ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ರೇಶ್ಮಾಗುಳೇದಗುಡ್ಡಾಕರ್

ಗೆಲ್ಲ ಬೇಕಿದೆ ಕ್ಷಣ ಕ್ಷಣಕ್ಷಣಕೂ
ಹೊಸ ಅವತಾರದಿದಂದ ಮರಳುಮಾಡುವ
ಹನಿ ವಿಷಕೂ ಹೆಣದ ಹೊಳೆಹರಿಸುವ
ಅಂತರಂಗದ ಯುದ್ದವ

ನೆಡ ಬೇಕಿದ ಮಾನವೀಯತೆ ಸಸಿಯ
ಬೆಳಸಿ ಉಳಿಸ ಬೇಕಿದೆ ಮನದ
ರಹದಾರಿಯತುಂಬಾ ಪ್ರೀತಿಯ
ನೆರಳ ಪಡೆಯಲು ಬದುಕಿನಲ್ಲಿ

ಒತ್ತರಿಸಿ ಬರುವ ದುಃಖ ವ ಹತ್ತಿಕುವ
ಬದಲು ಒರೆಸುವ ನೊಂದ ಕಣ್ಣುಗಳನು
ಮರೆಯುವ ನಮ್ಮೊಡಲ ಬೇನೆಯನು
ನಿಸ್ವಾರ್ಥ ದ ತೊಡೆತಟ್ಟಿ ಆಖಾಡಕೆ
ಇಳಿಯುವ “ನಾನು “ಎಂಬ ಅಹಂ
ಗೆಲ್ಲುತ ಸಾಗುವ ಬಾಳ ಪಯಣವ

ಊರು ಯಾವುದಾದರೇನು ದಾರಿ
ಯಾವುದಾದರೇನು ನಾನು ನನ್ನೋಳ
ಗೆ ಇರುವ ನೀವು ಒಂದೇ ಅಲ್ಲವೇನು?
ನಾಲಿಗೆಯ ಬಂದೂಕು ಮಾಡಿ
ಬದುಕಿದರೆ ಮನುಷ್ಯ ತ್ವ ಉಳಿಯುವದೇನು?

***********************

About The Author

1 thought on “ಮನುಜ ಮತ”

Leave a Reply

You cannot copy content of this page

Scroll to Top