ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕೋಲೆ

ಸಾಯಬಣ್ಣ ಮಾದರ

ಬಿಟ್ಟು ಬಿಡಿ
ಬಿಟ್ಟು ಬಿಡಿ
ಕೈ ಕಟ್ಟಿ ನೆಲಕ್ಕೆ ಹಾಕಿ
ಮಂಡಿಯೂರಿ ಕುಳಿತಿರುವರೆ
ಉಸಿರಾಡಲುಗುತ್ತಿಲ್ಲ ಬಿಟ್ಟು ಬಿಡಿ

ನಿಲುತ್ತಿದೆ ವರ್ಣಕ್ಕಾಗಿ ಉಸಿರು ಅಲ್ಲಿ
ಜಾತಿ ಧರ್ಮಕ್ಕಾಗಿ ನಿಲ್ಲುತ್ತಿದೆ ಇಲ್ಲಿ

ಮನುಷ್ಯರು ನಾವು
ನೀವು ಕ್ರೂರಿ ಮೃಗಗಳೆ?

ಚರ್ಮದೊಳಗೆ ರಕ್ತ ಉಂಟು
ಅದರಲ್ಲಿ ವರ್ಣ ಜಾತಿ ಉಂಟೆ?
ಬೇರೆ ಬೀಜಕ್ಕೆ ಹುಟ್ಟಿದ ಮರ ನೀವು
ತಯಾರಾಗಿದೆ ಕಾಲವೇ ಕಡಿಯಲು

ಮಸಣದಲ್ಲಿ ಮಾನವೀಯತೆ ಹೂತ್ತು
ಮನುಷ್ಯತ್ವವೆ ಮೂಲೆಗೊತ್ತಿ
ಜಾತಿ ಎಂಬ ಶಿಖರ ಏರಿ
ವರ್ಣದ ಗಿರಿ ಮುಟ್ಟಿ
ಅರ್ಚುವ ಮೂರ್ಖರೇ
ಯಾವ ಜೀವಿ ನೀವು

ನೀರಿಗಾಗಿ ಕೆರೆ ಮುಟ್ಟಿದ ಹೆಣ್ಣನ್ನು
ಕಟ್ಟಿ ಬಡಿದು ಕೇಕೆ ಹಾಕಿದವರು ನೀವು
ನೀರು ಬೆಳಕು ಗಾಳಿ ಕೇಳಿದೀಯಾ ಜಾತಿ
ಬಣಕ್ಕೆ ಬೇದ ಮೊದಲೇ ಇಲ್ಲ

ಧರ್ಮದ ಹೆಂಡ ಕುಡಿದು
ಜಾತಿ ಮತ್ತೆರಿಸಿಕೊಂಡು
ಎಷ್ಟು ದಿನ ಕುಣಿಯುವಿರಿ
ದೇವರೇ ಹೆಣವಾಗಿ ಹೆಗಲೇರಿರುವಾಗ
ಎಷ್ಟು ದಿನ ಅಡಗಿವಿರಿ ಬಂಕರಿನಲ್ಲಿ

ಎಷ್ಟಂತ ಆಡುವಿರಿ ನಲಿ-ಕಲಿ ಆಟ
ಸನಿಹದಲ್ಲಿದೆ ಅಂತ್ಯ
ಮನುಷ್ಯರಾಗಲು ಮರೆಯದಿರಿ
ಇಲ್ಲವೆ ಭೂಮಿಯಿಂದ ನಿರ್ಗಮೀಸಲು ಸಿದ್ದರಾಗಿ !!

     ಸಾಯಬಣ್ಣ ಮಾದರ

About The Author

4 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top