ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಉಳಿವಿಗಾಗಿ ಹೋರಾಟ

ಲಕ್ಷ್ಮೀದೇವಿ ಕಮ್ಮಾರ

ಇತಿಮಿತಿಗಳ ಪರದೆ ಹರಿದು
ಬಯಲಲಿ ಒಂದಾಗಲು
ನಿಂತಲ್ಲೇ ನಿಂತು ಕೋಳೆಯುವ ಮೋದಲು
ಸಾಗಬೇಕು ನಾವು ಮುಂದು ಮುಂದು
ಹೋಸ ದಾರಿ ಕಂಡುಕೊಂಡು

ಅವರ ಜೀವನ ಅವರಿಗೆ
ನಮ್ಮ ಜೀವನದ ದಾರಿ ನಮಗೆ
ನಾವೆ ಸವಿಸಬೇಕು
ಹೊಟ್ಟೆ, ಬಟ್ಟೆಗೆ ಗಟ್ಟಿ ನೆಲೆ ಕಂಡುಕೊಳ್ಳಲು
ನಾವು ಹೆಣಗಾಡಬೇಕು

ಹುಚ್ಚು ಮನದ ಹಂಬಲಕೊ
ಯಾರ ಮೇಲಿನ ರೊಚ್ಚಿಗೊ
ಭಂಡಾಯದ ಕಿಚ್ಚಿಗೊ
ಹಾಕಿಕೊಂಡ ಕಗ್ಗಂಟುಗಳ ಬಿಚ್ಚುಕೊಂಡು

ನಮ್ಮಳುವಿಗಾಗಿ ಗೊಡ್ಡುಸಂಪ್ರದಾಯ,ಮರ್ಯಾದೆಗಳ ಮಡುವಿನಿಂದ ಮೇಲೆ ಬಂದು
ಗಟ್ಟಿನೆಲೆ ಕಾಣಬೇಕು
ನಮ್ಮೋಳಗಿನ ಶಕ್ತಿ ಅನಾವರಣಗೊಳ್ಳಬೇಕು

ಕತ್ತಲೆಯಲಿ ಭೂಗತ ವಾಗುವ ಬದಲು
ಬೆಳಕಿಗೆ ಬಿದ್ದು,ಬಾಳು ಬೆಳಗಬೇಕು
ಕತ್ತಲಲಿದ್ದವರಿಗೆ ದೀಪದುಡಗರೆ
ನಾವು ನೀಡಬೇಕು

*******************************

About The Author

Leave a Reply

You cannot copy content of this page

Scroll to Top