ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕವಾಟಗಳ ಮಧ್ಯೆ ಬೆಳಕಿಂಡಿ

ಸುತ್ತು ಗೋಡೆಗಳ ಕಟ್ಟಿ
ತೆರೆಯದ ಕವಾಟಗಳ ಮಧ್ಯೆ
ನಾನೆಂಬ ನಾನು

ಬೇಧವಳಿದು
ಒಂದಾಗಲಿ
ಜೀವ ಪರಮಾತ್ಮ
ಸಂತ ಶರಣರ ಅಹವಾಲು

ನೋವಿರದ ಹಸಿದ ಸ್ವಾರ್ಥ
ಬರಡಾದ ಎದೆಯ ಅಮೃತ
ಬರಿದೆ ಬಡಿಯುವ ಮಿಡಿತ

ಕಳೆದು ಹೋಗಿಹ ನಾವು
ಕದ ತಟ್ಟಿ ಕರೆಯೋಣ
ಇಂದಲ್ಲ ನಾಳೆ ತೆರೆದೀತು
ತಟ್ಟಿದ ಕೈಗಳ ತಬ್ಬೀತು
ಸಂತ ಶರಣರು ನಕ್ಕಾರು.

***************************

About The Author

Leave a Reply

You cannot copy content of this page

Scroll to Top