ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಗುವಾದ ನೆಲ

ಬಿದಲೋಟಿ ರಂಗನಾಥ್

ಬಿತ್ತಿದ ಬೀಜ ಮೊಳಕೆ ಒಡೆದು ನಗುವಾಗ
ಸಿರಿಯು ಮಡಿಲು ತುಂಬಿತು
ಮಗುವಾದ ನೆಲ
ಮಮತೆಯ ಕರುಳ ಹೂ ಬಿಟ್ಟಿತು

ಎದೆಯೊಳಗಿನ ತಲ್ಲಣ ಕಣ್ಣು ಚಾಚಿ ನೋಡುತ್ತಿರಲು
ಖುಷಿಯ ಸಮುದ್ರ ನಕ್ಕು
ನಕ್ಷತ್ರಗಳು ಅಂಗೈಯೊಳಗೆ ಆಡಿದವು

ಮೊಳಕೆಯ ಕುಡಿ ಸಾಗುತಿರಲು
ಮಳೆಯ ಸ್ಪರ್ಶಕೆ ಕಳೆಗಟ್ಟಿ
ಮೆದು ನೆಲದ ಭಾವ ಕಲ್ಲುಗಳೊಂದಿಗೆ ಮಾತಾಡಿತು

ಬೆವರ ಹನಿಯು ಬಿದ್ದು
ಬಿತ್ತು ಹುತ್ತ ನೆಲ ಬಸಿರಾಗುವುದೆಂದರೇ
ಹೊಳೆ ಸೀಳಿನಲಿ ಬೊಗಸೆ ನೀರು ಕುಡಿದ ಸಂತಸ
ಮೈಯೊಳಗೆ ಚಂದ್ರ ನಡೆದ ಗುರುತು

***********

About The Author

3 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top