ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ದೇವರು

ಮಾಲತಿ ಶಶಿಧರ್

ನಿನ್ನ ಮೆಚ್ಚಿಸಲೇಬೇಕೆಂಬ
ಇರಾದೆಯೇನಿಲ್ಲ ಹುಡುಗ,
ಸೊಡರ ಹೊತ್ತಿಸುವುದು
ದೇವರ ಮೆಚ್ಚಿಸುವುದಕ್ಕಲ್ಲ
ಮನವ ಒಪ್ಪಿಸಲು…

ನಿನ್ನ ಒಲಿಸಿಕೊಳ್ಳಲೇಬೇಕೆಂಬ
ಹಠವೇನಿಲ್ಲ ಹುಡುಗ,
ಹೂವ ಅರ್ಪಿಸುವುದು
ದೇವರ ಒಲಿಸಲಲ್ಲ
ಭಕ್ತಿ ತೋರಿಸಲು…

ನಿನ್ನ ಪಡೆಯಲೇಬೇಕೆಂಬ
ಸಂಕಲ್ಪವೇನಿಲ್ಲ ಹುಡುಗ,
ನೈವೇದ್ಯೆ ಕೊಡುವುದು
ದೇವರು ಪ್ರತ್ಯಕ್ಷವಾಗಲಿ ಎಂದಲ್ಲ
ಪ್ರೀತಿ ಸಮರ್ಪಿಸಲು…

ನಿನ್ನ ಮೆಚ್ಚಿಸಿ, ಒಲಿಸಿ, ಪಡೆದುಬಿಟ್ಟರೆ
ಎಲ್ಲರಂತೆ ಕೇವಲ
ಮನುಜನಾಗಿಬಿಡುವೆ,
ನೀನೆಂದಿಗೂ ಮನದ ಗುಡಿಯೊಳಗೆ
ನೆಲೆಸಿರುವ ನನ್ನ ದೇವರಾಗೆ ಉಳಿದುಬಿಡು

**********************

About The Author

18 thoughts on “ದೇವರು”

  1. Nagaraj Harapanahalli

    ಕವಿತೆಯನ್ನು ಒಂದು ಔನ್ನತ್ಯದ ತುದಿಗೆ ತಲುಪಿಸಿ,ವಾಪಾಸ್ ಬರುವುದು ಅಂದರೆ ಹೀಗೆ….ಚೆಂದ ಕವಿತೆ

  2. ಖಂಡಿತಾ ರಾಜ್ಯ ಮಟ್ಟದ ಕವಯಿತ್ರಿಯರ ಸಾಲಿಗೆ ಬರುತ್ತೀರಿ. ಶುಭವಾಗಲಿ

Leave a Reply

You cannot copy content of this page

Scroll to Top