ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಷರತ್ತು

ಮಾಂತೇಶ ಬಂಜೇನಹಳ್ಳಿ

ಈಗ ಮಳೆ ಬಿಟ್ಟಿದೆ.
ಅವಳ ನೆನಪುಗಳ ಹದವಾಗಿ,
ಎದೆಯ ಬಾಣಲೆಯೊಳಗೆ,
ಕಮ್ಮಗೆ ಹುರಿಯುವ ಸಮಯ..

ಚಿಟಪಟವೆಂದು ಒಂದಷ್ಟು,
ಜೋಳದ ಕಾಳುಗಳಂತೆ
ನೆನಪ ಬಿಸಿಗೆ ಸಿಡಿದಾವು.
ಸಾವಧಾನಕ್ಕಾಗಿ ನೆನೆವ ಉರಿ ತಗ್ಗಿಸುವುದು,
ಹೃದ್ಯೋಧರ್ಮ.. ನಿಗವಿಡುತ್ತೇನೆ.

ಮಳೆಗೂ ಗೊತ್ತು ಧೋ!!ಎಂದು
ಒಂದೇ ಸಮನೆ ಸುರಿದರೆ,
ಒಬ್ಬ ಪ್ರೇಮಿ ಅವಳಿಗಾಗಿ ಪರಿತಪಿಸುವುದಿಲ್ಲವೆಂದೂ,
ನೆನಪಿಸುವುದಕ್ಕೆ ನೆಲ ರಾಚುವ
ಹನಿಗಳ ಕರತಾಡನ ಸುಖಾ ಸುಮ್ಮನೆ ಅಡ್ಡಿಯಾದೀತೆಂದು.

ಗರಕ್ಕನೆ ನಿಂತು ಬಿಟ್ಟರೆ ಅಬ್ಬಬ್ಬಾ!
ಹುಬ್ಬೆ ಮಳೆ ಸುರಿದು ಸಮ ರಾತ್ರಿಗೆ,
ಮಲಗಿದ ಬೆಳಗಿಗೆ ಮೃದು ನೆಲದಲ್ಲಿ,
ಮನೋಸೆಳೆವ ಅಣಬೆಗಳಂತೆ ಉಬ್ಬುವ
ಆಕೆಯ ನೆನಪುಗಳು ದಾಂಗುಡಿಯಾಗುತ್ತವೆ.

ಮುಂದಿನದ್ದು ನಿರತ ಅನುಭವಿಸುವ,
ನಾನು ಮಾತ್ರ ನನ್ನೊಳಗೆ,
ಆಕೆಯ ಸದಾ ನೆನೆವ ಷರತ್ತಿಗೆ
ಒಳಪಡುತ್ತಲೇ ಇರುತ್ತೇನೆ..

***********************

About The Author

8 thoughts on “ಷರತ್ತು”

Leave a Reply

You cannot copy content of this page

Scroll to Top