ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿಡುಗಡೆ

ರುಕ್ಮಿಣಿ ನಾಗಣ್ಣವರ

ರಾಹತ್ ಇಂದೋರಿ

ನಂಬಿಗಸ್ಥ ಕುನ್ನಿಯಂತೆ ಪಾಲಿದ
ತಲೆತಲೆಮಾರಿನ ಮೌನವನ್ನು
ಮತ್ತೊಮ್ಮೆ ಮುರಿದು
ದವಡೆಯಲ್ಲಿ ಒತ್ತಿ ಹಿಡಿದ
ಸಿಟ್ಟು ಬಳಸಿ ಹೊಟ್ಟೆಬಾಕರ
ಹುಟ್ಟಡಗಿಸಬೇಕಿದೆ

ತುತ್ತು ಅನ್ನಕ್ಕೆ, ತುಂಡು ಭೂಮಿಗೆ
ಕೈ ಕಟ್ಟಿ, ಬಾಯಿ ಮುಚ್ಚಿ,
ಟೊಂಕದಲ್ಲಿರಿಸಿದ
ಸ್ವಾಭಿಮಾನ ಗಾಳಿಗೆ ತೂರಿ
ಜೀತದಾಳಾಗಿ ದುಡಿಯುವ
ಕಾಲ ದೂರಿಲ್ಲ
ಅರಿಯಬೇಕಿದೆ

flame illustration

ಅಗೋ…
ಉರುಳಿಹೋದ ದಿನಗಳು
ಮರುಕಳಿಸುವ ಕರಾಳ
ಕ್ರೌರ್ಯದ ಕೂಗು
ಇತ್ತಲೇ ಹೆಜ್ಜೆ ಇರಿಸಿದೆ

ನರಳಾಟದ ಕೆಂಡದಲಿ
ಅಂಡು ಸುಡುವ ಮೊದಲು
ಎಚ್ಚೆತ್ತುಕೊಳ್ಳಬೇಕಿದೆ
ಕ್ರಾಂತಿಯ ಕಹಳೆ ಮೊಳಗಿಸಿ
ನಮ್ಮವರಿಂದಲೇ ನಾವು
ಬಿಡುಗಡೆ ಹೊಂದಬೇಕಿದೆ..

*****************

About The Author

Leave a Reply

You cannot copy content of this page

Scroll to Top