ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಮೂಲ ಕವನ ಡಾ.ಶಿವಕುಮಾರ್ ಮಾಲಿಪಾಟೀಲ,ಗಂಗಾವತಿ ಅವರ “ದೇವರು ಹೇಳುತ್ತಿದ್ದಾನೆ ವಿಶ್ರಾಂತಿ ಪಡೆಯಿರಿ” ಇಂಗ್ಲೀಷಿಗೆ ನಾಗರೇಖಾ ಗಾಂವಕರ್ ಸಂಗಾತಿಯ ಓದುಗರಿಗೆ ಮೂಲ ಮತ್ತು ಅನುವಾದಿತ ಕವಿತೆಗಳೆರಡನ್ನೂ ಇಲ್ಲಿ ನೀಡಿದೆ ದೇವರು ಹೇಳುತ್ತಿದ್ದಾನೆ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ ಗುಡಿ, ಗುಂಡಾರ, ಮಸೀದಿ, ಚರ್ಚೆಗಳಿಗೆ ಬಹಳಷ್ಟು ಅಲೆದಿದ್ದಿರಿ, ಮನವಿಲ್ಲದೆ ನನ್ನನ್ನು ಬಹಳಷ್ಟು ಹುಡುಕಿದ್ದಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ ಕಾಯಕ ಬಿಟ್ಟು ಸಾಮೂಹಿಕ ಭಜನೆ, ಪ್ರಾರ್ಥನೆ ಏನೇನೋ ಜಾತ್ರೆ ,ಉತ್ಸವಗಳನ್ನು ಮಾಡಿದಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಅನ್ನ ,ಆಹಾರವಿದ್ದರೂ ಎಲ್ಲಾ ಪ್ರಾಣಿಗಳನ್ನು ತಿಂದು ತೇಗಿದಿರಿ ,ಅನ್ನ ಚೆಲ್ಲಿದಿರಿ, ಈಗ ಮನೆಯಲ್ಲಿಯೇ ತಿನ್ನುತ ವಿಶ್ರಾಂತಿ ಪಡೆಯಿರಿ. ಒಂದು ನಿಮಿಷವು ಸಮಯವಿಲ್ಲವೆಂದು ಒತ್ತಡದಲ್ಲಿ ಅಲೆಯುತ್ತಿದ್ದಿರಿ, ಅನ್ನ ನಿದ್ದೆ ಇಲ್ಲದೆ ಆಸ್ತಿ ಮಾಡಿದ್ದಿರಿ ಸಾಕೀಗ ನೀವು ವಿಶ್ರಾಂತಿ ಪಡೆಯಿರಿ. ಅತಿ ಆಸೆಗೆ ಬೆನ್ನು ಬಿದ್ದು ಸಜೀವಗಳನ್ನು ಸುಟ್ಟು ಸುಟ್ಟು ನಿರ್ಜೀವಗಳನ್ನು ಗಳಿಸಿ, ಗಳಿಸಿ ಇದ್ದಿದ್ದರಲ್ಲಿ ತೃಪ್ತಿ ಪಡದೆ ಅತೃಪ್ತರಾಗಿ ಅಂತರಂಗವ ಅಶುದ್ಧ ಮಾಡಿ ಬದುಕಿದ ನೀವೀಗ ವಿಶ್ರಾಂತಿ ಪಡೆಯಿರಿ. ಸ್ವಾರ್ಥದ ರಾಜಕಾರಣ, ಲಂಚದ ಉದ್ಯೋಗ, ವ್ಯಾಪಾರದ ಶಿಕ್ಷಣ, Marks ಒತ್ತಡದಲಿ ಮಕ್ಕಳು, ಹೆತ್ತವರು, ಗುರುಗಳು. ನಿರುದ್ಯೋಗ ಉತ್ಪಾದಿಸುವ ವಿಶ್ವ ವಿದ್ಯಾಲಯಗಳು ಸಾಕು ನೀವು ವಿಶ್ರಾಂತಿ ಪಡೆಯಿರಿ. ಪರಿಸರದ ಮೇಲೆ ನಿರಂತರ ದಾಳಿ ಮಾಡಿ, ವನ್ಯಜೀವಿಗಳನ್ನು ಕೊಂದಿರಿ, ಈಗ ನೀವು Zoo ನಲ್ಲಿ ಇದ್ದಿರಿ ಪ್ರಾಣಿ, ಪಕ್ಷಿಗಳನ್ನು ಮನೆಯಿಂದಲೇ ನೋಡುತ್ತ ವಿಶ್ರಾಂತಿ ಪಡೆಯಿರಿ. ಒಂದು ಬಸ್, ಟ್ರೇನ್, ಪ್ಲೈಟ್ Miss ಆದರೆ tension ತೊಗೊಂಡಿರಿ. ಜೀವನ ಮುಗಿದೆ ಹೋಯಿತು ಅಂದುಕೊಂಡಿರಿ ಅವು ಎಲ್ಲವು ಅಲ್ಲೆ ನಿಂತಲ್ಲೇ ನಿಂತಿವೆ ನೀವೀಗ ವಿಶ್ರಾಂತಿ ಪಡೆಯಿರಿ. ಟ್ರಾಫಿಕ್ ನಲ್ಲಿ ಹೆತ್ತವರು , ಪ್ಲೇ ಹೋಂ ನಲ್ಲಿ ಕಂದಮ್ಮಗಳು, ವೃದ್ದಾಶ್ರಮದಲ್ಲಿ ಅನಾಥಾಶ್ರಮದಲ್ಲಿ ಅಜ್ಜ ಅಜ್ಜಿ , ನಿಮ್ಮ ಮುಖ ಒಬ್ಬರನೊಬ್ಬರು ನೋಡುತಾ ನೀವೀಗ ವಿಶ್ರಾಂತಿ ಪಡೆಯಿರಿ. ಧರ್ಮದ ಹೆಸರಲ್ಲಿ ಅಧರ್ಮ, ಅತ್ಯಾಚಾರ ಎಸಗಿದಿರಿ, ನಮ್ಮ ಧರ್ಮವೇ ಶ್ರೇಷ್ಠ ಎಂದು ಕೂಗಾಡಿದಿರಿ ಜಗತ್ತನ್ನೇ ನಮ್ಮ ಧರ್ಮ ಆಳಬೇಕು ಎಂದಿರಿ ಭ್ರಮೆಯಲ್ಲಿ ಚೀರಾಡಿದ್ದು ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೊಟ್ಟಿರಿ ವರದಕ್ಷಿಣೆಗೆ ಹೆಣ್ಣನ್ನು ಸುಟ್ಟಿರಿ ಭ್ರೂಣ ಹತ್ಯೆ ಮಾಡಿದಿರಿ ಹೆಣ್ಣನ್ನು ದೇವರೆನ್ನುತ ಗುಡಿ ಹೊರಗೆ ಇಟ್ಟಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಶ್ರೇಷ್ಠತೆಯ ಮದದಲ್ಲಿ ಜಾತಿ ಧರ್ಮದ ಗೋಡೆ ಕಟ್ಟುತ್ತ ಅಸಮಾನತೆಯಿಂದ ನಡೆದಿರಿ.. ಅಧಿಕಾರದ ಅಹಂಕಾರದಲ್ಲಿ ಅನ್ನದಾತನ ಮರೆತಿರಿ ಈಗ ಅನ್ನಕ್ಕಾಗಿ ಕೈ ಚಾಚುತ ವಿಶ್ರಾಂತಿ ಪಡೆಯಿರಿ. ದೇಶ ಭಕ್ತಿ ಹೆಸರಲ್ಲಿ ಬಡವರ ಮಕ್ಕಳನ್ನು ಗಡಿಯಲ್ಲಿ ನಿಲ್ಲಿಸಿ ಅತ್ತ ಶಾಂತಿ ಮಾತುಕತೆ ಎನ್ನುತ್ತಾ… ಇತ್ತ ಗಡಿಯಲ್ಲಿ ಯುವಕರನ್ನು ‌ಕೊಲ್ಲುತ್ತಾ , ಅವರ ಮಕ್ಕಳನ್ನು , ಹೆಂಡತಿಯನ್ನು ಅನಾಥ ಮಾಡುವ ಆ ಕಟುಕ ಗಡಿಗಳು ನಿಶ್ಯಬ್ದ ವಾಗಿವೆ ನೀವು ವಿಶ್ರಾಂತಿ ಪಡೆಯಿರಿ. ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುತ ಸ್ವರ್ಗ ಸೇರುತ್ತೇನೆ ಎನ್ನುವ ನರಹಂತಕರ ಬಣ್ಣ ಬಯಲಾಗಿದೆ ನಿಮ್ಮ ಮದ್ದು ಗುಂಡುಗಳ ಜೊತೆಗೆ ವಿಶ್ರಾಂತಿ ಪಡೆಯಿರಿ. ಭವಿಷ್ಯ ಹೇಳುವವರ ಭವಿಷ್ಯ ಈಗ ನನ್ನ ಕೈಯಲ್ಲಿದೆ , ದೇವರು, ಧರ್ಮದ ಹೆಸರಲ್ಲಿ ದುಡ್ಡು ಮಾಡಿದವರ ಪಟ್ಟಿ ನನ್ನಲ್ಲಿದೆ… ನನ್ನ ಪಟ್ಟಿ ಈಗ ಬಿಡುಗಡೆ ಮಾಡುತ್ತೇನೆ ನೀವೀಗ ವಿಶ್ರಾಂತಿ ಪಡೆಯಿರಿ. ಎಲ್ಲಾ ಗೆದ್ದೆ ಎನ್ನುತ್ತ ಅಟ್ಟಹಾಸದಿ ಮೆರೆದ ನೀವು ಈಗ ನಿಮ್ಮ ‌ಪ್ರಾಣ ಉಳಿದರೆ ಸಾಕು ಎನ್ನುತ ಅಲ್ಲೆ ನನ್ನನ್ನು ನೆನೆಯುತ್ತ ವಿಶ್ರಾಂತಿ ಪಡೆಯಿರಿ. ******* Now God is telling its enough and relax You have travelled a lot to the temples , mosques and churches searched for me without true devotion Now its enough and relax. Neglected your jobs and engrossed in community bhajans, prayers and in fairs and festivals Now its enough and relax. You butchered the animals even though you have rice and food. spilled the food carelessly. Now stay at home, eat and relax You were wandering under the pressure of not having enough time to earn. sacrificed your food and sleep and earned possession. Now its enough and relax. pursuing your desire you burnt the living and