ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಲ್ಲಿ ಎಲ್ಲವೂ ಬದಲಾಗುತ್ತದೆ

ಅರ್ಪಣಾ ಮೂರ್ತಿ

ಕಸಾಪಗೆ ಮಹಿಳಾ ಅಧ್ಯಕ್ಷರು

ದಿನಕ್ಕೊಂದು ಬಣ್ಣ ಬದಲಿಸುವ
ಇದೇ ಇಳಿಸಂಜೆಗಳಲ್ಲಿ
ನಾ ಬದಲಾಗದ ನೆನಪ ಹರವಿದ್ದೇನೆ,

ಬರಡು ಬಯಲಿನ
ಮನಸುಗಳ ನಡುವೆ
ನಾ
ಕೊನರಿದ ಕೊರಡಿನ ಹಸಿರನ್ನಷ್ಟೇ ಮನಕ್ಕಿಳಿಸಿಕೊಂಡಿದ್ದೇನೆ,

ದಿಕ್ಕು ತಪ್ಪಿದ ನದಿಗಳು
ಅಲ್ಲೆಲ್ಲೋ ಸಂಗಮಿಸುವಾಗ
ನಾನಿಲ್ಲಿ ಅಲೆದಾಡಿ ನದಿಯ ಕಾಯುವ ಕಡಲಾಗಿದ್ದೇನೆ.,

ಹೌದು ಇಲ್ಲಿ ಎಲ್ಲವೂ ಬದಲಾಗಿದೆ,

ನಾನು?
ಊಹೂ,
ನಾನೀಗಲೂ
ಬಾರದ ಅಮವಾಸ್ಯೆಯ ಚಂದಿರನ ಬೆಳಕ
ಚುಕ್ಕಿಯಲಿ ಹುಡುಕುವ
ಕಾತರದ ಕಣ್ಣಾಗಿದ್ದೇನೆ….

************************

About The Author

1 thought on “ಕಾವ್ಯಯಾನ”

Leave a Reply

You cannot copy content of this page

Scroll to Top