ಕಾವ್ಯಯಾನ

ಕಾವ್ಯಯಾನ

ಮೂಲ ಬಿಂದು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅದ್ಯಾವ ರೂಪದಲ್ಲಿ ಬಂದು ಸೇರಿತ್ತೋ?ಸಣ್ಣ ಸುಳಿವೂ ಇರಲಿಲ್ಲ ನೋಡುಹೆಡೆಯೆತ್ತಿ ಬುಸುಗುಟ್ಟದ ಹೊರತುಇರುವು ತಿಳಿಯುವುದಾದರೂ ಹೇಗೆ?ಮತ್ತೆ ಹಾಗೆ ಗೊತ್ತಾಗುವುದಕ್ಕೂಅದ್ಯಾವತ್ತೂ ಪ್ರಕಟವಾಗಲೂ ಇಲ್ಲ ಬಿಡು. ಅದೂ ಅಲ್ಲದೇ,ಇನ್ಯಾವತ್ತೋ ಹಠತ್ತನೇ ಎದುರಿಗೆ ಬಂದುಹಲ್ಲುಕಿಸಿದು, ನೋಡು ನಾನಿದ್ದೇನೆ; ಅದೂ ನಿನ್ನಲ್ಲೇ!ಅಂತ ಹೆದರಿಸುತ್ತದೆ ಅನ್ನುವ ಕಲ್ಪನೆಯಾದರೂಆವತ್ತು ಯಾರಿಗಿತ್ತು ಹೇಳು? ಯಾವುದೂ ಸುದ್ದಿಯಾಗಲಿಲ್ಲ,ಹಗಲು ರಾತ್ರಿ ಕತ್ತಲು ಬೆಳಕುಮೊಗ್ಗರಳಿದ್ದು ಹೂವಾದದ್ದುಉತ್ತು ಬಿತ್ತ ಮಣ್ಣಲ್ಲಿ ತೆನೆ ತೂಗಿದ್ದುಹಕ್ಕಿ ಹಾರಿದ್ದು ಕಪ್ಪೆ ಕೂಗಿದ್ದುಯಾವುದು ಕೂಡಾ,“ಅವನ ಆಣತಿ ಇಲ್ಲದೇ ಹುಲ್ಲುಕಡ್ಡಿಯೂಅಲ್ಲಾಡುವುದಿಲ್ಲ ಇಲ್ಲಿ…”ಎಲ್ಲದಕ್ಕೂ ಲೆಕ್ಕಾಚಾರವಿದೆ! ಆದರೆ,ಹಗುರವಾಗಿ ತೇಲುತ್ತಾ ಸಾಗುತ್ತಾ ಇದ್ದ ಬೆಳ್ಳಿ ಮೋಡಯಾವತ್ತೋ ಒಮ್ಮೆ ಕಪ್ಪಡರಿ ಘನೀಭೂತವಾಗಿ,ಸುರಿಸುರಿದು ಖಾಲಿಯಾಗುತ್ತದೆ;ಅಂತ ಯಾರಿಗೆ ತಾನೇ ಗೊತ್ತಿತ್ತು?ಎಲ್ಲ ತಡೆಗಳನ್ನು ದಾಟಿ ನಿಂತ ಅದರಆ ಮೂಲ ಬಿಂದುಅಸಲಿಗೆ ಇದ್ದುದಾದರೂ ಎಲ್ಲಿ? ಕಾಳಜಿಯ ಪರದೆಗಳಿಗೆ ಇದ್ದತೂತುಗಳು ಯಾರಿಗೂ ಕಾಣುವುದಿಲ್ಲ;ಅಷ್ಟೂ ಮೈಮರೆಯುತ್ತದೆ ಈ ಲೋಕಎಲ್ಲವೂ ತನ್ನದೇ ಅಧೀನ;ಅನ್ನುವ ಸಂಭ್ರಮದ ಭ್ರಮೆಯಲ್ಲಿಕುಳಿತುಬಿಡುತ್ತದೆ ಮೂಕ! ಎಲ್ಲೂ ನಿಲ್ಲದೇ ಸದಾಹರಿಯುತ್ತಿರುವುದೇ ನಾಕ;ಎಲ್ಲಾ ಗೊತ್ತಿದ್ದೂ,ಸುಮ್ಮನೆ ತಡೆದು ನಿಲ್ಲಿಸುತ್ತದೆಈ ಲೋಕ! ಯಾವುದನ್ನು ಕಟ್ಟಿಹಾಕಬಹುದಿಲ್ಲಿ?ಅದುಮಿಟ್ಟಷ್ಟೂ ಪುಟಿಯುವುದುಕತ್ತರಿಸಿದಷ್ಟೂ ಚಿಗುರುವುದುಬಂಧಿಸಿದಷ್ಟೂ ನೆಗೆಯುವುದು. ದಾಟುವುದೇ ಮನಸ್ಸಿನ ಹುಟ್ಟುಗುಣ;ಬೇಕಾಗಿರುವುದು ಒಂದು ನೆಪ ಮಾತ್ರ. *********

ಕಾವ್ಯಯಾನ Read Post »