earned the non living things not being contented what you had but you lived a life of dissatisfaction and defiled your inward purity Now its enough and relax Selfish politics bribery in jobs. business like education children, parents and teachers all in the stress of high score . unemployment generating Universities Now its enough and relax You exploited the nature And destroyed the wildlife. Now you are in a zoo. watch the birds and animals through your houses and relax. You got tensed when you missed your bus, train or plight. and thought life almost over. all the things are there where they were So relax now. Parents in traffic kids in a playhome grandparents in an old age home or orphanages so now you both looking only at each other and relax. In the name of religion you commited mistakes and you cried out loud our religion is the greatest’ and preached out ‘our religion must rule the world’ Now stop this screaming in dillusion and relax. You divorced for petty reasons burnt woman alive for dowry. commited Feticide. you claimed ‘women are goddess’ but kept her out of the shrine. now its enough and relax. You built a barrier of caste and creed in a mood of hierarchy and maintained inequality. forgot the farmer with swollen head of power. Now stretch your arms for rice and relax In the name of petriotism the young ones of a poor family at the Borders. Inducing peace talk in one side. But an end to the life of youngsters at the borders on an another side and orphaned their family Those brutal borders are now silent. So you relax. In the name of religion, the pretenders who thought they could go to the heaven through the extermination of innocents, their true colour is demasked Now its enough and with your guns and bullets , you relax. Now the future of the foretellers is in my hand. The con artists who accumulated money in the name of devine, their list is with me. Now I release this list and you relax. You disntict yourself as you’re the conqueror of everything. But now you’re begging for your life. Now stay there where you are and mediate me and relax. ****************

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಕೊರೊನ ಕಾಲದಲ್ಲಿ… ಶ್ವೇತಾ ಎಂ ಯು. ಕರೋನಾ ಕಾಲದಲ್ಲಿ ಕೂತುಂಡು ಮೈ ಭಾರ ಹೆಚ್ಚಿಸಿದವರ ನಡುವೆ ದುಡಿಮೆಯಿಲ್ಲದೆ ಜೀವಭಯದಿಂದ ಬದುಕೊ ಹಠವು ನಾಳೆ ಹೇಗೆಂದು ಸೊರಗಿದವರು ಅನಾಯಾಸವಾಗಿ ಸಿಕ್ಕ ರಜೆಗೆ ಹಾಯಾಗಿ ಪ್ರವಾಸ ಮಾಡಲಾಗದೆ ಮರುಗುತಿರುವ ಮಂದಿಯ ನಡುವೆ ತವರ ಸೇರಿಕೊಳ್ಳಲು ಉಟ್ಟ ಬಟ್ಟೆಯಲಿ ಬರಿಗಾಲಲ್ಲಿ ನಡೆದು ಬೀದಿ ಪಾಲಾದವರು ಚೆಂದ ಸೀರೆಯುಟ್ಟು ತುಟಿಗೊಂದಿಷ್ಟು ಹೆಚ್ಚೇ ರಂಗು ಬಳಿದ ಲಲನೆಯರು ರಾಜಕೀಯ ಭವಿಷ್ಯವು ಲೆಕ್ಕಾಚಾರವು ಸಹಾಯ ಹಸ್ತ ಚಾಚಿ ತೆಗೆದ ಸೆಲ್ಫಿಗೆ ನಗುವ ಚೆಲ್ಲಿ, ಕೈ ಚಾಚಿದ ನೋವ ಮರೆತು ಹಸಿದೊಡಲ ತುಂಬಲು ಕಾದುನಿಂತಿರುವವರು ಕುಡಿದು ಮೋಜು ಮಸ್ತಿ ಖಾಲಿ ರೋಡು ಜಾಲಿ ರೈಡು ದಕ್ಕಿದ ಪಾಸಿಗೆ ತುಂಬಿದ ಜೇಬು ತುಂಬು ಗರ್ಭಿಣಿ ಹತ್ತಾರು ಮೈಲಿ ನಡೆದು ಉಸಿರ ಬಿಡುವಾಗ ಅಯ್ಯೋ! ಏನದ ಯಾವುದೇ ಚೆಕ್ ಪೋಸ್ಟು ಮನೆಯಲ್ಲಿರಿ ಸುರಕ್ಷಿತರಾಗಿರಿ ಎಂದರೆ ರಸ್ತೆಗಿಳಿದು ಗೊತ್ತು ಗುರಿಯಿಲ್ಲದೆ ಸುಖಾಸುಮ್ಮನೆ ಅಲೆದವರ ನಡುವೆ ತಮ್ಮವರ ಸಾವು ನೋವಿಗೂ ಸ್ಪಂದಿಸಲಾರದೆ ಕ್ವಾರಂಟೈನ್ ಗೆ ಸಿಲುಕಿದ ಬಡಪಾಯಿಗಳು ದೊಡ್ಡ ಕಾರೊಳಗಿದ್ದ ಸೆಲೆಬ್ರಿಟಿ ಮಾಡಿದ ಅಪಘಾತಕ್ಕೆ ಚಿಕ್ಕದೆ ಒಂದು ಕೇಸು ದೊಡ್ಡವರ ಕಾನೂನಿಗೆ ಹೆದರಿ ರೈಲು ಹಳಿಗಳ ಮೇಲೆ ದಣಿವಾರಿಸಿಕೊಳ್ಳುವ ಧಾವಂತದಲ್ಲಿ ಕಟ್ಟಿಟ್ಟರೊಟ್ಟಿ ಮರೆತು ಪ್ರಾಣ ತೆತ್ತು ಕರೋನ ಕಾಲದಲ್ಲಿ ಸುದ್ದಿಯಾದವರು ನನ್ನ ಜನ. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಹೇಮಗಂಗಾ ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ? ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ? ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತ ಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ? ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ? ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ? ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆ ಬೆದರಿದ ಮನ ದೃಢತೆ ಕಳೆದುಕೊಂಡಿದೆ ಮರಳಿ ಊರ ಸೇರುವುದು ಹೇಗೆ ? ತಿಳಿದಿಲ್ಲ ಹೊಂಚು ಹಾಕಿದ ಹದ್ದಿನಂತೆ ಎಂದೆರಗುವುದೋ ಎಂದು ಮದ್ದಿಲ್ಲದ ಮಹಾಮಾರಿ ಹೆದರಿಸಿದೆ ಮರಳಿ ಊರ ಸೇರುವುದು ಹೇಗೆ ? ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಬದುಕಿಗೆ ಅರ್ಥ ಕಲ್ಪಿಸಲು ಉಲಿದೆ ನೀ ಬರಲೇ ಇಲ್ಲ ಒಲವಿಗೆ ಬಲವ ತುಂಬಲು ಕೂಗಿದೆ ನೀ ಬರಲೇ ಇಲ್ಲ ಬೆವರಿನ ಅಂಬಲಿ ಉಂಡು ಒಡಲ ಹಂಬಲ ತಣಿಸುವೆ ಬಾ ಪ್ರೇಮದ ಎಲ್ಲೆ ಮೀರಲು ಗೋಗರೆದೆ ನೀ ಬರಲೇ ಇಲ್ಲ ಇರುಳ ಕಾಲುದಾರಿ ಕತ್ತಲು ಮೆತ್ತಿ ಮೈ ಮುರಿಯುತಿದೆ ಭಾವನೆಗಳ ಬೆಳಕಲಿ ಒಂದಾಗಲು ಕರೆದೆ ನೀ ಬರಲೇ ಇಲ್ಲ ಮದಿರೆಯಲಿ ಅಧರ ಕಳಚಿ ನೂರು ನವಿಲು ಕುಣಿದಂತಾಗಿದೆ ಭಾರವಾದ ತನು ಹಗುರುಗೊಳಿಸಲು ಕೈ ಚಾಚಿದೆ ನೀ ಬರಲೇ ಇಲ್ಲ ನೇಸರ ಮಗ್ಗಲು ಬದಲಿಸುವ ಮುನ್ನ ಮರಳಿ ಬರುವ ನೀರಿಕ್ಷೆ ಇತ್ತು ಪಾದ ಮುತ್ತಿಕ್ಕಿದ ಎದೆಯ ಹೊಸ್ತಿಲು ಕಾಯುತಿದೆ ನೀ ಬರಲೇ ಇಲ್ಲ ಸಾಚಿಯ ಆ ದಿನಗಳ ನೆನಪು ಕುಡಿದು ತೂರಾಡುತಿವೆ ತುಟಿಯ ಮೊಗ್ಗಿಗೆ ಮಧು ಸವರಲು ಕಾದೆ ನೀ ಬರಲೇ ಇಲ್ಲ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಈರಪ್ಪ ಬಿಜಲಿ ಕಗ್ಗೊಲೆಯಾದ ಕನಸುಗಳನು ಗಂಟುಕಟ್ಟಿ ಹೊತ್ತುಕೊಂಡು ನಡೆದಿದ್ದೇವೆ ಹತ್ಯೆಯಾದ ಮನಸುಗಳನು ವಸ್ತ್ರದಲಿ ಸುತ್ತಿಕೊಂಡು ನಡೆದಿದ್ದೇವೆ ।। ವಿಧಿಯಾಟಕೆ ಬದುಕು ಬಲಿಯಾಗಿ ಕೊನೆಯಾದಂತೆ ಕಾಣುತಿದೆ ಬೂಟಾಟಿಕೆ ಮಾತಿಗೆ ಮರುಳಾಗಿ ಬಾಳಬಂಡಿ ಹತ್ತಿಕೊಂಡು ನಡೆದಿದ್ದೇವೆ ।। ಶ್ರಮಿಕರು ಸತ್ತರು ನೆತ್ತರು ಬೀದಿಬೀದಿಗೆಲ್ಲ ನದಿಯಾಗಿ ಹರಿದಿದೆ ಧನಿಕರು ಮೂಗಿಗೆ ಸವರಿದ ತುಪ್ಪವನು ಮೆತ್ತಿಕೊಂಡು ನಡೆದಿದ್ದೇವೆ ।। ಹೊತ್ತೊತ್ತಿಗೂ ಅನ್ನಆಹಾರ ನೀರಿಲ್ಲದೇ ಕ್ಷಣಕ್ಷಣವು ಬಳಲಿದೇವು ಉಸಿರಳಿವ ಮುನ್ನ ಗೂಡುನೆನೆದು ಮನೆ ಸೇರುವಾಸೆ ಕಟ್ಟಿಕೊಂಡು ನಡೆದಿದ್ದೇವೆ।। ಬೆಂದುಬೆಂಡಾದ ಜೀವಿಗಳ ಮೊಗದಲಿ ಬಿಜಲಿ ಮಿನುಗಿ ಒಳಿತಾಗಲಿ ನಡುನೀರಲಿ ನಿಂತವರು ದಡಸೇರಲು ಮುತ್ತಿಕೊಂಡು ನಡೆದಿದ್ದೇವೆ *****

ಕಾವ್ಯಯಾನ Read Post »

You cannot copy content of this page

Scroll to Top