ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹಾಳೆ ತಿರುವಿದರೆ ಅಧ್ಯಾಯ ಮುಗಿಯದು
ಧರ್ಮಸ್ಥಾಪನೆಗೆ ಮತ್ತೆ ಮತ್ತೆ ಬರುತ್ತೇನೆಂದವ
ಹೇಳಿದ್ದೂ ಅದನ್ನೇ
ಎಲ್ಲವೂ ಮುಗಿಯದ ಅಧ್ಯಾಯ

ದಾರಿಗಳು ಎಂದೋ ಕವಲೊಡೆದವು
ಎಲ್ಲ ಮರೆತಂತೆ ಹೆಜ್ಜೆಗಳೂ ನಡೆದವು
ಉಸಿರು ಭಾರದ ಜೋಕಾಲಿ
ಜೀಕಿದಷ್ಟೂ ಎಳೆದಾಡುತ್ತಿತ್ತು

ಕಟಕಟೆಯ ತೀರ್ಪಿನಲ್ಲಿ
ಇವರು ಬೇರೆ ಬೇರೆ
ಉಳಿಯುವುದು ಏನಿದ್ದರೂ ಲೆಕ್ಕಾಚಾರ
ಉತ್ತರ ಹುಡುಕುವ ಪುಟ್ಟ ಕಂಗಳಲ್ಲಿ
ಪ್ರಶ್ನೆಗಳ ಮಹಾಪೂರ

ಹಾಳೆಗಳೂ ನಾಳೆಗಳಂತೆ
ಕರೆದಷ್ಟೂ ತೆರೆಯುತ್ತವೆ
ಚುಕ್ಕೆಯಿಡುವ ಮುನ್ನ ಅಲ್ಪವಿರಾಮ
ಮುಗಿಸಲು ಮನಸ್ಸಿಲ್ಲ
ಹೇಗೆಂದರೂ
ಇದು ಮುಗಿಯದ ಅಧ್ಯಾಯ.


About The Author

Leave a Reply

You cannot copy content of this page

Scroll to Top