ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶಾಲಾ ಆರಾಧ್ಯ ಕಾವ್ಯಗುಚ್ಛ

Fork Abstract. An abstract look at dinner forks on a black surface with reflection. Horizontal format royalty free stock images

ಬುದ್ಧನೊಂದಿಗೊಂದು ದಿನ

Buddha. A photo of the face of Buddha stock photos

ನಿನ್ನಂತಾಗಲೂ
ನಾನೇನು ಮಾಡಬೇಕು ?
ಕತ್ತಲ ಬದುಕಿನಿಂದೊಡನೆ
ನಡೆದುಬಿಡಲೇ?
ಓ..ಓಹ್
ಎಂದಾದರೂ ಉಂಟೆ ಬುದ್ಧ ?
ಯಶೋಧರೆ ಏನಾದರೂ ನಿನ್ನ ಬಿಟ್ಟು ರಾಹುಲನ ದಾಟಿ ಬಂದಿದ್ದರೆ
ಕಥೆ ಏನಾಗಿರುತ್ತಿತ್ತು..??
ನೀನೇನೋ ಸಿದ್ಧಾರ್ಥನಿಂದ
ಬುದ್ಧನಾಗಿ ಹೋದೆ
ಯಶೋಧರೆಗೆಂತೆಂಥಹ ಪದವಿ
ಬಿರುದು ವಿಜೃಂಭಿಸುತ್ತಿದ್ದವು
ಬಲ್ಲೆ ಏನು?
ಸಾಧ್ವಿ ಸೀತೆಯ ಶೀಲಕೆ ಬೆಂಕಿಯಿತ್ತ ಜನ
ಸಾವಿತ್ರಿಯ ಸೋಲಿಸೆ ನಿಂದಸಿದ ಯಮ
ಕೃಷ್ಣೆಗೆ ಹೊರಗಿನರಲ್ಲ ಅರಮನೆಯಲೇ
ಅಂಬರವ ಹರಿದ ಬಣ!
ಯಶೋಧರೆಯ ಬೇರಾವ ಅಗ್ನಿನುಡಿಗೀಡು
ಮಾಡುತ್ತಿದ್ದರೋ..
ನಿನಗೆ ಒಮ್ಮೆಯಾದರೂ ಪತ್ನಿ ಬೇಡ..!
ಪುತ್ರನ ನೆನಪೇನಾದರೂ ಸುಳಿಯಿತೇ?
ಊರಿಗೇ ಬೆಳಕಿತ್ತ ಪುಣ್ಯಾತ್ಮ ನೀನು
ಒಳಗೊಳಗೇ ನೀನು ಕತ್ತಲಾಗಲಿಲ್ಲವೇ? ದೀಪದ ಕೆಳಗಿನ ಕತ್ತಲಂತೆ..!!


ಎಲ್ಲೆ

Hands of God. Hands coming from a cloudy sky with streaming light. Concept for the giving hands of God royalty free stock photos

