ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆ – ಲಯ

ಡಾ. ಅಜಿತ್ ಹರೀಶಿ

ಆ ಕಲ್ಲುಗಳು
ಭೂಕಂಪಕ್ಕೆ ಸಿಲುಕಿ
ನಡುಗಿ ಅಡಿಗಡಿಗೆ
ಕುಸಿದು ಬಿದ್ದುದು ಅಲ್ಲ

ಆಕಸ್ಮಿಕವಾಗಿ
ಅದೇನೋ ತಾಗಿ
ಅಲುಗಾಡಿ
ನೆಲಕ್ಕುರುಳಿದ್ದೂ ಅಲ್ಲ..!

ಏಕಶಿಲೆಯಂತೆ
ಭದ್ರವಾಗಿದ್ದವುಗಳ
ಬಡಿ-ಬಡಿದು
ಕೆಡವಿದ್ದು ನಾನೇ..

ಪಥ ಬದಲಿಸಿ
ಸಮಯದಿ
ಬಂಧಿಸುವ ಧನ್ಯನಾದ
ಮೊಳಗಲೇ ಬೇಕಿದೆ
ಕ್ರೀಯಾಶೀಲ ನಿನಾದ

ಉರುಳಿ ಹೋದ
ಕಲ್ಲುಗಳ ಆಯ್ದು
ಮತ್ತೆ ಕಟ್ಟಬೇಕಿದೆ
ಅಡಿಯಿಂದ
ಮುಡಿಯವರೆಗೂ..!

  • * *

About The Author

4 thoughts on “ಕವಿತೆ”

Leave a Reply

You cannot copy content of this page

Scroll to Top