದಾ ಪ್ರಕೃತಿ ಜೀವಂತಿಕೆಯ ತುಡಿಯುವ ಹೊತ್ತಿಗೆ ಆ ಸಾಲು ಅಳಿಸಲು ನಿಂತಿರುವ ಹುಸಿ ಆಧುನಿಕಕತೆಗೆ ಮುಖಾಮುಖಿಯಾಗುತ್ತದೆ. ಸರಳತೆಯಲ್ಲೆ ಮಿಗಿಲಾದ ಅರ್ಥವಂತಿಕೆ ಜಿನುಗಿಸುವ ಕವಿಯ ಕುಸುರಿ ಮೆಚ್ಚವಂತದ್ದು. ಮುಂದುವರೆಯಲಿ….

  2. ಮರಿಗೌಡ್ರು ನರಗುಂದ

    ನೇಗಿಲಿನ ಸಾಲು ಯೋಗಿಯ ಮೌನದಂತೆ ಹೊಳೆಯುವಂತೆ ಮಾಡಿದೆ. ಅನ್ನದಾತನ ಕಾಯಕ, ಜೀವಗಳ ಬೆಸೆಯುವಿಕೆ ಹಾಗೂ ಸದಾ ಪ್ರಕೃತಿ ಜೀವಂತಿಕೆಯ ತುಡಿಯುವ ಹೊತ್ತಿಗೆ ಆ ಸಾಲು ಅಳಿಸಲು ನಿಂತಿರುವ ಹುಸಿ ಆಧುನಿಕಕತೆಗೆ ಮುಖಾಮುಖಿಯಾಗುತ್ತದೆ. ಸರಳತೆಯಲ್ಲೆ ಮಿಗಿಲಾದ ಅರ್ಥವಂತಿಕೆ ಜಿನುಗಿಸುವ ಕವಿಯ ಕುಸುರಿ ಮೆಚ್ಚವಂತದ್ದು. ಮುಂದುವರೆಯಲಿ….

Leave a Reply

You cannot copy content of this page

Scroll to Top