ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನನ್ನ ನೋವು

ಸಾತುಗೌಡ ಬಡಗೇರಿ

ಕಣ್ಣೀರ ಹನಿಯೊಂದು
ಹೇಳುತ್ತಿದೆ ಹೊರಬಂದು
ನೊಂದ ಹೃದಯದ ತನ್ನ ವ್ಯಥೆಯ.
ಸೂತ್ರವು ಹರಿದಂತಹ
ಪಟದಂತೆ ಬಾಳಾಗಿ
ಕಥೆಯಾಗಿ ಹೇಳುತ್ತಿದೆ ಬೆಂದು ಹೃದಯ.

ಜೊತೆಯಾಗಿ ಉಸಿರಾಗಿ
ನಿನಗಾಗಿ ನಾನಿರುವೆ..
ಮಾತು ಕೊಟ್ಟನು ನಲ್ಲನಂದು.
ಮರೆತು ಹೊರಟಿಹನು
ತಬ್ಬಲಿಯ ನನಮಾಡಿ
ಕಂಬನಿ ಮಿಡಿಯುತ್ತಿದೆ ಕೇಳಿಯಿಂದು.

ನಿನಬಾಳು ಬೆಳಕಾಗಿ
ನಗುತಲಿರು ಓ ಗೆಳೆಯಾ…
ನಿನ್ನಮೊಗ ತೋರದಿರು ಮುಂದೆ ಎಂದು.
ಕಹಿ ನೆನಪ ನಾಹೊತ್ತು
ಬಾಳುವೆ ನಾನಿಲ್ಲಿ
ಕಣ್ಣೀರಧಾರೆ ಸುರಿಸುತ್ತಾ ಮುಂದು

****************************

About The Author

10 thoughts on “ಕಾವ್ಯಯಾನ”

  1. ನೋವಿನ ಸೆಳಕೊಂದು ಎದೆಯಲ್ಲಿ ಮೂಡಿಸಿ ಆರ್ದ್ರಗೊಳಿಸುವ ಕವಿತೆ..

  2. ದೇವಿದಾಸ ಬಿ ನಾಯಕ ಅಗಸೂರು ಶಿರಸಿ

    ನಲ್ಲನಿಂದ ದೂರಾದರೂ ಅವಳ ಹೃದಯ ಆತನ ಏಳ್ಗೆ ಬಯಸಿ ನೋವು ನನಗೇ ಇರಲಿ ನೀ ಚೆನ್ನಾಗಿರು ಎಂದು ಹೇಳುವ ಕವನ ಮನಸ್ಸಿಗೆ ನಾಟುತ್ತದೆ ಕವಿ ಚೆನ್ನಾಗಿ ಕವನ ಹೆಣೆದಿರುತ್ತಾರೆ ಅಭಿನಂದನೆಗಳು ಸರ್

  3. ಹರೀಶ ಗೌಡ ಗಂಗೇಕೊಳ್ಳ

    ಹೃದಯದ ಅಂತರಾಳದೊಳಗಿಂದ ಚಿಮ್ಮಿದ ಕಣ್ಣೀರ ಕವಿತೆ
    ತುಂಬಾ ಚೆನ್ನಾಗಿದೆ ಸರ್

  4. ಪ್ರಶಾಂತ

    ನೊವಿನ ಕಥೆಯನ್ನು ಸಾರುವ ಕವನ ತುಂಬಾ ಚೆನ್ನಾಗಿದೆ.

  5. ಬಾಲಕೃಷ್ಣ ದೇವಮಮನೆ, ಬೆಳಂಬಾರ

    ಹೆಂಗರುಳಿನ ಕವಿ ಮನವು ನೊಂದ ಹೆಣ್ಣಿನ ದನಿಯಾಗಿ ಕಾವ್ಯವಾಗಿದೆ.

Leave a Reply

You cannot copy content of this page

Scroll to Top