ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಚೆಲ್ಲಿ ಹೋಯಿತು ಉಸಿರು

( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ)

50+ Timbers Pictures HD | Download Authentic Images on EyeEm

ವಿಜಯಶ್ರೀ ಹಾಲಾಡಿ

ಚೆಲ್ಲಿಹೋಯಿತು ಉಸಿರು…
( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ)

ಗಾಳಿಗೆ ಗಂಧ ತುಂಬುತ್ತಿದ್ದ
ಬಾಗಾಳು ಮರವನ್ನು
ಈ ಬೆಳಗು ಕಡಿಯಲಾಗಿದೆ
ಮರದ ಮಾಂಸ ರಕ್ತ ಚರ್ಮ
ಚೆಲ್ಲಾಡಿದ ಬೀದಿಯೊಳಗೆ
ಇದೀಗ ತಾನೇ ನಡೆದುಬಂದೆ
ನೆಲದಲ್ಲಿ ಜಜ್ಜಿಹೋದ ಹೂ
ಮೊಗ್ಗು ಎಲೆಗಳ ಕಂಬನಿ
ಕುಡಿಯುತ್ತಾ…

ಹಕ್ಕಿ ಕೊರಳಿಗೆ ಕಷಾಯ
ಕುಡಿಸಿದ ಸಂಗಾತಿ ಮರ
ಮಣ್ಣಿನಾಳದ ಕಸುವುಗಳ
ನಕ್ಷತ್ರಗಳಿಗೆ ಅಂಟಿಸಿದ
ಅವಧೂತ ಮರ
ಜೀವಜಂತುಗಳಿಗೆ ಜೀವಜಲ
ಮೊಗೆದ ತಾಯಿಮರ
ಬದುಕಿತ್ತು ಇಲ್ಲೇ ಕಣ್ಣೆದುರಲ್ಲೇ
ಮಾತು ಮೀರಿದ
ಬುದ್ಧಕಾರುಣ್ಯದಂತೆ
ಮಮತೆ ತೋಳುಗಳಂತೆ…

ಚೆಲ್ಲಿಹೋಯಿತು ಉಸಿರು
ಸಾವು ಹೆಪ್ಪುಗಟ್ಟಿದಂತೆ!
******

ಬಾಗಾಳು ಮರ– ಬಕುಲದ ಮರ. ಪಶ್ಚಿಮಘಟ್ಟದ ಸಸ್ಯ. ನವಿರು ಪರಿಮಳದ ಹೂಗಳನ್ನು ಬಿಡುತ್ತದೆ. ಕಾಡಿನ ನಾಶದಿಂದಾಗಿ ಈ ಮರದ ಸಂಖ್ಯೆ ಕ್ಷೀಣಿಸಿದೆ.
ಸು.ರಂ.ಎಕ್ಕುಂಡಿಯವರ ಒಂದು ಕವನಸಂಕಲನದ ಹೆಸರು: ಬಕುಲದ ಹೂಗಳು.
**
ವಿಜಯಶ್ರೀ ಹಾಲಾಡಿ

*

About The Author

1 thought on “ಚೆಲ್ಲಿ ಹೋಯಿತು ಉಸಿರು”

Leave a Reply

You cannot copy content of this page

Scroll to Top