ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನಾಗರಾಜಹರಪನಹಳ್ಳಿ

ಪ್ರತಿಕ್ಷಣದ ಉಸಿರು
ನನ್ನೆದೆಯಲ್ಲಿ ಬಿಸಿರಕ್ತವಾಗಿದೆ
ಕೈ ಬೆರಳ ಸ್ಪರ್ಶ
ಹಾಡಿದ ರಾಗ ಅನುರಣಿಸುತ್ತಿದೆ
ಕಣ್ಣುಗಳಲ್ಲಿ ಮುಚ್ಚಿಡಲಾಗುತ್ತಿಲ್ಲ
ಒಲವ ಒಳಹರಿವು ……..
**

ಹಗಲು ರಾತ್ರಿಗಳನ್ನುಂಡು ನಿಶಬ್ದವಾಗಿ
ಮಲಗಿರುವ ಬೆಟ್ಟಸಾಲುಗಳೇ
ಬಯಲು ಕಣಿವೆ ಮುದ್ದಿಸಿ ಸಾಗುವ
ಮಂಜು ಮೋಡಗಳೇ
ಆಕೆಗೆ
ಮುಗಿಲ ಸಂದೇಶವ ಅನುವಾದಿಸಿ ಬಿಡಿ


ಈಗೀಗ
ಪ್ರತಿ ಮಾತು ಒಲವಿನ ಸಂದೇಶ
ಹೊತ್ತು ತರುತ್ತಿದೆ
ಬದುಕು ಹಿತವೆನಿಸುತ್ತಿದೆ
ಹಕ್ಕಿಯ ಇಂಚರ
ಮಳೆಯ ಧ್ಯಾನಕ್ಕೂ
ಹೊಸ ಅರ್ಥವ್ಯಾಪ್ತಿ ದಕ್ಕುತ್ತಿದೆ…….
**

ನಿನ್ನ ಬೆರಳ
ಸ್ಪರ್ಶದಿಂದ
ಕವಿತೆಗೆ ಹೊಸ
ಅರ್ಥ ದಕ್ಕಿತು
ನಿನ್ನ ಹೆರಳ
ಪರಿಮಳ ನನ್ನೆದೆಯಲ್ಲಿ
ಹೊಸ ತರಂಗಗಳ
ಅಲೆ ಎಬ್ಬಿಸಿತು


About The Author

Leave a Reply

You cannot copy content of this page

Scroll to Top