ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಎನ್. ಶೈಲಜಾ ಹಾಸನ

ಅವೀರ್ಭವಿಸಿದೆ ಮೂರ್ತ
ಅಮೂರ್ತಗಳ ನಡುವಿನ ಸ್ವರೂಪ
ಮುಂದಕ್ಕಿಡುವ ಹಾದಿ
ಹಿಂದಕ್ಕೋಡುತಿದೆ

ಅಲ್ಲೊಂದು ಕಡಲು
ಮೇಲೊಂದು ಮುಗಿಲು
ದಾಟಿ ನದಿ ತಟವ
ಕಾಡು ಗಿರಿಯ ಹಾದು,
ಮುಗಿಲಂಚನು

ಮುಟ್ಟುವಾಗಿನ ಸಂಭ್ರಮ
ಗೆಲುವ ಮೀಟಿ
ಪಿಸು ಪಿಸು ಧ್ವನಿ
ಎಲ್ಲಿ? ಎಲ್ಲಿ? ಬೆನ್ನ ಹಿಂದೆ!
ಹಿಂತಿರುಗಿದರೆ

ಧ್ವನಿ ಮಾಯ
ಮುನ್ನಡೆದರೆ
ಮತ್ತೆ ಧ್ವನಿ, ಮತ್ತೂ
ನಡೆದರೆ

ಗಹಗಹಿಸುವ
ವಿಕಟನಗೆ
ಸೋಲೋ ಗೆಲುವೋ
ಮೂರ್ತವೋ
ಅಮೂರ್ತವೋ?

*********************

About The Author

3 thoughts on “ಅಸಹಾಯಕತೆ”

  1. ಡಾ.ರಾಧಿಕಾ ರಂಜಿನಿ

    ಸೂಪರ್ ಮೇಡಂ ಕವಿತೆಯ ಭಾವ ಚೆನ್ನಾಗಿ ಬಂದಿದೆ.

  2. ಚೆನ್ನಾಗಿದೆ ಮೇಡಂ, ಆಧುನಿಕ ಜಗತ್ತಿನ ಪ್ರತಿಧ್ವನಿಯಾಗಿದೆ.

Leave a Reply

You cannot copy content of this page

Scroll to Top