ದೇವರು ದಿಕ್ಕರಿಸಿ ಗಡಿಪಾರಾಗಿದ್ದಾನೆ
ಮಾಡಿದ ಸೈಟು ಬೇಡಿದ ಕಾರು
ಮಾಡಿದ ಕಾರುಬಾರೆಲ್ಲಾ
ಅವನ ಕೃಪೆಯೇ !
ಗೋಡೆಯಲಿ ಇದ್ದಾಗ
ಅಮ್ಮ ಅಪ್ಪನೇ ಗುರುವೇ ಎಂದು
ವಾರ ಮಾಡಿ ಪಕ್ಷ ಮಾಡಿ ಬೇಡಿ ಕಾಡಿ ಪಡೆದವರೇ .!
ಕಾಯಿ ಹೊಡೆದು ಹಣ್ಣನಿತ್ತು
ದೀಪ ಧೂಪ ಹಚ್ಚಿ ಇಟ್ಟು ವಸ್ತ್ರ ದಕ್ಷಿಣೆಗಳನಿಟ್ಟು
ಕೈ ಜೋಡಿಸಿ ಬೇಡಿದವರೇ..!
ಅವನಿಗಾಗಿ ಜಾತ್ರೆ ಮಾಡಿ
ಅವನ ಹೆಸರಲೇ ಯಾತ್ರೆ ಮಾಡಿ
ದಂಡಿ ದಂಡಿ ದಂಡವಿಟ್ಟು
ಹರಕೆ ಹೊತ್ತು ಉರುಳಿ ಬಂದು ದೀರ್ಘ ದಂಡ ಹಾಕಿದವರೇ ..!
ಅಂಬರಕ್ಕೇ ಅಂಬರವನಿತ್ತು
ದಯಾಮಯಿಗೇ ದಯೆ ತೋರಿ
ನೆಲೆಯಾದವನಿಗೇ ಗುಡಿಯ ಕಟ್ಟಿ
ಮನೋಹರನಿಗೇ ಉಪಚಾರ ಮಾಡಿ ಕಡೆಗೊಂದು ದಿನ
ಮಾಸಿದನೆಂದೋ ಪಟ ಪಸುಗೆಯಾಯಿತೆಂದೋ
ಮನೆಯಾಚೆ ತಳ್ಳಿ ಜಗನ್ನಾಥನನ್ನೇ
ಅನಾಥಗೊಳಿಸಿದ ಮನುಜ ಭಕ್ತಿಗೇನೆಂಬೆ?


ಕುದಿ

Romantic flower petals close up. Isolated stock photos

ಕುದಿಯುವ ಹೂವಿನ ಹೃದಯಗಳಲಿ
ನಗುವಿನ ಆವಿಯ ಚಿತ್ರಣ ತೋರಿಕೆ
ಅಂತರಂಗದ ಕತ್ತಲಾಮಿಷ ಕೋಣೆಗೆ
ಬಹಿರಂಗದಿ ಕಾಣುವ ಬೆಳಕಿನ ಜವನಿಕೆ

ಹೂವಿನ ಹುಡುಗನು ಕಟ್ಟುವ ನೂಲಲೇ
ಕೊರಳುಸಿರಿನ ಇರಿತದ ಮತ್ಸರವಿಹುದು
ಕಸಾಯಿಕಾನೆಯ ಕಟುಕನ ಕಣ್ಣಲೂ
ಕರುಣೆಯ ಕರುಳಿನ ಕರೆಯಿರಬಹುದು

ಕಣ್ಣಿಗ್ಹಬ್ಬವಾಗೋ ಅಂದದ ಕಡಲೊಳು
ಜೀವ ತೆಗೆಯುವ ಸುಂದರ ಜಲಚರ
ಕಸವನೇ ನುಂಗಿದ ಕೆಸರಿನ ಹೊಂಡದಿ
ಪೂಜೆಗೆ ಒದಗುವ ಕಮಲದ ಹಂದರ

ಸುಂದರ ಗೋಕುಲ ವೃಂದಾವನದಿ ಗೂಡೊಳಗೊಂದು ವ್ಯಾಘ್ರ ನುಗ್ಗಿದೆ
ಅಂದದೊಂದಿಗೆ ಚಂದದ ಮನದಿ
ಮನದೊಳಗೆ ವಿಷವನೇ ಬಸಿದಿದೆ
————-

*********************

About The Author

2 thoughts on “ವಿಶಾಲಾ ಆರಾಧ್ಯ ಕಾವ್ಯಗುಚ್ಛ”

  1. ಪ್ರೇಮಶೇಖರ

    ಮೂರು ಕವನಗಳೂ ಚೆನ್ನಾಗಿವೆ. “ಬುದ್ಧನೊಂದಿಗೊಂದು ದಿನ” ವಿಶೇಷವಾಗಿ ಇಷ್ಟವಾಯಿತು.

Leave a Reply

You cannot copy content of this page

Scroll to Top